ಜುಲೈ 27ರಂದು ಮಹಾದಾಯಿ ನ್ಯಾಯಾಧೀಕರಣದ ತೀರ್ಪು
ಬೆಂಗಳೂರು, ಜುಲೈ 25 : ಮಹಾದಾಯಿ ನ್ಯಾಯಮಂಡಳಿ 7 ಟಿಎಂಸಿ ನೀರು ಹಂಚಿಕೆ ವಿವಾದದ ಕುರಿತ ವಿಚಾರಣೆ ಪೂರ್ಣಗೊಳಿಸಿದ್ದು, ತೀರ್ಪನ್ನು ಜುಲೈ 27ಕ್ಕೆ ಕಾಯ್ದಿರಿಸಿದೆ. ಏಳು ಟಿಎಂಸಿ ನೀರು ಬಳಕೆಗೆ ಅವಕಾಶ ನೀಡುವಂತೆ ಕರ್ನಾಟಕ ಸರ್ಕಾರ ಮಹಾದಾಯಿ ನ್ಯಾಯಮಂಡಳಿ ಮುಂದೆ ಅರ್ಜಿ ಸಲ್ಲಿಸಿದೆ.
ಸೋಮವಾರ
ನ್ಯಾಯಾಧೀಶರಾದ
ಜೆ.ಎಂ.ಪಾಂಚಾಳ
ಅವರ
ನೇತೃತ್ವದ
ಪೀಠದಲ್ಲಿ
ಈ
ಅರ್ಜಿಯ
ವಿಚಾರಣೆ
ನಡೆಯಿತು.
ಕರ್ನಾಟಕ
ಸರ್ಕಾರ
ರಾಜ್ಯದಲ್ಲಿನ
ಬರಗಾಲ,
ನೀರಿನ
ಬಳಕೆಯ
ಯೋಜನೆ
ಕುರಿತು
ವಾದ
ಮಂಡನೆ
ಮಾಡಿತು.[ಏನಿದು
ಕಳಸಾ-ಬಂಡೂರಿ
ಯೋಜನೆ]
ಕಳಸಾ-ಬಂಡೂರಿ ನಾಲೆಯಿಂದ ಮಲಪ್ರಭಾ ಜಲಾಶಯಕ್ಕೆ 7 ಟಿಎಂಸಿ ನೀರು ತಿರುಗಿಸಲು ಅನುಮತಿ ನೀಡುವಂತೆ ಕರ್ನಾಟಕ ಸರ್ಕಾರ ಮಹಾದಾಯಿ ನ್ಯಾಯಮಂಡಳಿ ಮುಂದೆ ಅರ್ಜಿ ಸಲ್ಲಿಸಿದೆ. ವಾದ ಮಂಡನೆ ಬಳಿಕ ತೀರ್ಪನ್ನು ಜುಲೈ 27ಕ್ಕೆ ಕಾಯ್ದಿರಿಸಲಾಯಿತು.[ಮಹದಾಯಿ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದ ಕರ್ನಾಟಕ]
ಹುಬ್ಬಳ್ಳಿ, ಗದಗ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಒಂದು ವರ್ಷದಿಂದ ಹೋರಾಟ ನಡೆಯುತ್ತಿದೆ. ನ್ಯಾಯಾಧೀಕರಣದ ತೀರ್ಪು ತಮ್ಮ ಪರವಾಗಿ ಬರಲಿದೆ ಅನ್ನುವ ವಿಶ್ವಾದಲ್ಲಿದ್ದಾರೆ ರೈತರು.[ನ್ಯಾಯಾಧೀಕರಣದತ್ತ ಹರಿದ ಮಹದಾಯಿ ವಿವಾದ]
ನ್ಯಾಯಾಧೀಕರಣದ ಮೊರೆ : 7.56 ಟಿಎಂಸಿ ನೀರನ್ನು ಮಲಪ್ರಭೆಗೆ ತಿರುಗಿಸಿಕೊಂಡು ಹುಬ್ಬಳ್ಳಿ-ಧಾರವಾಡ, ಗದಗ ಮುಂತಾದ ಜಿಲ್ಲೆಗಳ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಕಳಸಾ-ಬಂಡೂರಿ ಯೋಜನೆಗೆ ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ. ಆದ್ದರಿಂದ, ಸರ್ಕಾರ ನ್ಯಾಯಾಧೀಕರಣದ ಮೊರೆ ಹೋಗಿದೆ.