ನಿಖಿಲ್ ಗಾಗಿ ರಾಹುಲ್, ಬೆಂಗಳೂರು ಅಭ್ಯರ್ಥಿಗಳಿಗಾಗಿ ಮೋದಿ ಪ್ರಚಾರ
ಬೆಂಗಳೂರು, ಏಪ್ರಿಲ್ 13: ಕರ್ನಾಟಕದಲ್ಲಿ ಇಂದು ಒಂದೇ ದಿನ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.
ರಾಹುಲ್ ಗಾಂಧಿ ಅವರು ಕೋಲಾರ, ಚಿತ್ರದುರ್ಗ, ಕೆ.ಆರ್.ನಗರ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡುತ್ತಿದ್ದರೆ, ಪ್ರಧಾನಿ ಅವರು ಮಂಗಳೂರು ಮತ್ತು ಬೆಂಗಳೂರು ನಗರಗಳಲ್ಲಿ ಅಬ್ಬರಿಸಲಿದ್ದಾರೆ.
ಒಂದೇ ದಿನ ಇಬ್ಬರು ರಾಷ್ಟ್ರೀಯ ಮುಖಂಡರು ಪರಸ್ಪರ ಒಂದೇ ರಾಜ್ಯದಲ್ಲಿ ಒಬ್ಬರ ಮೇಲೊಬ್ಬರು ಟೀಕಾ ಪ್ರಹಾರ ನಡೆಸುತ್ತಿರುವುದು ಅಪರೂಪವೇ. ಒಂದೇ ದಿನ ಎರಡು ರಾಷ್ಟ್ರೀಯ ನಾಯಕರ ಮಾತಿನವ ವರಸೆ, ಭರವಸೆಗಳನ್ನು ಆಲಿಸುವ ಪುಣ್ಯ (?!) ಕನ್ನಡಿಗರದ್ದು.

ಈಗಾಗಲೇ ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ತಮ್ಮ ಮೊದಲ ಸಮಾವೇಶವನ್ನು ಮುಗಿಸಿ ಚಿತ್ರದುರ್ಗದತ್ತ ಎರಡನೇ ಸಮಾವೇಶಕ್ಕೆ ತೆರಳಿದ್ದಾರೆ. ನರೇಂದ್ರ ಮೋದಿ ಅವರು ತಮಿಳುನಾಡಿನಲ್ಲಿ ಎರಡು ಸಮಾವೇಶ ಮುಗಿಸಿ ಮಂಗಳೂರಿನತ್ತ ಮರಳಿ ಬರುತ್ತಿದ್ದಾರೆ.
ಇಬ್ಬರೂ ನಾಯಕರು ರಾಜ್ಯದ ಜನರಿಗೆ ನೀಡಿದ ಭರವಸೆಗಳು, ಪರಸ್ಪರರ ಮೇಲೆ ಎರಚಿಕೊಂಡ ಮಾತಿನ ಕೆಸರು ಎಲ್ಲವೂ ಇಲ್ಲಿ ಓದಲು ಸಿಗಲಿದೆ.
ಕೋಲಾರದಲ್ಲಿ ಸಮಾವೇಶ ಮುಗಿಸಿದ ರಾಹುಲ್ ಗಾಂಧಿ ಅವರು ಚಿತ್ರದುರ್ಗದ ಪರಿವರ್ತನಾ ಸಮಾವೇಶಕ್ಕೆ ತೆರಳಿದ್ದು, ಕೆಲವೇ ಕ್ಷಣಗಳಲ್ಲಿ ಚಿತ್ರದುರ್ಗದಲ್ಲಿ ರಾಹುಲ್ ಗಾಂಧಿ ಅವರು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.












Click it and Unblock the Notifications