ಗಂಜಾಂ ಬಳಿ ಜೀವನದಿ ಕಾವೇರಿಗೆ ಇಂದು ಸಂಜೆ ಮಹಾ ಆರತಿ

ಮಂಡ್ಯ, ಜೂನ್ 12: ಶ್ರೀರಂಗಪಟ್ಟಣ ಬಳಿ ಇಂದು ಜೀವನದಿ ಕಾವೇರಿಗೆ ಮಹಾ ಆರತಿ ನೆರವೇರಲಿದೆ.

ಕಾವೇರಿಯನ್ನು ಮಾಲಿನ್ಯದಿಂದ ಮುಕ್ತಗೊಳಿಸುವ ಗುರಿಯೊಂದಿಗೆ ಜತೆಗೆ ನದಿಯ ಬಗ್ಗೆ ಜನರಲ್ಲಿ ಶ್ರದ್ಧಾಭಾವ ಮೂಡಿಸುವ ಸಲುವಾಗಿ ಗಂಜಾಂ ಶ್ರೀರಂಗಪಟ್ಟಣದ ಶ್ರೀಶಂಕರ ಪರಮಾನಂದ ಟ್ರಸ್ಟಿನ ಸ್ವಾಮಿ ಗಣೇಶ ಸ್ವರೂಪಾನಂದ ಗಿರಿ ಅವರು ನದಿಗೆ ಈ ಮಹಾ ಆರತಿ ಸಲ್ಲಿಸಲಿದ್ದಾರೆ.

ಲಲಿತಾ ಸಹಸ್ರನಾಮದ ಬಳಿಕ ಕಾವೇರಿ ಮಾತೆಗೆ ಹುಣ್ಣಿಮೆ ಆರತಿ:

maha-aarti-to-cauvery-river-at-ganjam-srirangapatna-in-mandya-june-12
ಶ್ರೀರಂಗಪಟ್ಟಣದ ಬಳಿ ಗಂಜಾಂ ನಿಮಿಷಾಂಬ ದೇವಸ್ಥಾನದ ಕಾವೇರಿ ನದಿ ತೀರದಲ್ಲಿ ಸಂಜೆ 5ಕ್ಕೆ ಲಲಿತಾ ಸಹಸ್ರನಾಮ ಪಠಣದ ಬಳಿಕ 6 ಗಂಟೆಗೆ ಮಾತೆ ಕಾವೇರಿಗೆ ಮಹಾ ಆರತಿ ನೆರವೇರಲಿದೆ.

ಶ್ರೀರಂಗಪಟ್ಟಣದ ನಾರಾಯಣ ಆಶ್ರಮದ ಶ್ರೀ ವಿಠಲತೀರ್ಥ ಸ್ವಾಮೀಜಿ, ಪೊನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾಶ್ರಮದ ಬೋಧಸ್ವರೂಪಾನಂದ ಮಹಾರಾಜ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ.

ಕಾವೇರಿ ನದಿಯನ್ನು ಮಾಲಿನ್ಯ ಮುಕ್ತಗೊಳಿಸಿ, ಪಾವಿತ್ರ್ಯತೆ ಉಳಿಸಿಕೊಳ್ಳಲು ಜನರನ್ನು ಜಾಗೃತಗೊಳಿಸಬೇಕು ಎಂಬ ಉದ್ದೇಶದಿಂದ ಈ ಮುಂಚೆ ಕರ್ನಾಟಕ-ತಮಿಳುನಾಡು ಭಾಗದ ಕಾವೇರಿ ತೀರ ಪ್ರದೇಶದಲ್ಲಿ ಮಾತೆ ಕಾವೇರಿ ತೀರ್ಥಯಾತ್ರೆ ನಡೆಸಿರುವ ಸ್ವಾಮೀಜಿ, ಪ್ರತಿ ಹುಣ್ಣಿಮೆಯಂದು ಕಾವೇರಿ ನದಿಗೆ ಮಹಾ ಆರತಿ ನೆರವೇರಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 94800 32015 ಸಂಖ್ಯೆಯನ್ನು ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+