ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೋಟಿ ವೃಕ್ಷ ಆಂದೋಲನಕ್ಕೆ ಮುಖ್ಯಮಂತ್ರಿಯಿಂದ ಚಾಲನೆ
ಬೆಂಗಳೂರು, ಜುಲೈ, 15: ಅರಣ್ಯ ಸಂರಕ್ಷಣೆ ಮತ್ತು ಬೆಳಸುವ ಉದ್ದೇಶದಿಂದ ಕರ್ನಾಟಕ ಕೋಟಿ ವೃಕ್ಷ ಆಂದೋಲನ ಹಮ್ಮಿಕೊಂಡಿದೆ. ವಿವಿಧ ಜಿಲ್ಲೆಗಳಲ್ಲಿ ಆಂದೋಲನಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.
ಕೋಟಿ ವೃಕ್ಷ ಆಂದೋಲನದ ಭಾಗವಾಗಿ ಬೆಂಗಳೂರಿನಲ್ಲಿ ಆಯೋಜಿಸಿದ್ದ 'ವನಮಹೋತ್ಸವ-2016' ಗಿಡನೆಡುವ ಮತ್ತು ಹೆಣ್ಣುರು ಕೆರೆ ಜೀವ ವೈವಿಧ್ಯ ವನದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಉದ್ಘಾಟಿಸಿದರು.['ಕಾಡಿನಲ್ಲೆ ಹುಟ್ಟಿ ಕಾಡಿನಲ್ಲೇ ಬದುಕಿ ಸಾಯುತ್ತೇವೆ!']
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ಅರಣ್ಯ ಸಂರಕ್ಷಣೆ ಒಂದು ದಿನದ ಕೆಲಸವಲ್ಲ. ಇದನ್ನು ನಿರಂತರವಾಗಿ ನಡೆಸಿಕೊಂಡು ಹೋಗಬೇಕಿದೆ. ನೆಟ್ಟ ಗಿಡಗಳನ್ನು ಪೋಷಿಸುವುದು ಅಷ್ಟೇ ಮುಖ್ಯ ಎಂದು ಹೇಳಿದರು.[8 ಕೋಟಿ ಸಸಿ ನೆಡುವ ಗುರಿ ಸರ್ಕಾರದ ಮುಂದೆ]
ಅರಣ್ಯ ಸಚಿವ ಬಿ.ರಮಾನಾಥ್ ರೈ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್, ಮೇಯರ್ ಬಿ.ಎನ್ ಮಂಜುನಾಥ್ ರೆಡ್ಡಿ ಮತ್ತಿರರು ಉಪಸ್ಥಿತರಿದ್ದರು.
Comments
English summary
The decrease in tree coverage due to population explosion and urbanisation have led to climate change and global warming, said Chief Minister Siddaramaiah. After inaugurating 'Koti Vruksha Andolana, at Hennur lake, Bengaluru.
Story first published: Friday, July 15, 2016, 16:53 [IST]