ಕೋಟಿ ವೃಕ್ಷ ಆಂದೋಲನಕ್ಕೆ ಮುಖ್ಯಮಂತ್ರಿಯಿಂದ ಚಾಲನೆ
ಬೆಂಗಳೂರು, ಜುಲೈ, 15: ಅರಣ್ಯ ಸಂರಕ್ಷಣೆ ಮತ್ತು ಬೆಳಸುವ ಉದ್ದೇಶದಿಂದ ಕರ್ನಾಟಕ ಕೋಟಿ ವೃಕ್ಷ ಆಂದೋಲನ ಹಮ್ಮಿಕೊಂಡಿದೆ. ವಿವಿಧ ಜಿಲ್ಲೆಗಳಲ್ಲಿ ಆಂದೋಲನಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.
ಕೋಟಿ ವೃಕ್ಷ ಆಂದೋಲನದ ಭಾಗವಾಗಿ ಬೆಂಗಳೂರಿನಲ್ಲಿ ಆಯೋಜಿಸಿದ್ದ 'ವನಮಹೋತ್ಸವ-2016' ಗಿಡನೆಡುವ ಮತ್ತು ಹೆಣ್ಣುರು ಕೆರೆ ಜೀವ ವೈವಿಧ್ಯ ವನದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಉದ್ಘಾಟಿಸಿದರು.['ಕಾಡಿನಲ್ಲೆ ಹುಟ್ಟಿ ಕಾಡಿನಲ್ಲೇ ಬದುಕಿ ಸಾಯುತ್ತೇವೆ!']

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ಅರಣ್ಯ ಸಂರಕ್ಷಣೆ ಒಂದು ದಿನದ ಕೆಲಸವಲ್ಲ. ಇದನ್ನು ನಿರಂತರವಾಗಿ ನಡೆಸಿಕೊಂಡು ಹೋಗಬೇಕಿದೆ. ನೆಟ್ಟ ಗಿಡಗಳನ್ನು ಪೋಷಿಸುವುದು ಅಷ್ಟೇ ಮುಖ್ಯ ಎಂದು ಹೇಳಿದರು.[8 ಕೋಟಿ ಸಸಿ ನೆಡುವ ಗುರಿ ಸರ್ಕಾರದ ಮುಂದೆ]

ಅರಣ್ಯ ಸಚಿವ ಬಿ.ರಮಾನಾಥ್ ರೈ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್, ಮೇಯರ್ ಬಿ.ಎನ್ ಮಂಜುನಾಥ್ ರೆಡ್ಡಿ ಮತ್ತಿರರು ಉಪಸ್ಥಿತರಿದ್ದರು.












Click it and Unblock the Notifications