ತೃಪ್ತಿ ಇಲ್ಲ ಎಂದಿದ್ದ 'ಅತೃಪ್ತ'ರಿಗೆ ಎಚ್ಡಿಕೆ ಹರಿಸಿದ್ದ ಅನುದಾನದ ಹೊಳೆ
ಮುಂಬೈನಲ್ಲಿರುವ ಶಾಸಕರು 'ಅತೃಪ್ತ'ರಾಗಲು ಕಾರಣ, ಒಂದೋ ಮುಖ್ಯಮಂತ್ರಿಗಳು, ಇಲ್ಲವೇ ಅವರ ಸಹೋದರ ಎಚ್ ಡಿ ರೇವಣ್ಣ, ಅದೂ ಇಲ್ಲಾಂದ್ರೆ ನಮ್ಮ ಕ್ಷೇತ್ರದ ಅಭಿವೃದ್ದಿ/ಕಾಮಗಾರಿಗಳಿಗೆ ಕುಮಾರಸ್ವಾಮಿ ಅನುದಾನ ನೀಡಿಲ್ಲವೆನ್ನುವುದು.
ಇದರ ಬಗ್ಗೆಯೂ ಸೋಮವಾರ (ಜುಲೈ 22) ಸದನದ ವಿಶ್ವಾಸಮತಯಾಚನೆ ವೇಳೆ ಸ್ಪಷ್ಟನೆ ನೀಡಿದ್ದ ಸದ್ಯದ ಉಸ್ತುವಾರಿ ಮುಖ್ಯಮಂತ್ರಿ ಕುಮಾರಸ್ವಾಮಿ, ಯಾರ್ಯಾರಿಗೆ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಲಾಗಿತ್ತು ಎನ್ನುವ ಪಟ್ಟಿಯನ್ನು ಸ್ಪೀಕರ್ ರಮೇಶ್ ಕುಮಾರ್ ಮುಂದೆ ಹೇಳಿದ್ದಾರೆ.
ನನ್ನ ಕ್ಷೇತ್ರದ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ನಯಾಪೈಸಿ ಕೊಟ್ಟಿಲ್ಲ, ಬೋರ್ವೆಲ್ ತೋಡಿಸಲೂ ನನ್ನ ಜೇಬಿನಿಂದ ಹಣ ನೀಡಿದ್ದೆ ಎಂದು ಮುಂಬೈನಲ್ಲಿರುವ ಕೆ ಆರ್ ಪೇಟೆ ಶಾಸಕ ನಾರಾಯಣ ಗೌಡ ಆರೋಪಿಸಿದ್ದರು.
ಇನ್ನು, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಅವರ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಬಳಿ ಚರ್ಚಿಸಿ ಹೆಚ್ಚಿನ ಅನುದಾನ ಸಿಗುವಂತೆ ಮಾಡಿದ್ದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ಹೇಳಿದ್ದರು. ಹಾಗಾದರೆ, ಹದಿನಾರು ಅತೃಪ್ತ ಶಾಸಕರ ಕ್ಷೇತ್ರಗಳಿಗೆ ಹರಿದ ಅನುದಾನದ ಮೊತ್ತವೆಷ್ಟು? ಮುಂದೆ ಓದಿ..

ರಮೇಶ್ ಜಾರಕಿಹೊಳಿ ಪ್ರತಿನಿಧಿಸುವ ಕ್ಷೇತ್ರ
ಶಾಸಕ : ರಮೇಶ್ ಜಾರಕಿಹೊಳಿ
ಕ್ಷೇತ್ರ: ಗೋಕಾಕ್
ಅನುದಾನ (ಕೋಟಿ ರೂಪಾಯಿಗಳಲ್ಲಿ) : 262
--
ಶಾಸಕ : ಕೆ ಗೋಪಾಲಯ್ಯ
ಕ್ಷೇತ್ರ: ಮಹಾಲಕ್ಷ್ಮೀ ಲೇಔಟ್ (ಬೆಂಗಳೂರು)
ಅನುದಾನ (ಕೋಟಿ ರೂಪಾಯಿಗಳಲ್ಲಿ) : 416
--
ಶಾಸಕ : ಬಿ ಸಿ ಪಾಟೀಲ್
ಕ್ಷೇತ್ರ: ಹಿರೇಕೆರೂರು
ಅನುದಾನ (ಕೋಟಿ ರೂಪಾಯಿಗಳಲ್ಲಿ) : 142

