ಸಾರಿಗೆ ಮುಷ್ಕರ: ಕ್ರಿಕೆಟ್ ಮೈದಾನವಾದ ಮೆಜೆಸ್ಟಿಕ್
ಬೆಂಗಳೂರು, ಜುಲೈ, 25: ರಾಜ್ಯದಲ್ಲಿ ಕೆಎಸ್ ಆರ್ ಟಿಸಿ ಮುಷ್ಕರದ ಬಿಸಿ ಏರಿದ್ದು ಆಡಳಿತ ಮತ್ತು ನೌಕರರು ತಲೆಬಿಸಿ ಮಾಡಿಕೊಂಡು ಕುಳಿತಿದ್ದಾರೆ. ಆದರೆ ಮುಷ್ಕರದ ಪರಿಣಾಮ ಸದಾ ಜನರಿಂದ ತುಂಬಿರುತ್ತಿದ್ದ ಕೆಂಪೇಗೌಡ ಬಸ್ ನಿಲ್ದಾಣ ಕ್ರಿಕೆಟ್ ಮೈದಾನವಾಗಿ ಬದಲಾಗಿದೆ.
ಭಾನುವಾರ ಮಧ್ಯರಾತ್ರಿಯಿಂದಲೇ ಮುಷ್ಕರ ಆರಂಭವಾಗಿದ್ದರೂ ಜನರಿಗೆ ಬಿಸಿ ತಟ್ಟಿದ್ದು ಸೋಮವಾರ ಮುಂಜಾನೆ. ಬೆಂಗಳೂರಿನ ನಾಘರಿಕರು ಕೊಂಚ ಮುಂದಾಲೋಚನೆ ಮಾಡಿದ್ದು ಬಸ್ ನಿಲ್ದಾಣದ ಕಡೆ ಸುಳಿಯುವ ಯತ್ನ ಮಾಡದೇ ಜಾಣರು ಎನಿಸಿಕೊಂಡಿದ್ದರು. [ಮುಷ್ಕರದ ಲಾಭ: ಆಟೋ, ಖಾಸಗಿ ಬಸ್ ಚಾಲಕರಿಗೆ ಹಬ್ಬ]

ಮೆಜೆಸ್ಟಿಕ್ ಸುತ್ತ ಮುತ್ತಲಿನ ಅಂಗಡಿಯ ಹುಡುಗರಿಗೆ ಕೆಂಪೇಗೌಡ ನಿಲ್ದಾಣವೇ ಆಟದ ಮೈದಾನವಾಗಿ ಪರಿವರ್ತನೆಯಾಯಿತು. ಅಂಗಡಿಯಲ್ಲಿ ವ್ಯಾಪಾರವಿಲ್ಲದೇ ಸುಮ್ಮನೆ ಕುಳಿತಿದ್ದವರು ಕ್ರಿಕೆಟ್ ಆಡಿ ದಿನ ಕಳೆಯುತ್ತಿದ್ದರು.[ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

ಇದೇ ತರಹ ನಾಳೆಯೂ ಮುಂದುವರಿದರೆ ನನಾವು ಅಪಾರ ನಷ್ಟ ಮಾಡಿಕೊಳ್ಳಬೇಕಾಗುತ್ತದೆ ಎಂದು ಹತ್ತಿರದ ಬೇಕರಿಯಲ್ಲಿ ಕೆಲಸ ಮಾಡುವ ರಾಜೇಶ್ ಹೇಳಿದರು.[ಗ್ಯಾಲರಿ : ಬಸ್ ಇಲ್ಲದೆ ಜನರ ಪರದಾಟ]












Click it and Unblock the Notifications