ಬಿಜೆಪಿ ಭದ್ರಕೋಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿದ್ದೇನು?

ಬೆಂಗಳೂರು,

ಸೆ.
17:
ಉತ್ತರ
ಕರ್ನಾಟಕವನ್ನು
ಬಿಜೆಪಿಯ
ಭದ್ರಕೋಟೆ
ಎಂದೆ
ಗುರುತಿಸಲಾಗುತ್ತದೆ.
ಹಾಗೆ
ಕಲ್ಯಾಣ
ಕರ್ನಾಟಕ
(ಹೈದರಾಬಾದ್
ಕರ್ನಾಟಕ)
ಕೂಡ
ಈಗ
ಬಿಜೆಪಿಗೆ
ಭದ್ರನೆಲೆಯಾಗಿದೆ.
ಸೋಲಿಲ್ಲದ
ಸರದಾರ
ಎಂದೇ
ಪರಿಚಿತರಾಗಿದ್ದ
ಮಾಜಿ
ಸಂಸದೀಯ
ನಾಯಕ
ಮಲ್ಲಿಕಾರ್ಜುನ್
ಖರ್ಗೆ
ಅವರನ್ನು
ಕಳೆದ
ಲೋಕಸಭಾ
ಚುನಾವಣೆಯಲ್ಲಿ
ಬಿಜೆಪಿ
ಸೋಲಿಸಿರುವುದು
ಇದಕ್ಕೆ
ಸಾಕ್ಷಿ.
ಇಷ್ಟೆಲ್ಲ
ಬೆಂಬಲ
ಕೊಟ್ಟರೂ
ಕೂಡ
ಕಲ್ಯಾಣ
ಕರ್ನಾಟಕವನ್ನು
ರಾಜ್ಯ
ಬಿಜೆಪಿ
ಸರ್ಕಾರ
ಅದರಲ್ಲೂ
ಮುಖ್ಯಮಂತ್ರಿ
ಬಿ.ಎಸ್.
ಯಡಿಯೂರಪ್ಪ
ಕಡೆಗಣಿಸಿದ್ದಾರೆ
ಎಂಬ
ಆರೋಪ
ಎದುರಾಗಿದೆ.

id="toptextpromo">
id='are-slot-1'
class='oiad
oi-axt
oiadv'>

ರಾಜ್ಯ

ಬಿಜೆಪಿ
ಸರ್ಕಾರ
ಕಲ್ಯಾಣ
ಕರ್ನಾಟಕದ
ಅಭಿವೃದ್ಧಿಯನ್ನು
ಸಂಪೂರ್ಣ
ಕಡೆಗಣಿಸಿದ್ದು,
ಭಾಗದ
ಬಗ್ಗೆ
ಮಲತಾಯಿ
ಧೋರಣೆ
ತೋರುತ್ತಿದೆ
ಎಂದು
ಕೆಪಿಸಿಸಿ
ಕಾರ್ಯಾಧ್ಯಕ್ಷ
ಈಶ್ವರ
ಖಂಡ್ರೆ
ಆರೋಪಿಸಿದ್ದಾರೆ.
ಬಜೆಟ್‍ನಲ್ಲಿ
ಹಂಚಿಕೆ
ಮಾಡಿದ್ದ
ಹಣವನ್ನೂ
ಕಡಿತ
ಮಾಡಿರುವುದು
ಇದಕ್ಕೆ
ಜ್ವಲಂತ
ಸಾಕ್ಷಿಯಾಗಿದೆ
ಎಂದು
ಆರೋಪಿಸಿದ್ದಾರೆ.
ಹಿಂದಿನ
ಕಾಂಗ್ರೆಸ್
ಸರ್ಕಾರದ
ಅವಧಿಯಲ್ಲಿ
ಹೈದರಾಬಾದ್
ಕರ್ನಾಟಕಕ್ಕೆ
ವಿಶೇಷ
ಸ್ಥಾನಮಾನ
ಕೊಡಲಾಗಿತ್ತು.
ಇದೇ
ವಿಚಾರದ
ಮೇಲೆ
ಕಾಂಗ್ರೆಸ್
ಪಕ್ಷ
ಕಳೆದ
ವಿಧಾನಸಭಾ
ಚುನಾವಣೆಯನ್ನೂ
ಎದುರಿಸಿತ್ತು.
ಆದರೆ
ಅದಾದ
ಬಳಿಕ
ಆರ್ಟಿಕಲ್
371(ಜೆ)ಗೆ
ತಿದ್ದುಪಡಿ
ತಂದಿದ್ದರೂ
ಪ್ರಯೋಜವಾಗಿಲ್ಲ
ಎಂದು
ಅಲ್ಲಿನ
ಜನರೇ
ಆರೋಪಿಸುತ್ತಿದ್ದಾರೆ.