ಡಾ. ಕೆ ಸುಧಾಕರ್ ಆರಿಸಿಬಂದ ಕ್ಷೇತ್ರ
ಶಾಸಕ : ಡಾ. ಕೆ ಸುಧಾಕರ್
ಕ್ಷೇತ್ರ: ಚಿಕ್ಕಬಳ್ಳಾಪುರ
ಅನುದಾನ (ಕೋಟಿ ರೂಪಾಯಿಗಳಲ್ಲಿ) : 136
--
ಶಾಸಕ : ಮಹೇಶ್ ಕುಮಠಳ್ಳಿ
ಕ್ಷೇತ್ರ: ಅಥಣಿ
ಅನುದಾನ (ಕೋಟಿ ರೂಪಾಯಿಗಳಲ್ಲಿ) : 157
--
ಶಾಸಕ : ಆನಂದ್ ಸಿಂಗ್
ಕ್ಷೇತ್ರ: ವಿಜಯನಗರ, ಬಳ್ಳಾರಿ
ಅನುದಾನ (ಕೋಟಿ ರೂಪಾಯಿಗಳಲ್ಲಿ) : 179

ಕಾಂಗ್ರೆಸ್ ಜೊತೆ ತಮ್ಮ ಪಕ್ಷವನ್ನು ವಿಲೀನಗೊಳಿಸಿದ್ದ ಆರ್ ಶಂಕರ್
ಶಾಸಕ : ಆರ್ ಶಂಕರ್
ಕ್ಷೇತ್ರ: ರಾಣೆಬೆನ್ನೂರು
ಅನುದಾನ (ಕೋಟಿ ರೂಪಾಯಿಗಳಲ್ಲಿ) : 113
--
ಶಾಸಕ : ಎಚ್ ನಾಗೇಶ್
ಕ್ಷೇತ್ರ: ಮುಳಬಾಗಿಲು
ಅನುದಾನ (ಕೋಟಿ ರೂಪಾಯಿಗಳಲ್ಲಿ) : 307
--
ಶಾಸಕ : ಪ್ರತಾಪ್ ಗೌಡ ಪಾಟೀಲ್
ಕ್ಷೇತ್ರ: ಮಸ್ಕಿ
ಅನುದಾನ (ಕೋಟಿ ರೂಪಾಯಿಗಳಲ್ಲಿ) : 517

ಶಿವರಾಂ ಹೆಬ್ಬಾರ್ ಕ್ಷೇತ್ರಕ್ಕೂ ಹರಿದಿತ್ತು ಅನುದಾನ
ಶಾಸಕ : ಶಿವರಾಂ ಹೆಬ್ಬಾರ್
ಕ್ಷೇತ್ರ: ಯಲ್ಲಾಪುರ
ಅನುದಾನ (ಕೋಟಿ ರೂಪಾಯಿಗಳಲ್ಲಿ) : 413
--
ಶಾಸಕ : ಎಂಟಿಬಿ ನಾಗರಾಜ್
ಕ್ಷೇತ್ರ: ಹೊಸಕೋಟೆ
ಅನುದಾನ (ಕೋಟಿ ರೂಪಾಯಿಗಳಲ್ಲಿ) : 132
--
ಶಾಸಕ : ಭೈರತಿ ಬಸವರಾಜ್
ಕ್ಷೇತ್ರ: ಕೆ ಆರ್ ಪುರಂ (ಬೆಂಗಳೂರು)
ಅನುದಾನ (ಕೋಟಿ ರೂಪಾಯಿಗಳಲ್ಲಿ) : 339

ಇಷ್ಟು ಅನುದಾನ ಬಂದರೂ ಮುನಿರತ್ನಗೆ ಯಾಕೆ ಸಿಟ್ಟು?
ಶಾಸಕ : ಮುನಿರತ್ನ
ಕ್ಷೇತ್ರ: ರಾಜರಾಜೇಶ್ವರಿ ನಗರ (ಬೆಂಗಳೂರು)
ಅನುದಾನ (ಕೋಟಿ ರೂಪಾಯಿಗಳಲ್ಲಿ) : 559
--
ಶಾಸಕ : ಎಸ್ ಟಿ ಸೋಮಶೇಖರ್
ಕ್ಷೇತ್ರ: ಯಶವಂತಪುರ (ಬೆಂಗಳೂರು)
ಅನುದಾನ (ಕೋಟಿ ರೂಪಾಯಿಗಳಲ್ಲಿ) : 415
--
ಶಾಸಕ : ಎಚ್ ವಿಶ್ವನಾಥ್
ಕ್ಷೇತ್ರ: ಹುಣಸೂರು
ಅನುದಾನ (ಕೋಟಿ ರೂಪಾಯಿಗಳಲ್ಲಿ) : 304
ಶಾಸಕ : ನಾರಾಯಣ ಗೌಡ
ಕ್ಷೇತ್ರ: ಕೆ ಆರ್ ಪೇಟೆ
ಅನುದಾನ (ಕೋಟಿ ರೂಪಾಯಿಗಳಲ್ಲಿ) : 472
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications