ಫ್ಯಾಷನ್, ಟ್ರಾವೆಲ್ನಂತೆ ಕೃಷಿ ಇನ್ಫ್ಲುಯೆನ್ಸರ್ಗಳು ಯಾಕಿಲ್ಲಾ? ಚರ್ಚೆ ಹುಟ್ಟುಹಾಕಿದ ಶ್ರೀಪಡ್ರೆ ಪೋಸ್ಟ್
ಬೆಂಗಳೂರು: ಪ್ರಚಲಿತದಲ್ಲಿರುವ ಹಾಗೂ ಹೆಚ್ಚು ಪರಿಣಾಮಕಾರಿಯಾದ ಸಾಮಾಜಿಕ ಜಾಲತಾಣದಲ್ಲಿ 'ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್', 'ಟ್ರಾವೆಲ್ ಇನ್ಫ್ಲುಯೆನ್ಸರ್' ಸೇರಿ ಅನೇಕರನ್ನು ನೋಡುತ್ತೇವೆ. ಅನೇಕ ವಿಷಯಗಳ ಮೇಲೂ ವಿಡಿಯೋ, ರೀಲ್ಸ್ ಮಾಡಿ ವಿಷಯ ಪ್ರಸಾರ ಮಾಡುವ, ಮಾಹಿತಿ ನೀಡುವ ಇನ್ಫ್ಲುಯೆನ್ಸರ್ಗಳು ಇದ್ದಾರೆ. ಆದರೆ ನಿತ್ಯ ಅಗತ್ಯವಾಗಿರುವ ಆಹಾರದ ಸುರಕ್ಷತೆ, ಗುಣಮಟ್ಟದ ಆಹಾರ, ಅದನ್ನು ಬೆಳೆಯುವ ಕೃಷಿ ಬಗ್ಗೆ ಅದೆಷ್ಟು ಜನರು ಇನ್ಫ್ಲುಯೆನ್ಸರ್ಗಳು ಇದ್ದಾರೆ ಎಂದು ಹಿರಿಯ ಕೃಷಿ ಬರಹಗಾರ, ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆ ಫೇಸ್ಬುಕ್ ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಈ ಪೋಸ್ಟ್ ಇದೀಗ ಚರ್ಚೆ ಹುಟ್ಟುಹಾಕಿದೆ.
ದೇಶದ ಬೆನ್ನೆಲುಬು ಆಗಿರುವ ರೈತ ಮಾಡುವ ಕೃಷಿಯಿಂದಲೇ ದೇಶಕ್ಕೆ ಆಹಾರ ಪೂರೈಕೆ ಆಗುತ್ತದೆ. ಕೃಷಿಯೇ ದೇಶದ ಜನರ ಜೀವಾಳ. ಇದೆಲ್ಲ ಗೊತ್ತಿದ್ದರು ಕೃಷಿಗೆ ಸಂಬಂಧಿಸಿದ ಇನ್ಫ್ಲುಯೆನ್ಸರ್ ಮತ್ತವರ ವಿಡಿಯೋಗಳನ್ನು ಕಾಣುವುದು ತುಂಬಾ ಕಡಿಮೆ. 'ನಾವು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (ಪ್ರಭಾವಿ), ಪ್ರಯಾಣ ಇನ್ಫ್ಲುಯೆನ್ಸರ್ ಸೇರಿ ಮುಂದಾದ ಇನ್ಫ್ಲುಯೆನ್ಸರ್ಗಳನ್ನು ಹೊಂದಿದ್ದೇವೆ. ಆದರೆ ಕೃಷಿ ಪ್ರಭಾವಿಗಳು, ಆಹಾರ ಸುರಕ್ಷಿತ ಕುರಿತಂತೆ ಪ್ರಭಾವಿಗಳು ಯಾಕಿಲ್ಲ?' ಎಂದು ಪ್ರಶ್ನಿಸಿದ್ದಾರೆ. ಅವರ ಈ ಪೋಸ್ಟ್ಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಒಟ್ಟಾರೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.

