Get Updates
Get notified of breaking news, exclusive insights, and must-see stories!

ರೈತರಿಗೆ ಸಿದ್ದರಾಮಯ್ಯ ಭರ್ಜರಿ ಗುಡ್ ನ್ಯೂಸ್: ಕೃಷಿಭಾಗ್ಯ ಯೋಜನೆಗೆ ಮರು ಚಾಲನೆ, ಪ್ರಮುಖಾಂಶಗಳು

ಬೆಂಗಳೂರು: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ 1000 ದಿನ ಪೂರೈಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಸಂಬಂಧಿಸಿದ ಸ್ಥಗಿತಗೊಂಡಿದ್ದ 'ಕೃಷಿಭಾಗ್ಯ ಯೋಜನೆ'ಗೆ ಮರು ಚಾಲನೆ ನೀಡುವುದಾಗಿ ಘೋಷಿಸಿದ್ದಾರೆ. ಇದು ಸೇರಿದಂತೆ ಸರ್ಕಾರದ ಸಾಧನೆಗಳ ಕುರಿತು ಮಹತ್ವದ ಭರವಸೆ ಹಾಗೂ ಸಾಧನೆಗಳನ್ನು ವಿವರಿಸಿದ್ದಾರೆ.

'1,000 ದಿನಗಳ ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯವನ್ನು ನಾಡಿನ ಜನತೆಗೆ ಅರ್ಪಿಸುತ್ತಿದ್ದೇವೆ. ನಿಮ್ಮ ಪ್ರೀತಿ - ಸಹಕಾರ ಮುಂದೆಯೂ ನಮ್ಮೊಂದಿಗಿರಲಿ' ಕೋರಿ ಸಿದ್ದರಾಮಯ್ಯ ಅವರು ಹಾವೇರಿ ಸಾಧನಾ ಸಮಾವೇಶದಲ್ಲಿ ಮಾತನಾಡಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಕೃಷಿಭಾಗ್ಯ ಯೋಜನೆಗೆ ನಾವು ಮರು ಚಾಲನೆ ನೀಡಿದ್ದೇವೆ. ಬರಪೀಡಿತ ತಾಲೂಕುಗಳಲ್ಲಿ ರೂಪಾಯಿ 200 ಕೋಟಿ ಅನುದಾನದಡಿ 3,735 ಕೃಷಿ ಹೊಂಡಗಳು ಹಾಗೂ ಪಾಲಿಹೌಸ್ ಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

Krishi Bhagya Relaunched

ಏನಿದು ಕೃಷಿ ಭಾಗ್ಯ ಯೋಜನೆ

ಕರ್ನಾಟಕ ಸರ್ಕಾರದ ಕೃಷಿಭಾಗ್ಯ ಯೋಜನೆ ಮಳೆಯಾಶ್ರಿತ ಪ್ರದೇಶಗಳ ರೈತರಿಗೆ ಕೃಷಿ ಹೊಂಡ ನಿರ್ಮಾಣ, ತಾಡಪತ್ರಿ (ಪಾಲಿತಿನ್ ಕವರ್), ಮತ್ತು ನೀರಾವರಿ ಉಪಕರಣಗಳಿಗೆ ಸಹಾಯಧನ ನೀಡಿ, ಬೇಸಿಗೆಯಲ್ಲೂ ಕೃಷಿ ಮಾಡಲು ಅನುವು ಮಾಡಿಕೊಡುವ ಮಹತ್ವದ ಯೋಜನೆಯಾಗಿದೆ. ಬರಪೀಡಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿಯನ್ನು ಪ್ರೋತ್ಸಾಹಿಸಲು ಈ ಯೋಜನೆ ಸಹಾಯಧನದೊಂದಿಗೆ ತಾಂತ್ರಿಕ ಬೆಂಬಲವನ್ನೂ ಸರ್ಕಾರ ನೀಡುತ್ತದೆ.

ಮಳೆಯಾತ್ರಿತ ಕೃಷಿಯಲ್ಲಿ ತೊಡಗಿರುವ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ನಮ್ಮ ಈ ಯೋಜನೆ ಅನಿಶ್ಚಿತತೆಯ ಆತಂಕವನ್ನು ರಾಜ್ಯ ಸರ್ಕಾರ ದೂರ ಮಾಡಿದೆ. ನಮ್ಮ ಸರ್ಕಾರದ ಈ ಅವಧಿಯಲ್ಲಿ ರಾಜ್ಯದಲ್ಲಿ ಹೊಸದಾಗಿ ಒಟ್ಟು 59,181 ಎಕರೆಗೆ ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯ ಸೃಜನೆ ಮಾಡಲಾಗಿದೆ. ಏತ ನೀರಾವರಿ, ಕೆರೆ, ಕಾಲುವೆಗಳ ಆಧುನೀಕರಣ, ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣ ಸೇರಿದಂತೆ ರೂ.9,331 ಕೋಟಿ ವೆಚ್ಚದ 77 ಹೊಸ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ಇದರಿಂದ ನೀರಿಲ್ಲದೆ ಬರಡಾಗಿದ್ದ ಭೂಮಿಗೂ ಇಂದು ಜೀವಜಲ ಹರಿಯುತ್ತಿದೆ ಎಂದು ಅವರು ಸರ್ಕಾರದ ಸಾಧನೆ ವಿವರಿಸಿದರು.