id='are-slot-2'
class='oiad
oi-axt
oiadv'>

ಜನರನ್ನು ಮರಳು ಮಾಡುವುದನ್ನು 'ಕೈ'ಬಿಡಿ

ಜನರನ್ನು ಮರಳು ಮಾಡುವುದನ್ನು 'ಕೈ'ಬಿಡಿ

ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಹೆಸರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ ಮಾಡಿದ ಮಾತ್ರಕ್ಕೆ ತೀವ್ರ ಹಿಂದುಳಿದಿರುವ ಪ್ರದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ಮನಗಾಣಬೇಕು, ಜನರನ್ನು ಮರುಳು ಮಾಡುವ ಪ್ರಯತ್ನ ಕೈಬಿಟ್ಟು ಪ್ರಾದೇಶಿಕ ಅಸಮತೋಲನದಿಂದ ಬಳಲುತ್ತಿರುವ ವಲಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.


ಮಂಜೂರಾಗಿರುವ ಯೋಜನೆಗಳು, ಟೆಂಡರ್ ಆಗಿರುವ ಕಾಮಗಾರಿಗಳೂ ಇನ್ನೂ ಆರಂಭವಾಗಿಲ್ಲ. ವಿಶೇಷ ಸ್ಥಾನಮಾನ ಪಡೆದಿರುವ ಭಾಗಕ್ಕೆ ವಿಶೇಷ ಅನುದಾನ ನೀಡುವುದಿರಲಿ, ಹಂಚಿಕೆ ಮಾಡಿದ ಹಣವನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ. ಒಂದೂ ಕಾಲು ವರ್ಷದಿಂದ ಅಭಿವೃದ್ಧಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. 2019-20 ರ ಸಾಲಿನ ಬಜೆಟ್‍ನಲ್ಲಿ ಘೋಷಣೆಯಾಗಿದ್ದ 1500 ಕೋಟಿ ಅನುದಾನದಲ್ಲಿ ರೂ 1125 ಕೋಟಿ ಬಿಡುಗಡೆಯಾಗಿದ್ದು ಉಳಿದ ಹಣ 375 ಕೋಟಿ ರೂ. ಇನ್ನೂ ಬಿಡುಗಡೆ ಆಗಿಲ್ಲ ಎಂದಿದ್ದಾರೆ.

ಕ.ಕ. ಕ್ಕೆ ಅನುದಾನ ಕಡಿತ

ಕ.ಕ. ಕ್ಕೆ ಅನುದಾನ ಕಡಿತ

ಇನ್ನು 2020-21 ರ ಸಾಲಿನಲ್ಲಿ 2000 ಕೋಟಿ ರೂ. ನೀಡುವಂತೆ ಕೇಳಿದ್ದರೂ, 1500 ಕೋಟಿ ಮೀಸಲಿಟ್ಟರು, ಈಗ ಅದರಲ್ಲಿ 1136.86 ಕೋಟಿ ರೂ. ಕ್ರಿಯಾ ಯೋಜನೆ ಮಾಡಿದ್ದಾರೆ. ಇದರಲ್ಲೂ ಹಣ ಕಡಿತ ಆಗಿದೆ. 2020-21ರಲ್ಲಿ ಇಲ್ಲಿಯವರೆಗೆ ಆರು ತಿಂಗಳುಗಳಲ್ಲಿ ಒಂದೇ ಒಂದು ಕ್ರಿಯಾ ಯೋಜನೆಗೆ ಅನುಮೋದನೆ ನೀಡಿಲ್ಲ. ಇದು ಕಲ್ಯಾಣ ಕರ್ನಾಟಕಕ್ಕೆ ಮಾಡಿದ ಘನ ಘೋರ ಅನ್ಯಾಯ ಎಂದು ಖಂಡ್ರೆ ಹೇಳಿದ್ದಾರೆ.


