Get Updates
Get notified of breaking news, exclusive insights, and must-see stories!

ಪದಕ ಹಿಂತಿರುಗಿಸಲು ಸಂಸದ ರಾಜೀವ್ ಚಂದ್ರಶೇಖರ್ ಮನವಿ

ನವದೆಹಲಿ, ಸೆಪ್ಟೆಂಬರ್ 28: ಏಕಶ್ರೇಣಿ-ಏಕ ಪಿಂಚಣಿ ಜಾರಿಗೆ ಒತ್ತಾಯಿಸಿ ಸೇವಾ ಪದಕ ಹಾಗೂ ಶೌರ್ಯ ಪದಕಗಳನ್ನು ಹಿಂತಿರುಗಿಸಿದ್ದ ನಿವೃತ್ತ ಹಾಗೂ ಹಿರಿಯ ಸೈನಿಕರಿಗೆ ಅವುಗಳನ್ನು ಗೌರವಯುತವಾಗಿ ಹಿಂತಿರುಗಿಸಬೇಕು ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಮನವಿ ಮಾಡಿ, ಪತ್ರ ಬರೆದಿದ್ದಾರೆ.

ಸೇನಾ ಮುಖ್ಯಸ್ಥರಾದ ನೀವು, ಒಂದು ಕಾರ್ಯಕ್ರಮವನ್ನು ಮಾಡಿ ಆ ಎಲ್ಲ ಪದಕಗಳನ್ನು ಗೌರವಯುತವಾಗಿ ಹಿಂತಿರುಗಿಸುವಂತಾಗಬೇಕು ಎಂದು ವಿನಂತಿ ಮಾಡಿದ್ದಾರೆ. "ಪದಕಗಳನ್ನು ಹಿಂತಿರುಗಿಸಿದ ಹಲವರು ವಯಸ್ಸಿನಲ್ಲಿ ಹಿರಿಯರಿದ್ದಾರೆ. ಪದಕಗಳನ್ನು ಹಿಂತಿರುಗಿಸಿದರೆ ಅವರ ಕುಟುಂಬದವರು ಗೌರವವಾಗಿ ಅದನ್ನು ಜೋಪಾನ ಮಾಡುತ್ತಾರೆ ಎಂದಿದ್ದಾರೆ.

'Medals deposited at Rashtrapati Bhavan by veterans must be returned with due ceremony'

ನಿಸ್ವಾರ್ಥವಾದ ಸೇವೆ ಹಾಗೂ ತ್ಯಾಗವನ್ನು ಗುರುತಿಸಿ ದೇಶದ ಕಡೆಯಿಂದ ಅವರಿಗೆ ಪದಕಗಳನ್ನು ನೀಡಲಾಗಿದೆ. ದೇಶದ ಸಾರ್ವಭೌಮತೆಯನ್ನು ಉಳಿಸಲು ಅವರು ತೋರಿದ ಶೌರ್ಯವನ್ನು ಸ್ಮರಿಸಬೇಕಿದೆ. ಇನ್ನೇನು ಏಕ ಶ್ರೇಣಿ- ಏಕ ಪಿಂಚಣಿ ಕಾರ್ಯರೂಪಕ್ಕೆ ಬರಲಿದೆ. ಹಿಂತಿರುಗಿಸಿದ ಪದಕಗಳನ್ನು ಗೌರವಪೂರ್ವಕವಾಗಿ ಮರಳಿ ನೀಡಬೇಕು ಎಂದು ರಾಜೀವ್ ಚಂದ್ರಶೇಖರ್ ಮನವಿ ಮಾಡಿಕೊಂಡಿದ್ದಾರೆ.

'Medals deposited at Rashtrapati Bhavan by veterans must be returned with due ceremony'

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+