ದೇವರಿದ್ದಾನೆ! ನಾಳೆ ಅಂತಿಮ ನಿರ್ಧಾರ ಪ್ರಕಟಿಸುವೆ: ಉಪ್ಪಿ
ಬಿಜೆಪಿಗೆ ಸೇರ್ತೀರಾ?.. ಅಯ್ಯೋ ಹಂಗೇನಿಲ್ಲ ಎಂದು ರಿಯಲ್ ಸ್ಟಾರ್ ಉಪೇಂದ್ರ ಸುದ್ದಿಗೋಷ್ಠಿಯಿಂದ ನಡೆದು ಹೋದರು. ಬೆಂಗಳೂರಿನ ಕತ್ರಿಗುಪ್ಪೆಯ ನಿವಾಸದಲ್ಲಿ ಸೋಮವಾರ(ಮಾರ್ಚ್ 05) ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕೆಪಿಜೆಪಿ ಹಾಗೂ ಪ್ರಜಾಕೀಯದ ನಡುವಿನ ಟಿಕೆಟ್ ರಾಜಕೀಯದ ಬಗ್ಗೆ ಸ್ಪಷ್ಟನೆ ನೀಡಿದ್ದರು.
ಭಾರಿ ನಿರೀಕ್ಷೆಯಿಂದ ಸ್ಥಾಪನೆಯಾಗಿದ್ದ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆ.ಪಿ.ಜೆ.ಪಿ ) ದಲ್ಲಿ ಭಿನ್ನಮತ ಸ್ಫೋಟಗೊಂಡಿರುವ ಸುದ್ದಿ ಸ್ಫೋಟಗೊಂಡ ಬಳಿಕ ಪಕ್ಷದ ಸ್ಥಾಪಕ ಮಹೇಶ್ ಗೌಡ ಹಾಗೂ ಪಕ್ಷದ ಅಧ್ಯಕ್ಷ ಉಪೇಂದ್ರ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಅವರೇ ನಮ್ಮ ಸಿದ್ಧಾಂತ ನಂಬಿ ಬಂದರು. ನನ್ನ ಪ್ರೆಸಿಡೆಂಟ್ ಮಾಡಿದರು, ಈಗ ಇನ್ನೇನು ಪ್ರಚಾರಕ್ಕೆ ಹೊರಡಬೇಕು ಎನ್ನುವಾಗ, ಫಂಡ್ ಕಲೆಕ್ಷನ್ ಬಗ್ಗೆ ಮಾತು ಬಂತು, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ತಲೆದೋರಿತು, ಯಾಕೆ ಹೀಗೆ ಆಯ್ತೋ ಗೊತ್ತಿಲ್ಲ ಎಂದು ಉಪೇಂದ್ರ ಹೇಳಿದರು.
ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದ ಉಪೇಂದ್ರ ಅವರಿಗೆ ಹಿನ್ನಡೆಯಾಗಿದೆ. ದೇವರಿದ್ದಾನೆ, ನನ್ನ ಅಂತಿಮ ನಿರ್ಧಾರವನ್ನು ಮಾರ್ಚ್ 06ರಂದು ಪ್ರಕಟಿಸುತ್ತೇನೆ ಎಂದಿದ್ದಾರೆ...ಉಪೇಂದ್ರ ಅವರ ಸುದ್ದಿಗೋಷ್ಠಿಯ ಮುಖ್ಯಾಂಶಗಳು ಇಲ್ಲಿವೆ...

ನಾನು ಉತ್ತರ ನೀಡಬೇಕಾಗುತ್ತದೆ
''ನಮಗೆ ಕಾರ್ಮಿಕರು ಬೇಕು. ಚುನಾವಣೆಗೆ ಅಭ್ಯರ್ಥಿಗಳನ್ನು ಸಂದರ್ಶನ ಮಾಡಿ, ಸಮೀಕ್ಷೆ ನಡೆಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಆದರೆ, ನಾವು ಆಯ್ಕೆ ಮಾಡಿದ ಅಭ್ಯರ್ಥಿಗಳ ಬಗ್ಗೆ ಅಪಸ್ವರ ಕೇಳಿ ಬಂದಿತು. ಬಿ-ಫಾರ್ಮ್ ನೀಡುವ ವಿಚಾರವಾಗಿ ಕೆಲವೊಂದು ಗೊಂದಲ ಉಂಟಾಗುವ ಭೀತಿ ಎದುರಾಯಿತು, ಹೀಗಾಗಿ, 150-200 ಅಭ್ಯರ್ಥಿಗಳ ಹಿತ ಕಾಯಲು ಸೈನಿಂಗ್ ಅಥಾರಿಟಿ ಕೇಳಿದೆ ಎಂದ ಉಪೇಂದ್ರ