ಲೈಕ್ಸ್, ವಿವ್ಸ್ಗೆ ವಿಷಯ ಆಯ್ಕೆ ಬೇರೆಯದ್ದೇ ಇರುತ್ತದೆ
ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 'ಈ ಎಲ್ಲಾ ಇನ್ಫ್ಲುಯೆನ್ಸರ್ ತಮಗೆ ಬರುವ ಲೈಕ್ಗಳು ಮತ್ತು ಶೇರ್ಗಳ ಮೇಲೆ ಅವಲಂಬಿತರಾಗಿದ್ದಾರೆ. ಟಿವಿ ಚಾನೆಲ್ಗಳಂತೆ ಇನ್ಫ್ಲುಯೆನ್ಸರ್ಗಳು ಕೂಡ ಲೈಕ್ಗಳನ್ನು ಬರುವಂತಹ ವಿಷಯಗಳನ್ನು ಆಯ್ಕೆ ಮಾಡುತ್ತಾರೆ. ಲೈಕ್ ಪಡೆಯಲು ಮಾತ್ರ ಹೆಚ್ಚಿನವರು AI ಮೂಲಕ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಾರೆ' ಎಂದು ಒಬ್ಬರು ಹೇಳಿದ್ದಾರೆ.
'ನಮ್ಮಲ್ಲಿ ಕೃಷಿ ಪ್ರಭಾವಿಗಳು ಇಲ್ಲ ಎಂದಲ್ಲ, ಆದರೆ ಇಂದು ದೇಶಕ್ಕೆ ಅಗತ್ಯವಿರುವ ಪ್ರಮುಖ ವಲಯ ಇದಾಗಿದ್ದು, ನಿಜವಾದ ಕೃಷಿ ಪ್ರಭಾವಿಗಳು ಬೇಕಾಗಿದ್ದಾರೆ' ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಕೃಷಿಗೆ ಸೇರಿ ಪ್ರಮುಖ ವಲಯಗಳ ಇನ್ಲ್ಫುಯೆನ್ಸರ್ಗಳನ್ನು ಹುಡುಕಬೇಕಿದೆ. ಮತ್ತೊಂದೆಡೆ ಕೃತಕ ಬುದ್ಧಿಮತ್ತೆ (AI) ತನ್ನದೇ ಆದ ಪ್ರಭಾವ ಹೊಂದಿದೆ' ಎಂದು ಮೂರನೇಯವರು ತಿಳಿಸಿದ್ದಾರೆ.
'ನಾನು ಭೇಟಿಯಾದ ವ್ಯಕ್ತಿಗಳಲ್ಲಿ ಒಬ್ಬರು ಅಭಿಜಿತ್ ಬಿ. ಅವರು ಕೃಷಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಪ್ರಸಾರ ಮಾಡುತ್ತಾರೆ. ಅಗತ್ಯವುಳ್ಳವರಿಗೆ ತಮ್ಮ ವಿಡಿಯೋ ಮೂಲಕ ಮಾಹಿತಿ ನೀಡುತ್ತಾರೆ. ಹೊಸ ತಂತ್ರಜ್ಞಾನಗಳು ಮತ್ತು ವಿವಿಧ ನೀರಾವರಿ ವಿಧಾನಗಳ ಸಾಧ್ಯತೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುತ್ತಾರೆ. ಅವರ ವಿಷಯವು ಉಪಯುಕ್ತವಾಗಿದೆ ಎಂದು ನಾಲ್ಕನೇಯವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
-
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Kannada: ನಮ್ಮ ರಕ್ತವೇ ಕನ್ನಡ, ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
Political Trends: ನಿಂದಾ ರಾಜಕೀಯದ ದಾರಿ ತಪ್ಪಿದ ಪ್ರಜಾತಂತ್ರ: ಯಾವ ಮನೆಯ ಸಾಸಿವೆ ತರ ಹೊರಟಿದ್ದೀರಿ: ರಾಜಾರಾಂ ತಲ್ಲೂರು ಬರಹ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ











Click it and Unblock the Notifications