ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ
ಬೆಂಗಳೂರು, ಆಗಸ್ಟ್ 16: ಮಾಹಿತಿ ತಂತ್ರಜ್ಞಾನ, ಉತ್ತಮ ಸೇವೆ ವಿಭಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 'ನ್ಯಾಷನಲ್ ಟ್ರಾನ್ಸ್ಪೋರ್ಟ್ ಎಕ್ಸಲೆನ್ಸ್' ಪ್ರಶಸ್ತಿಗೆ ಪಾತ್ರವಾಗಿದೆ.
ರಾಜ್ಯ ಸಾರಿಗೆ ಸಂಸ್ಥೆಗಳ ಒಕ್ಕೂಟ ಏರ್ಪಡಿಸಿದ್ದ ಸುವರ್ಣ ಜಯಂತಿ ಮಹೋತ್ಸವದಲ್ಲಿ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಕೆಎಸ್ಸಾರ್ಟಿಸಿ
ತನ್ನ
ಕಾರ್ಯಕ್ಷೇತ್ರ
ವ್ಯಾಪ್ತಿಯಲ್ಲಿ
ಬಸ್ಗಳ
ನಿರ್ವಹಣೆ,
ವಾಹನ
ಟ್ರಾಕಿಂಗ್,
ಸೀಟು
ಕಾಯ್ದಿರಿಸುವಿಕೆ,
ಮಾನವ
ಸಂಪನ್ಮೂಲ,
ಪರಿಸರ
ನಿರ್ವಹಣೆ
ಸೇರಿದಂತೆ
ಇತರ
ಕಾರ್ಯಚಟುವಟಿಕೆಗಳಿಗೆ
ಮಾಹಿತಿ
ತಂತ್ರಜ್ಞಾನವನ್ನು
ಸದುಪಯೋಗಪಡಿಸಿಕೊಂಡಿದೆ.[ಕೆಎಸ್ಸಾರ್ಟಿಸಿಗೆ
ಗ್ರೀನ್ಟೆಕ್
ಎಚ್ಆರ್
ಪ್ರಶಸ್ತಿ]
ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿರುವುದರಿಂದ ಈ ಸಾಲಿನ ನ್ಯಾಷನಲ್ ಟ್ರಾನ್ಸ್ಪೋರ್ಟ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಲಾಗಿದೆ. ಕಾರ್ಯಕ್ರಮದಲ್ಲಿ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಛಿಬ್ಬರ್ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ ಸಾರಿಗೆ ಸಂಸ್ಥೆಗಳ ಒಕ್ಕೂಟ (ASRTU) ಆರಂಭಿಸಿರುವ ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ನೀಡಲಾಗುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಇದಕ್ಕೆ ಮಾನ್ಯತೆ ಸಿಗಲಿದೆ.
ಇತ್ತೀಚೆಗೆ ಕೆಎಸ್ಸಾರ್ಟಿಸಿ ನಿಗಮದಲ್ಲಿ ಅನುಷ್ಠಾನಗೊಳಿಸಿರುವ ಸ್ಟಾಫ್ ಡ್ಯೂಟಿ ರೋಟಾ ಸಿಸ್ಟಮ್ ಉಪಕ್ರಮದ ಯಶಸ್ಸಿಗೆ ಮಾನವ ಸಂಪನ್ಮೂಲ ವಿಭಾಗದ ಅತ್ಯುತ್ತಮ ಉಪಕ್ರಮ ಎಂದು ಎಚ್ಆರ್ ವರ್ಗದಲ್ಲಿ ಪ್ಲಾಟಿನಂ ಪ್ರಶಸ್ತಿ ಪಡೆದುಕೊಂಡಿತ್ತು.