ಪ್ರತಿ ಟನ್‌ ಗೆ ರೂ.50 ರಂತೆ ರಾಜ್ಯ ಸರ್ಕಾರದಿಂದ ಒಟ್ಟು ರೂ.300 ಕೋಟಿ ಸಬ್ಸಿಡಿ ಹಂಚಿಕೆ ಮಾಡುವ ಮೂಲಕ ರೈತರಿಗೆ ಎದುರಾಗಿದ್ದ ಬಹುದೊಡ್ಡ ಸಂಕಷ್ಟದಿಂದ ಪಾರು ಮಾಡಿದ್ದೇವೆ. ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ನಗದು ರಹಿತ ಡಿಜಿಟಲ್ ವಹಿವಾಟು ಜಾರಿಗೊಳಿಸಿದ ದೇಶದ ಏಕೈಕ ರಾಜ್ಯ ಕರ್ನಾಟಕ. ರಾಜ್ಯದ ರೇಷ್ಮೆ ಮಾರಾಟ ಕೇಂದ್ರಗಳಲ್ಲಿ ನಗದು ರಹಿತ ಆನ್‌ ಲೈನ್‌ ವಹಿವಾಟು, ಇ-ಹರಾಜು ಹಾಗೂ ಇ-ತೂಕ ಮಾಪನ ವ್ಯವಸ್ಥೆಯ ಮೂಲಕ ಮಾರುಕಟ್ಟೆಯಲ್ಲಿ ಪಾರದರ್ಶಕತೆ ತಂದು, ರೇಷ್ಮೆ ಬೆಳೆಗಾರರ ಹಿತ ರಕ್ಷಿಸಲಾಗಿದೆ.

ಪ್ರವಾಹ ಸಂತ್ರಸ್ತರಿಗೆ ರೂ.1,218 ಕೋಟಿ

ಕಳೆದ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಳೆನಷ್ಟಕ್ಕೀಡಾದ ರಾಜ್ಯದ ರೈತರಿಗೆ ಸಕಾಲದಲ್ಲಿ ನೆರವಿಗೆ ನಿಂತಿದ್ದು ನಮ್ಮ ಸರ್ಕಾರ. ಪ್ರವಾಹ ಸಂತ್ರಸ್ತ 14.21 ಲಕ್ಷ ರೈತರಿಗೆ ರೂ.1,218 ಕೋಟಿ ಎಸ್.ಡಿ.ಆರ್.ಎಫ್‌ ಅನುದಾನ ಹಾಗೂ ರೂ.1,032 ಕೋಟಿ ಹೆಚ್ಚುವರಿಯಾಗಿ ಪರಿಹಾರ ಹಂಚಿಕೆ ಮಾಡಿ, ಕಷ್ಟಕಾಲದಲ್ಲಿ ಅನ್ನದಾತರ 'ಕೈ' ಹಿಡಿದಿದ್ದೇವೆ.

ಜಾನುವಾರು ಮತ್ತು ಕುರಿ/ಮೇಕೆಗಳು ಆಕಸ್ಮಿಕ ಮರಣ ಹೊಂದಿದರೆ ಪರಿಹಾರ ನೀಡುವ ಅನುಗ್ರಹ ಯೋಜನೆಗೆ ಮರುಚಾಲನೆ ನೀಡಲಾಗಿದೆ. ಈ ವರೆಗೆ ಸುಮಾರು ರೂ.100 ಕೋಟಿ ಪರಿಹಾರ ವಿತರಣೆ ಪರಿಹಾರದ ಹಣವನ್ನು ವಿತರಿಸುವ ಮೂಲಕ ಸಂಕಷ್ಟದಲ್ಲಿದ್ದ ಪಶು ಸಾಕಾಣಿಕೆದಾರರಿಗೆ ಸಕಾಲದಲ್ಲಿ ನೆರವಿಗೆ ನಿಲ್ಲಲಾಗಿದೆ ಎಂದರು.

ಲಕ್ಷಾಂತರ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ

ರಾಜ್ಯ ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ನೀಡಿದ್ದೇವೆ. ಹಕ್ಕು ಪತ್ರಗಳನ್ನು ಇಲ್ಲಿಯವರೆಗೆ 2.20 ಲಕ್ಷ ಕುಟುಂಬಗಳು ಪಡೆದಿವೆ. ಇದು ನಮ್ಮ ಸರ್ಕಾರದ ದಾಖಲೆ. ರಾಜ್ಯದ ಜಿಡಿಪಿ ಯನ್ನು ದೇಶದಲ್ಲೇ ನಂಬರ್ ಒನ್ ಆಗಿಸಿದ್ದು ನಮ್ಮ ಜನಪರ ಸರ್ಕಾರ.‌ ಕಂದಾಯ ಇಲಾಖೆಗೆ ಕೃಷ್ಣಬೈರೇಗೌಡರು ಸಚಿವರಾದ ಮೇಲೆ ಕ್ರಾಂತಿಕಾರಿ ಪ್ರಗತಿ ಆಗಿದೆ.‌ ಜಿಡಿಪಿ ತೆರಿಗೆ ಸಂಗ್ರಹದಲ್ಲೂ ರಾಜ್ಯ ದಾಖಲೆ ವೇಗದಲ್ಲಿ ಸಾಗುತ್ತಿದೆ ಎಂದು ಅವರು ತಮ್ಮ ಸರ್ಕಾರದ ಸಾಧನೆ ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+