10 ಸಾವಿರ ಟನ್ ದಾಟಲಿದೆ ಕರ್ನಾಟಕದ ಮಾವು ರಫ್ತು
ಕರ್ನಾಟಕದಲ್ಲಿ ಬರಗಾಲ ಮತ್ತು ಅಕಾಲಿಕ ಮಳೆಯಿಂದಾಗಿ ಈ ಬಾರಿ ಮಾವು ಬೆಳೆ ಕಡಿಮೆಯಾಗಿದ್ದರೂ, ವಿದೇಶಗಳಿಂದ ಮಾವಿಗೆ ಒಳ್ಳೆ ಬೇಡಿಕೆಗಳು ಬಂದಿವೆ. ಅಂದಾಜು 10 ಸಾವಿರ ಟನ್ ಮಾವು ವಿದೇಶಗಳಿಗೆ ರಫ್ತಾಗುವ ಸಾಧ್ಯತೆ ಇದೆ.
ಬೆಂಗಳೂರು, ಏಪ್ರಿಲ್ 23: ನಿಧಾನಕ್ಕೆ ಹಣ್ಣಿನ ರಾಜ ಮಾವು ಮಾರುಕಟ್ಟೆಗೆ ಬರಲಾರಂಭಿಸಿದೆ. ಮಾವು ಪ್ರಿಯರಿಗೆ ಇದು ಖುಷಿಯ ಸುದ್ದಿಯಾದರೆ, ಬೆಳೆಗಾರರಿಗೂ ಸಂತಸದ ಸುದ್ದಿಯೊಂದಿದೆ.
ಕರ್ನಾಟಕದಲ್ಲಿ ಬರಗಾಲ ಮತ್ತು ಅಕಾಲಿಕ ಮಳೆಯಿಂದಾಗಿ ಈ ಬಾರಿ ಮಾವು ಬೆಳೆ ಕಡಿಮೆಯಾಗಿದ್ದರೂ, ವಿದೇಶಗಳಿಂದ ಮಾವಿಗೆ ಒಳ್ಳೆ ಬೇಡಿಕೆಗಳು ಬಂದಿವೆ. ಅಂದಾಜು ಈ ಬಾರಿ ಸುಮಾರು 10 ಸಾವಿರ ಟನ್ ಮಾವು ವಿದೇಶಗಳಿಗೆ ರಫ್ತಾಗುವ ಸಾಧ್ಯತೆ ಇದೆ.[ಮೇವು ಒದಗಿಸಲಾಗುವುದಿಲ್ಲ, ಗೋವುಗಳನ್ನು ಮಾರಿಬಿಡ್ರೀ.. ಅತ್ಲಾಗೆ!]

ಸದ್ಯ ಈಗಾಗಲೇ ಅಮೆರಿಕಾದಿಂದ 1,500 ಟನ್ ಮಾವಿಗೆ ಬೇಡಿಕೆ ಬಂದಿದೆ. ಇನ್ನು ಅಮೆರಿಕಾ, ಯೂರೋಪ್, ಯುಎಇ, ಕುವೈಟ್, ಜಪಾನ್, ಮಲೇಷ್ಯಾ, ಸಿಂಗಾಪುರ, ದಕ್ಷಿಣ ಕೊರಿಯಾ ಹಾಗೂ ಇತರ ದೇಶಗಳಿಗೆ 10 ಸಾವಿರ ಟನ್ ಮಾವು ರಫ್ತಾಗುವ ನಿರೀಕ್ಷೆ ಇದೆ.
ಉತ್ತಮ ಗುಣಮಟ್ಟದ ಅಲ್ಫೊನ್ಸೊ, ಬಂಗನಪಲ್ಲಿ, ಮಲ್ಲಿಕಾ ಮಾವುಗಳು ದೊರೆತಲ್ಲಿ ಬೇಡಿಕೆ ಮತ್ತಷ್ಟು ಜಾಸ್ತಿ ಆಗುವ ಸಾಧ್ಯತೆಗಳೂ ಇವೆ. ಮೇ ಮಧ್ಯ ಭಾಗದಲ್ಲಿ ಮಾವು ಕಟಾವಿಗೆ ಬರಲಿದ್ದು ಈ ವೇಳೆ ಉತ್ತಮ ಗುಣಮಟ್ಟದ ಮಾವಿನ ಪ್ರಮಾಣದ ಲೆಕ್ಕ ಸಿಗಲಿದೆ. ಅಮೆರಿಕಾ ಮುಂತಾದ ದೇಶಗಳು ಉತ್ತಮ ಗುಣಮಟ್ಟದ ಮಾವುಗಳನ್ನು ಮಾತ್ರ ಸ್ವೀಕರಿಸುವುದರಿಂದ ಅವುಗಳನ್ನು ಮಾತ್ರ ರಫ್ತು ಮಾಡಲು ಸಾಧ್ಯವಾಗುತ್ತದೆ.[ಗರಿಷ್ಠ ತಾಪಮಾನದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಕಲಬುರಗಿ]

ಕರ್ನಾಟಕದಲ್ಲಿ ಸುಮಾರು 2.2 ಲಕ್ಷ ಹೆಕ್ಟೇರ್ ಭಾಗದಲ್ಲಿ ಮಾವು ಬೆಳೆಯಲಾಗುತ್ತದೆ. ರೈತರು ವರ್ಷವೊಂದಕ್ಕೆ 13-18 ಲಕ್ಷ ಟನ್ ಮಾವು ಬೆಳೆಯುತ್ತಾರೆ. ಇದರಲ್ಲಿ ಕೋಲಾರದ ಪಾಲೇ ಅತೀ ಹೆಚ್ಚಾಗಿದೆ. ದೇಶದಲ್ಲಿ ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶ ಬಿಟ್ಟರೆ ಅತೀ ಹೆಚ್ಚು ಮಾವು ಬೆಳೆಯುವ ರಾಜ್ಯವೂ ಕರ್ನಾಟಕವಾಗಿದೆ.
ಈ ಬಾರಿ ಮಾತ್ರ ಕರ್ನಾಟಕದಲ್ಲಿ ತೀವ್ರ ಬರಗಾಲ ಬಂದಿರುವುದರಿಂದ ಕೇವಲ 10 ಲಕ್ಷ ಟನ್ ಬೆಳೆ ಸಿಗಬಹುದು ಎಂದು ಅಂದಾಜು ಮಾಡಲಾಗಿದೆ. ಕಳೆದ ವರ್ಷ 14 ಲಕ್ಷ ಟನ್ ಮಾವು ಉತ್ಪಾದನೆಯಾಗಿತ್ತು.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications