KSRTC: ಪಾರ್ಸೆಲ್ ಸೇವೆಗಾಗಿ ಶೀಘ್ರದಲ್ಲೇ ರಸ್ತೆಗಿಳಿಯಲಿವೆ ಇಷ್ಟು KSRTC ಲಾರಿಗಳು
ಬೆಂಗಳೂರು, ಸೆಪ್ಟೆಂಬರ್, 14: ರಾಮಲಿಂಗಾರೆಡ್ಡಿ ಅವರು ಸಾರಿಗೆ ಸಚಿವ ಆದಾಗಿನಿಂದ ನೌಕಕರು ಹಾಗೂ ಪ್ರಯಾಣಿಕರ ಹಿತದೃಷ್ಟಿಯಲ್ಲಿ ಇಲಾಖೆಯಲ್ಲಿ ಒಂದಲ್ಲ ಒಂದು ರೀತಿಯ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದ್ದಾರೆ. ಇದೀಗ ಪಾರ್ಸೆಲ್ಗಾಗಿಯೇ KSRTC ಲಾರಿಗಳನ್ನು ರಸ್ತೆಗಳಿಸಲು ಮುಂದಾಗಿದ್ದಾರೆ. ಹಾಗಾದರೆ ಈ ಲಾರಿಗಳ ಪಾರ್ಸೆಲ್ ಸೇವೆ ಹೇಗಿರಲಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಮಹಾಮಾರಿ ಕೊರೊನಾ ಸಮಯದಲ್ಲಿ ಕೆಎಸ್ಆರ್ಟಿಸಿಗೆ ಬರುತ್ತಿದ್ದ ಆದಾಯ ಅಷ್ಟಕಷ್ಟೇ. ಯಾಕೆಂದೆರೆ ಆ ಸಮಯದಲ್ಲಿ ಬಸ್ಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಆ ನಷ್ಟವನ್ನು ಸರಿದೂಗಿಸಲು ಕೊರೊನಾ ಮಹಾಮಾರಿ ತೊಲಗಿದ ನಂತರ ಪಾರ್ಸೆಲ್ ಸೇವೆಯನ್ನು ವಿಸ್ತರಣೆ ಮಾಡಲು ಸಾರಿಗೆ ಇಲಾಖೆ ಮುಂದಾಗಿತ್ತುದೆ. ಪಾರ್ಸೆಲ್ ಸೇವೆ ಏನೋ ಇತ್ತು. ಇದು ಬಸ್ಗಳಲ್ಲಿ ಸಣ್ಣ ಪ್ರಮಾಣದಲ್ಲಿ ಇತ್ತು.

ಬಸ್ಗಳಲ್ಲಿ ಪಾರ್ಸೆಲ್ಗೆ ಅಷ್ಟೊಂದು ಜಾಗ ಇರುತ್ತಿರಲಿಲ್ಲ. ಆದ್ದರಿಂದ ಪಾರ್ಸೆಲ್ ಸೇವೆಯನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಮಾಡಲು ಲಾರಿಗಳನ್ನು ಬಿಡಲು ಇಲಾಖೆ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ಸಾರಿಗೆ ಇಲಾಖೆಯ ಆದಾಯವೂ ಹೆಚ್ಚಿದಂತಾಗುತ್ತದೆ. ಹೆಚ್ಚೆಚ್ಚು ಪಾರ್ಸೆಲ್ ತಲುಪಿಸಿದಂತೆಯೂ ಆಗುತ್ತದೆ ಎನ್ನುವ ಪ್ಲಾನ್ ಇಲಾಖೆಯದ್ದಾಗಿದೆ. ಹಾಗಾದರೆ ಈ ಸೇವೆ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.
ಕೆಎಸ್ಆರ್ಟಿಸಿಯು ವಿವಿಧ ಮಾರ್ಗಗಳ ಮೂಲಕ ಆದಾಯ ಹೆಚ್ಚಳಕ್ಕೆ ಮುಂದಾಗಿದ್ದು, ವ್ಯವಸ್ಥಿತ ಮತ್ತು ಸಮರ್ಪಕವಾದ ಪಾರ್ಸೆಲ್ ಸೇವೆ ಒದಗಿಸಲು ಶೀಘ್ರದಲ್ಲೇ ಅಂದರೆ ಇನ್ನೊಂದು ತಿಂಗಳಲ್ಲಿಯೇ ಟ್ರಕ್ಗಳನ್ನು ಬಿಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಹಾಮಾರಿ ಕೊರೊನಾ ಸಮಯದಲ್ಲಿ KSRTCಯು ಭಾರೀ ನಷ್ಟ ಅನುಭವಿಸಿತ್ತು. ಇದೀಗ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ಹಿನ್ನೆಲೆ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಣ್ಣ ಪ್ರಮಾಣದಲ್ಲಿದ್ದ ಪಾರ್ಸೆಲ್ ಸೇವೆಯನ್ನು ಬಲಪಡಿಸಲು 20 ಲಾರಿಗಳನ್ನು ಖರೀದಿಸಲು ಕೆಎಸ್ಆರ್ಟಿಸಿ ಮುಂದಾಗಿದೆ. ಈ ಹಿಂದೆ ಬಸ್ಗಳಲ್ಲಿಯೇ ಸಣ್ಣ ಪ್ರಮಾಣದಲ್ಲಿ ಪಾರ್ಸೆಲ್ ಸೇವೆಯನ್ನು ಕೆಎಸ್ಆರ್ಟಿಸಿ ಆರಂಭಿಸಿದೆ. ಪ್ರಾರಂಭದಲ್ಲಿ 109 ಕೇಂದ್ರಗಳಲ್ಲಿ ಈ ಸೇವೆಯನ್ನು ಆರಂಭ ಮಾಡಲಾಗಿತ್ತು ಅದು ಬಸ್ಗಳಲ್ಲಿ.
