ಪದಕ ಹಿಂತಿರುಗಿಸಲು ಸಂಸದ ರಾಜೀವ್ ಚಂದ್ರಶೇಖರ್ ಮನವಿ
ನವದೆಹಲಿ, ಸೆಪ್ಟೆಂಬರ್ 28: ಏಕಶ್ರೇಣಿ-ಏಕ ಪಿಂಚಣಿ ಜಾರಿಗೆ ಒತ್ತಾಯಿಸಿ ಸೇವಾ ಪದಕ ಹಾಗೂ ಶೌರ್ಯ ಪದಕಗಳನ್ನು ಹಿಂತಿರುಗಿಸಿದ್ದ ನಿವೃತ್ತ ಹಾಗೂ ಹಿರಿಯ ಸೈನಿಕರಿಗೆ ಅವುಗಳನ್ನು ಗೌರವಯುತವಾಗಿ ಹಿಂತಿರುಗಿಸಬೇಕು ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಮನವಿ ಮಾಡಿ, ಪತ್ರ ಬರೆದಿದ್ದಾರೆ.
ಬೆಂಗಳೂರು ಕೆರೆಗಳ ಬಗ್ಗೆ ತಾತ್ಸಾರ ಬೇಡ: ರಾಜೀವ್ ಚಂದ್ರಶೇಖರ್
ಸೇನಾ ಮುಖ್ಯಸ್ಥರಾದ ನೀವು, ಒಂದು ಕಾರ್ಯಕ್ರಮವನ್ನು ಮಾಡಿ ಆ ಎಲ್ಲ ಪದಕಗಳನ್ನು ಗೌರವಯುತವಾಗಿ ಹಿಂತಿರುಗಿಸುವಂತಾಗಬೇಕು ಎಂದು ವಿನಂತಿ ಮಾಡಿದ್ದಾರೆ. "ಪದಕಗಳನ್ನು ಹಿಂತಿರುಗಿಸಿದ ಹಲವರು ವಯಸ್ಸಿನಲ್ಲಿ ಹಿರಿಯರಿದ್ದಾರೆ. ಪದಕಗಳನ್ನು ಹಿಂತಿರುಗಿಸಿದರೆ ಅವರ ಕುಟುಂಬದವರು ಗೌರವವಾಗಿ ಅದನ್ನು ಜೋಪಾನ ಮಾಡುತ್ತಾರೆ ಎಂದಿದ್ದಾರೆ.
ನಿಸ್ವಾರ್ಥವಾದ ಸೇವೆ ಹಾಗೂ ತ್ಯಾಗವನ್ನು ಗುರುತಿಸಿ ದೇಶದ ಕಡೆಯಿಂದ ಅವರಿಗೆ ಪದಕಗಳನ್ನು ನೀಡಲಾಗಿದೆ. ದೇಶದ ಸಾರ್ವಭೌಮತೆಯನ್ನು ಉಳಿಸಲು ಅವರು ತೋರಿದ ಶೌರ್ಯವನ್ನು ಸ್ಮರಿಸಬೇಕಿದೆ. ಇನ್ನೇನು ಏಕ ಶ್ರೇಣಿ- ಏಕ ಪಿಂಚಣಿ ಕಾರ್ಯರೂಪಕ್ಕೆ ಬರಲಿದೆ. ಹಿಂತಿರುಗಿಸಿದ ಪದಕಗಳನ್ನು ಗೌರವಪೂರ್ವಕವಾಗಿ ಮರಳಿ ನೀಡಬೇಕು ಎಂದು ರಾಜೀವ್ ಚಂದ್ರಶೇಖರ್ ಮನವಿ ಮಾಡಿಕೊಂಡಿದ್ದಾರೆ.