ಪಕ್ಷವನ್ನು ಕೊಂಡುಕೊಳ್ಳಲಿಲ್ಲ
ಹಣವಿಲ್ಲದೆ ಮಾಡೋಣ, ವಿಚಾರ ಮುಖ್ಯ ಎಂದರು, ಒಂದೆರಡು ತಿಂಗಳು ಚೆನ್ನಾಗಿ ನಡೆಯಿತು. ಕೆಪಿಜೆಪಿ ಹಾಗೂ ಪ್ರಜಾಕೀಯ ಬಗ್ಗೆ ಅವರಿಗಿದ್ದ ಗೊಂದಲ ಪರಿಹಾರವಾದ ಬಳಿಕ ಈಗ ಟಿಕೆಟ್ ರಾಜಕೀಯ ಸಮಸ್ಯೆ ಎದುರಾಯಿತು. ಈ ಬಗ್ಗೆ ಸ್ಪಷ್ಟನೆ ನೀಡಲು ಮಾರ್ಚ್ 06ರಂದು ನಾನು ಅಭ್ಯರ್ಥಿಗಳ ಜತೆ ಮಾತನಾಡಿ ಇತ್ಯರ್ಥ ಮಾಡುವುದಕ್ಕೂ ಮುಂಚೆ ಆತುರವಾಗಿ ಅವರು ಮಾಧ್ಯಮಗಳ ಮುಂದೆ ಹೋಗಿ ನನ್ನನ್ನು ಡಿಕ್ಟೇಟರ್ ಎಂದೆಲ್ಲ ಹೇಳಿದ್ದಾರೆ.

ರಾಜಕೀಯ ಅಲ್ಲ, ಪ್ರಜಾಕೀಯ
ಹಣ, ಹೆಸರು ಬೇಡ, ನಿಮ್ಮ ಸಿದ್ಧಾಂತ ಒಪ್ಪಿದ್ದೇವೆ, ಪ್ರಜಾಕೀಯಕ್ಕೆ ಬೆಂಬಲವಿದೆ' ಎಂದು ಹೇಳಿದ್ದರಿಂದ ಅವರ ಜತೆ ಕೈಜೋಡಿಸಿದ್ದೆವು. ಆದರೆ, ಅವರ ಕಮಿಟಿಯವರು ಉಪೇಂದ್ರ ಸಿದ್ಧಾಂತ ಸರಿಯಿಲ್ಲ, ಅವರನ್ನು ಪಕ್ಷದಿಂದ ಹೊರ ಹಾಕೋಣ ಎಂದು ನಿರ್ಧರಿಸಿದರೆ, ಏನು ಮಾಡಲಿ ಎಂದು ಉಪೇಂದ್ರ ಪ್ರಶ್ನಿಸಿದ್ದಾರೆ.

ಡಿಕ್ಟೇಟರ್ ಶಿಪ್ ಎಂದು ಯಾಕೆ ಹೇಳಿದ್ರು?
ನಾನು ನಾಯಕ ಅಲ್ಲ. ನಾನು ಕಾರ್ಮಿಕ. ನಮಗೆ ಕಾರ್ಮಿಕರು ಬೇಕು. ರಾಜಕೀಯ ಮಾಡುವುದಾಗಿದ್ದರೆ, ನನ್ನ ಜೊತೆಗೆ ಬರಲೇಬಾರದಿತ್ತು. ಜನರಿಗೆ ನಾನು ಕಾರ್ಮಿಕರನ್ನು ಕೊಡುತ್ತೇನೆ ಎಂದು ಹೇಳಿದ್ದೇನೆ. ರಾಜರನ್ನು ಕೊಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಹೀಗಿರುವಾಗ, ಅಭ್ಯರ್ಥಿಗಳಿಗೆ ಇಪ್ಪತ್ತು ವೋಟ್ ಕೂಡ ಬರಲ್ಲ ಅಂದ್ರೆ ಏನರ್ಥ.?

ಬಿಜೆಪಿಗೆ ಸೇರ್ತೀರಾ?.
ಬಿಜೆಪಿಗೆ ಸೇರ್ತೀರಾ?.. ಅಯ್ಯೋ ಹಂಗೇನಿಲ್ಲ ಎಂದು ರಿಯಲ್ ಸ್ಟಾರ್ ಉಪೇಂದ್ರ ಸುದ್ದಿಗೋಷ್ಠಿಯಿಂದ ನಡೆದು ಹೋದರು. ಬೆಂಗಳೂರಿನ ಕತ್ರಿಗುಪ್ಪೆಯ ನಿವಾಸದಲ್ಲಿ ಸೋಮವಾರ (ಮಾರ್ಚ್ 05) ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕೆಪಿಜೆಪಿ ಹಾಗೂ ಪ್ರಜಾಕೀಯದ ನಡುವಿನ ಟಿಕೆಟ್ ರಾಜಕೀಯದ ಬಗ್ಗೆ ಸ್ಪಷ್ಟನೆ ನೀಡಿದ್ದರು. ನಾನು ಬೇರೆ ಪಕ್ಷ ಸೇರಬೇಕಾದ್ರೆ 6 ತಿಂಗಳಿನಿಂದ ಕೆಪಿಜೆಪಿಗಾಗಿ ದುಡಿಯಬೇಕಾಗಿರಲಿಲ್ಲ ಎಂದರು
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications