ಮಹದಾಯಿ ಹೋರಾಟ, ಅನ್ನದಾತರ ಬಂಧನ
ಬೆಂಗಳೂರು, ಜುಲೈ 29 : ಉತ್ತರ ಕರ್ನಾಟಕದಲ್ಲಿ ಮಹದಾಯಿ ನ್ಯಾಯಮಂಡಳಿ ತೀರ್ಪು ವಿರೋಧಿಸಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನೆ ನಡೆಸುತ್ತಿರುವ 130ಕ್ಕೂ ಅಧಿಕ ರೈತರನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ. ಹೋರಾಟ ಹತ್ತಿಕ್ಕಲು ಸರ್ಕಾರ ಪೊಲೀಸರನ್ನು ಬಳಕೆ ಮಾಡಿಕೊಳ್ಳುತ್ತಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ
120,
ಗದಗದಲ್ಲಿ
18
ರೈತರನ್ನು
ಗುರುವಾರ
ರಾತ್ರಿ
ಬಂಧಿಸಲಾಗಿದೆ.
ಹೋರಾಟ
ಹಿಂಸಾಚಾರಕ್ಕೆ
ತಿರುಗಿದ
ನವಲಗುಂದದಲ್ಲಿ
ನಿಷೇಧಾಜ್ಞೆಜಾರಿಯಲ್ಲಿದ್ದು,
ಇಂದು
ಶಾಲಾ
ಕಾಲೇಜುಗಳಿಗೆ
ರಜೆ
ಘೋಷಣೆ
ಮಾಡಲಾಗಿದೆ.[ಕಳಸಾ
ಹೋರಾಟದ
ಚಿತ್ರಗಳು]
ಪರಿಸ್ಥಿತಿಯಲ್ಲಿ ಹತೋಟಿಗೆ ತರಲು ಬಿಎಸ್ಎಫ್ ಪಡೆಯನ್ನು ಹುಬ್ಬಳ್ಳಿಗೆ ರವಾನಿಸಲಾಗಿದೆ. ಬಂಧಿತರಾಗರುವ ರೈತರನ್ನು ಧಾರವಾಡದ ಕೋರ್ಟ್ಗೆ ಇಂದು ಹಾಜರುಪಡಿಸಲಿದ್ದು, ಅಲ್ಲಿಯೂ ಬೃಹತ್ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ.[ಮಹದಾಯಿ ತೀರ್ಪು: ಕನ್ನಡಿಗರು ಗಮನಿಸಬೇಕಾದ್ದು ಏನು?]
* ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ರೈತರು ಬೆಳಗ್ಗೆ 11 ಗಂಟೆಗೆ ಸಭೆ ನಡೆಸಲಿದ್ದಾರೆ.
* ನರಗುಂದ ಮತ್ತು ಗದಗ ಭಾಗದ ರೈತರು ಸಹ ಗದಗದಲ್ಲಿ ಇಂದು ಸಭೆ ನಡೆಸಲಿದ್ದು, ಮುಂದಿನ ಹೋರಾಟದ ರೂಪುರೇಷೆ ತಯಾರಿಸಲಿದ್ದಾರೆ.