ಸಚಿವ ಅಂಬರೀಶ್ ವಿರುದ್ಧ ರಾಹುಲ್ ಗಾಂಧಿಗೆ ದೂರು
ಮಂಡ್ಯ, ಅಕ್ಟೋಬರ್ 12 : 'ವಸತಿ ಸಚಿವ ಅಂಬರೀಶ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಬೇಕು' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಂಡ್ಯ ನಗರ ಸಭೆ ಸದಸ್ಯ ಅನಿಲ್ ಕುಮಾರ್ ದೂರು ನೀಡಿದ್ದಾರೆ.
ಅಕ್ಟೋಬರ್
9ರಂದು
ರಾಹುಲ್
ಗಾಂಧಿ
ಅವರು
ಮಂಡ್ಯಕ್ಕೆ
ಆಗಮಿಸಿದಾಗ
ಅನಿಲ್
ಕುಮಾರ್
ಅವರು
ಅಂಬರೀಶ್
ಅವರ
ಕುರಿತು
ದೂರು
ನೀಡಿದ್ದಾರೆ.
'ರಾಹುಲ್
ಗಾಂಧಿಯವರಿಗೆ
ಸಲ್ಲಿಸಿದ
ಪತ್ರವನ್ನು
ಅವರು
ದಿಗ್ವಿಜಯ್
ಸಿಂಗ್
ಅವರಿಗೆ
ನೀಡಿ
ಪರಿಶೀಲಿಸುವಂತೆ
ಸೂಚನೆ
ನೀಡಿದ್ದಾರೆ'
ಎಂದು
ಅನಿಲ್
ಕುಮಾರ್
ಮಾಧ್ಯಮಗಳಿಗೆ
ತಿಳಿಸಿದ್ದಾರೆ.
[ಅಂಬರೀಶ್
ರಮ್ಯಾ
ನಡುವೆ
'ಚೆಕ್'
ಜಗಳ]
ದೂರಿನಲ್ಲೇನಿದೆ? : ಅನಿಲ್ ಕುಮಾರ್ ಅವರು ಸಲ್ಲಿಸಿರುವ ದೂರಿನಲ್ಲಿ 'ವಸತಿ ಸಚಿವ ಅಂಬರೀಶ್ ಅವರಿಗೆ ಆರೋಗ್ಯದ ಸಮಸ್ಯೆ ಇದೆ. ಅವರಿಗೆ ಇಲಾಖೆಯಲ್ಲಿ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಅವರು ತಮ್ಮ ಆಪ್ತ ಅಮರಾವತಿ ಚಂದ್ರಶೇಖರ್ ಅವರ ಜೊತೆ ಸೇರಿಕೊಂಡು ಜೆಡಿಎಸ್ ವಕ್ತಾರರಂತೆ ವರ್ತಿಸುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ. [ರಾಹುಲ್ ಕಾರ್ಯಕ್ರಮಕ್ಕೆ ಚಕ್ಕರ್ ಹೊಡೆದ ಸಚಿವರಿಗೆ ನೋಟಿಸ್]
'ಅಂಬರೀಶ್ ಅವರ ವರ್ತನೆಯಿಂದಾಗಿ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ವರ್ಚಸ್ಸು ಹಾಳಾಗುತ್ತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಮ್ಯ ಅವರ ಸೋಲಿಗೆ ಅಂಬರೀಶ್ ಅವರೂ ಕೂಡ ಕಾರಣರಾಗಿದ್ದಾರೆ' ಎಂದು ದೂರಲಾಗಿದೆ. [ರಮ್ಯಾ ಸೋಲಿಗೆ ಯಾರು ಕಾರಣ ಗೊತ್ತೆ?]
'ಅಂಬರೀಶ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಬೇಕು ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಕೆಳಗಿಳಿಸಬೇಕೆಂದು' ಅನಿಲ್ ಕುಮಾರ್ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ. [ರಾಹುಲ್ ಮಂಡ್ಯ ಭೇಟಿ ಚಿತ್ರಗಳು]