ನಂತರ ರಾಜ್ಯದ ಎಲ್ಲ ನಿಲ್ದಾಣಗಳಿಗೂ ಈ ಸೇವೆಯನ್ನು ವಿಸ್ತರಣೆ ಮಾಡಲಾಯಿತು. ಬಸ್ನ ಲಗೇಜ್ ಬಾಕ್ಸ್ಗಳಲ್ಲಿಯೇ ಸಣ್ಣ ಪ್ರಮಾಣದಲ್ಲಿ ಪಾರ್ಸೆಲ್ಗಳನ್ನು ಸಾಗಿಸಲಾಗುತ್ತಿತ್ತು. ಈ ಮೂಲಕ ವಾರ್ಷಿಕ ಸುಮಾರು 4 ಕೋಟಿ ರೂಪಾಯಿ ಆದಾಯ ಬರುತ್ತಿತ್ತು. ಬಳಿಕ ಈ ಸೇವೆಯನ್ನು ಬಿಸಿನೆಸ್ ಸ್ಟ್ಯಾಟಿಕ್ ಪಾರ್ಟನರ್ ಎಂದು ಮಾಡಿಕೊಂಡು ಸೇವೆ ನೀಡಲು ಆರಂಭಿಸಲಾಯಿತು. ಈ ಸಹಭಾಗಿತ್ವದ ಸೇವೆಯಡಿ ಬಂದ ಹಣದಲ್ಲಿ ಶೇಕಡಾ 80ರಷ್ಟು KSRTCಗೆ ಮತ್ತು ಶೇಕಡಾ 20ರಷ್ಟು ಪಾರ್ಟ್ನರ್ಗೆ ಪಾಲು ನಿಗದಿ ಪಡಿಸಲಾಯಿತು.
ಈ ವೇಳೆ ವಾರ್ಷಿಕ ಆದಾಯ 30 ಕೋಟಿ ರೂಪಾಯಿಗೆ ಹೆಚ್ಚಳವಾಗಿತ್ತು. ಆದ್ದರಿಂದ ಅಧಿಕೃತವಾಗಿ ಪಾರ್ಸೆಲ್ ಸೇವೆ ಒದಗಿಸಿದರೆ ಆದಾಯ ಹೆಚ್ಚಿಸಿಕೊಳ್ಳುವ ಪ್ರಸ್ತಾಪವನ್ನು ಸಾರಿಗೆ ಸಚಿವರ ಮುಂದಿಟ್ಟರು. ಇದನ್ನು ಅವಲೋಕಿಸಿದ ಸಚಿವರು 100 ಕೋಟಿ ರೂಪಾಯಿ ಆದಾಯ ಗಳಿಸುವ ಗುರಿಯೊಂದಿಗೆ ಲಾರಿಗಳನ್ನು ಖರೀದಿ ಮಾಡಲು ಸಮ್ಮತಿ ನೀಡಿದ್ದಾರೆ.
6 ಟನ್ ಸಾಮರ್ಥ್ಯದ ಸಂಪೂರ್ಣ ನಿರ್ಮಿತ 20 ಟ್ರಕ್ಗಳನ್ನು ಖರೀದಿಸಲಾಗುತ್ತಿದೆ. ಒಂದು ಟ್ರಕ್ ಖರೀದಿಗೆ 22 ಲಕ್ಷ ರೂಪಾಯಿ ಅಂದಾಜಿಸಲಾಗಿದ್ದು, ಆಗಸ್ಟ್ನಲ್ಲಿ ನಡೆದ ಸಭೆಯಲ್ಲಿ ಅನುಮೋದನೆಯೂ ಸಿಕ್ಕಿದೆ. ಬಸ್ಗಳಲ್ಲಿ ಹೆಚ್ಚಿನ ಸ್ಥಳಾವಕಾಶ ಇಲ್ಲದೆ, ಪಾರ್ಸೆಲ್ ಸೇವೆ ಒದಗಿಸಲು ಸಮಸ್ಯೆಯಾಗಿತ್ತು. ಹೀಗಾಗಿ ಅಧಿಕ ಪ್ರಮಾಣದ ಪಾರ್ಸೆಲ್ ಇರುವ ಮಾರ್ಗ ಗುರುತಿಸಿ ಟ್ರಕ್ಗಳ ಸಂಚಾರ ವ್ಯವಸ್ಥೆ ಮಾಡಲಾಗುತ್ತದೆ. ಟ್ರಕ್ಗಳು ಹೋಗದ ಕಡೆಗೆ ಬಸ್ಗಳಲ್ಲಿ ಈ ಸೇವೆ ಇರಲಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
-
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
KEA Recruitment: ವಾಯುವ್ಯ ಸಾರಿಗೆ ಸಂಸ್ಥೆ ನೇಮಕಾತಿ ಪರೀಕ್ಷೆಗಳ ದಿನಾಂಕ ಬದಲಾವಣೆ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ












Click it and Unblock the Notifications