ಉಪ ಚುನಾವಣೆ ನಡೆದ ಒಂದೊಂದು ಕ್ಷೇತ್ರಕ್ಕೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾವಿರಾರು ಕೋಟಿ ರೂಪಾಯಿ ಯೋಜನೆ, ಪ್ಯಾಕೇಜ್ ಪ್ರಕಟಿಸಿದರು. ಆದರೆ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಏಕೆ ಇಂತಹ ಪ್ಯಾಕೇಜ್ ನೀಡುತ್ತಿಲ್ಲ?. ಈ ಭಾಗದ ಜನರು ಕರ್ನಾಟಕದವರಲ್ಲವೇ? ಎಂದಿದ್ದಾರೆ.

ಬಿಜೆಪಿ ಸರ್ಕಾರದ ಶೂನ್ಯ ಸಾಧನೆ

ಬಿಜೆಪಿ ಸರ್ಕಾರದ ಶೂನ್ಯ ಸಾಧನೆ

14 ತಿಂಗಳಲ್ಲಿ ಹೊಸ ರಸ್ತೆಯಾಗಲೀ, ನೀರಾವರಿ ಕಾಮಗಾರಿಯಾಗಲೀ, ಹೊಸ ಕಾಲೇಜುಗಳಾಗಲಿ, ವಿವಿಧ ಹುದ್ದೆಗಳ ಭರ್ತಿ ಆಗಲೀ, ಯಾವುದೂ ನಡೆಯುತ್ತಿಲ್ಲ. ಹಿಂದುಳಿದ ಕಲ್ಯಾಣ ಕರ್ನಾಟಕದ ಬಗ್ಗೆ ಸರ್ಕಾರಕ್ಕೆ ವಿಶೇಷ ಕಳಕಳಿ ಇರಲಿ ಕನಿಷ್ಠ ಕಾಳಜಿಯೂ ಇಲ್ಲ ಎಂದು ಆರೋಪಿಸಿದ್ದಾರೆ.

ಸರ್ಕಾರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕಂತಿಕ ಸಂಘಕ್ಕೆ 500 ಕೋಟಿ ರೂ. ಆಯವ್ಯಯದಲ್ಲಿ ಹಂಚಿಕೆ ಮಾಡಿದ್ದು ಅದರ ಉದ್ಘಾಟನೆಯೂ ಆಗಿದೆ. ಆದರೆ ಕ್ರಿಯಾ ಯೋಜನೆಯಾಗಿಲ್ಲ, ಅ ಸಂಘಕ್ಕೆ ಯಾವುದೇ ರೂಪುರೇಷೆಯೂ ಇಲ್ಲ. ಹೀಗೆ ಕಾಗದದ ಮೇಲೆ ಯೋಜನೆ ರೂಪಿಸುವುದರಿಂದ ಏನು ಪ್ರಯೋಜನ ಎಂದು ಈಶ್ವರ ಖಂಡ್ರೆ ಅವರು ಪ್ರಶ್ನೆ ಎತ್ತಿದ್ದಾರೆ.

Recommended Video

    Modiಗೆ ನಮ್ಮ ಕುಮಾರಣ್ಣ ಕೇಳಿದ ಆ ಪ್ರಶ್ನೆ ಯಾವುದು | Oneindia Kannada
    2 ಸಾವಿರ ಕೋಟಿ ಬಿಡುಗಡೆ ಮಾಡಿ

    2 ಸಾವಿರ ಕೋಟಿ ಬಿಡುಗಡೆ ಮಾಡಿ

    ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಇಂದು ಕಲಬುರಗಿಗೆ ಬರುತ್ತಿದ್ದಾರೆ. ತಕ್ಷಣವೇ ಅವಶ್ಯಕತೆ ಇರುವ 2000 ಕೋಟಿ ರೂ. ಹಾಗೂ ಹಿಂದಿನ ಸಾಲಿನ ಬಾಕಿ ಹಣವನ್ನೂ ಬಿಡುಗಡೆ ಮಾಡಿ ಉಳಿದ ಆರು ತಿಂಗಳಲ್ಲಿ ಅಭಿವೃದ್ಧಿಗೆ ಗಮನ ಹರಿಸಬೇಕು, ಖಾಲಿ ಹುದ್ದೆಗಳ ಭರ್ತಿಗೆ ಮತ್ತು ನೈಜವಾಗಿ ಈ ಭಾಗದ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+