ಎಂ.ಕೆ.ಗಣಪತಿ ಆತ್ಮಹತ್ಯೆ, ಎಡಿಜಿಪಿ ಎ.ಎಂ.ಪ್ರಸಾದ್ ಹೇಳಿದ್ದೇನು?
ಬೆಂಗಳೂರು, ಜುಲೈ 14 : 'ಎಂ.ಕೆ.ಗಣಪತಿ ಅವರು ನನ್ನ ಕೈ ಕೆಳಗೆ ಕೆಲಸ ಮಾಡಿರುವುದು ಸತ್ಯ. ನಾನು ಅವರಿಗೆ ಯಾವುದೇ ಕಿರುಕುಳ ಕೊಟ್ಟಿಲ್ಲ' ಎಂದು ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರು
ಐಜಿ
ಕಚೇರಿ
ಡಿವೈಎಸ್ಪಿ
ಎಂ.ಕೆ.ಗಣಪತಿ
ಆತ್ಮಹತ್ಯೆ
ಪ್ರಕರಣದ
ಬಳಿಕ
ಮೊದಲ
ಬಾರಿಗೆ
ಗುರುವಾರ
ಮಾಧ್ಯಮಗಳ
ಜೊತೆ
ಎಡಿಜಿಪಿ
ಎ.ಎಂ.ಪ್ರಸಾದ್
ಮಾತನಾಡಿದರು.
ವಿಧಾನಸೌಧದಲ್ಲಿ
ಮಾತನಾಡಿದ
ಅವರು,
'ಗಣಪತಿ
ಅವರ
ಆತ್ಮಹತ್ಯೆ
ನನಗೆ
ದುಃಖ
ತಂದಿದೆ.
ತನಿಖೆಯ
ವಿಚಾರದಲ್ಲಿ
ಸರ್ಕಾರವೇ
ತೀರ್ಮಾನ
ಮಾಡುತ್ತದೆ'
ಎಂದು
ಹೇಳಿದರು.
[ವಿಡಿಯೋ
-
ಡಿವೈಎಸ್
ಪಿ
ಗಣಪತಿ
ಕಡೇ
ಸಂದರ್ಶನ]
'ನಾನು ಗಣಪತಿಗೆ ಅವರಿಗೆ ಯಾವುದೇ ಕಿರುಕುಳ ಕೊಟ್ಟಿಲ್ಲ. ನನ್ನ ಕೈ ಕೆಳಗೆ ಗಣಪತಿ ಕೆಲಸ ಮಾಡಿರುವುದು ಸತ್ಯ. ಕೇವಲ ಮೂರು ತಿಂಗಳು ಮಾತ್ರ ಗಣಪತಿ ನನ್ನ ಕೈಳಗೆ ಕೆಲಸ ಮಾಡಿದ್ದಾರೆ. ಆಗ ನಾನು ಅವರಿಗೆ ಯಾವುದೇ ಕಿರುಕುಳ ನೀಡಿಲ್ಲ' ಎಂದರು. [ಸಚಿವ ಕೆಜೆ ಜಾರ್ಜ್ ಸಮರ್ಥಿಸಿಕೊಂಡ ಸಿಎಂ]
ಡಿವೈಎಸ್ಪಿ ಎಂ.ಕೆ.ಗಣಪತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 'ನನಗೆ ಏನಾದರೂ ಆದರೆ ಅದಕ್ಕೆ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರೇ ಕಾರಣ' ಎಂದು ಹೇಳಿದ್ದರು.
ಜುಲೈ 7ರಂದು ಎಂ.ಕೆ.ಗಣಪತಿ ಅವರು ಮಡಿಕೇರಿಯ ವಿನಾಯಕ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿತ್ತು. ಬುಧವಾರ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಆದರೆ, ಪ್ರತಿಪಕ್ಷಗಳು ಸಿಬಿಐ ತನಿಖೆಗಾಗಿ ಪಟ್ಟು ಹಿಡಿದು ಅಹೋರಾತ್ರಿ ಧರಣಿ ನಡೆಸುತ್ತಿವೆ.