Get Updates
Get notified of breaking news, exclusive insights, and must-see stories!

Karnataka Rain: ರಾಜ್ಯದಲ್ಲಿ ಮಳೆಯಾದರೂ ಉಳಿದೇ ಇದೆ ಬರಗಾಲದ ಭೀತಿ- ಯಾವ ಜಿಲ್ಲೆಗಳಲ್ಲಿ ತಿಳಿಯಿರಿ

ಬೆಂಗಳೂರು, ಜುಲೈ 14: ರಾಜ್ಯದಾದ್ಯಂತ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕರಾವಳಿ ಕರ್ನಾಟಕದಲ್ಲಿ ವ್ಯಾಪಕ ಮಳೆ ಬೀಳುತ್ತಿದೆ. ಆದರೆ ಕರ್ನಾಟಕದ ಉಳಿದ ಭಾಗಗಳಲ್ಲಿ ಮಳೆಯ ಕೊರತೆ ಎದ್ದು ಕಾಣುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಿಗೆ ಬರಗಾಲದ ಛಾಯೆ ಆವರಿಸಿದೆ.

ಕರಾವಳಿ ಸುರಿದ ಮಳೆಗೆ 10 ಸಾವುಗಳು ವರದಿಯಾಗಿವೆ. ಪ್ರವಾಹದ ಭೀತಿಯು ಮುಂದಿವರಿದಿದೆ. ಆದರೆ, ರಾಜ್ಯದ ವಿವಿಧ ಭಾಗಗಳಲ್ಲಿ ಬರ ಮತ್ತು ಬೆಳೆ ನಷ್ಟದ ಭೀತಿ ರೈತರನ್ನು ಕಾಡುತ್ತಿದೆ.

Heavy rain is lashing many districts

ಕಳೆದ ಕೆಲವು ದಿನಗಳಿಂದ ಸುರಿದ ಮಳೆಯು ಕರ್ನಾಟಕದಾದ್ಯಂತ ಮಳೆಯ ಕೊರತೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡಿದೆ. ಆದರೆ, ಜೂನ್ 1 ರಿಂದ ಜುಲೈ 9 ರ ಅವಧಿಯಲ್ಲಿ ಮಳೆಯು ಸಾಮಾನ್ಯಕ್ಕಿಂತ ಕಡಿಮೆಯಾಗಿದೆ.

ಜೂನ್ 30 ರಂದು ರಾಜ್ಯವು ಶೇ 36 ರಷ್ಟು ಮಳೆ ಕೊರತೆಯನ್ನು ಹೊಂದಿತ್ತು. ಜುಲೈ 1 ರಿಂದ ಜುಲೈ 9 ರ ವೇಳೆಗೆ ಮಳೆ ಕೊರತೆಯು ಶೇ 23 ಕ್ಕೆ ತಗ್ಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಪ್ರಕಾರ, ಜೂನ್‌ನಲ್ಲಿ ದಕ್ಷಿಣ ಒಳನಾಡು 23ರಷ್ಟು ಮಳೆ ಕೊರತೆಯನ್ನು ಕಂಡಿದೆ. ಜುಲೈ 9 ರ ವೇಳೆಗೆ ಇದು ಶೇ 9 ಕ್ಕೆ ತಗ್ಗಿದೆ. ಉತ್ತರ ಒಳನಾಡಿನಲ್ಲಿ ಜೂನ್‌ನಲ್ಲಿ ಶೇ 55 ಕೊರತೆ ಇರುವುದು ಕಂಡುಬಂದಿದೆ. ಅದು ಜುಲೈನಲ್ಲಿ ಶೇ 37 ಕ್ಕೆ ಕುಗ್ಗಿದೆ.

Heavy rain is lashing many districts

ಮಲೆನಾಡು ಭಾಗದಲ್ಲಿ ಜೂನ್‌ನಲ್ಲಿ ವಾಡಿಕೆಗಿಂತ ಶೇ 74 ಕಡಿಮೆ ಮಳೆಯಾಗಿದೆ. ಜುಲೈ 9 ಕ್ಕೆ ಇದು ಶೇ 53ಕ್ಕೆ ತಗ್ಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜೂನ್ ಅಂತ್ಯದ ವೇಳೆಗೆ ಶೇ 56 ರಷ್ಟು ಕೊರತೆಯನ್ನು ಎದುರಿಸಿವೆ. ಆದರೆ ಜುಲೈ 1 ಮತ್ತು 9 ರ ನಡುವೆ ತೀವ್ರವಾದ ಮಳೆಯು ಕೊರತೆಯನ್ನು ಶೇ 32 ಕ್ಕೆ ತಗ್ಗಿಸಲು ಸಹಾಯ ಮಾಡಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದಲ್ಲಿನ ನೀರು ಸಂಗ್ರಹವು ತೀವ್ರವಾಗಿ ಕುಸಿದಿದೆ. ನಾಲ್ಕು ಜಿಲ್ಲೆಗಳಾದ ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ರೈತರನ್ನು ಸಂಕಷ್ಟಕ್ಕೆ ದೂಡಿದೆ.

Heavy rain is lashing many districts

ಕೊಪ್ಪಳ, ವಿಜಯನಗರ, ರಾಯಚೂರು ಮತ್ತು ಬಳ್ಳಾರಿಯಲ್ಲಿ ಕುಡಿಯುವ ನೀರಿನ ಅವಶ್ಯಕತೆಗಳನ್ನು ಪೂರೈಸಲು ಅಣೆಕಟ್ಟಿನಲ್ಲಿ ಲಭ್ಯವಿರುವ ಅಲ್ಪ ನೀರನ್ನು ಆರು ತಿಂಗಳವರೆಗೆ ಸಂಗ್ರಹಿಸಿ ಇಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರ ಗದ್ದೆಗಳಿಗೆ ನೀರು ಬೀಡುವಂತಿಲ್ಲ. ಇದು ಮುಂಗಾರು ಕೃಷಿಯ ಮೇಲೆ ಭಾರೀ ಪರಿಣಾಮ ಬೀರಲಿದೆ.

ಕಳೆದ ವಾರ ಕೊಡಗಿನಲ್ಲಿ ಭಾರಿ ಮಳೆಯಾಗಿದ್ದು, ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟೆಗೆ ಒಳಹರಿವು ಹೆಚ್ಚಾಗಿದೆ. ಆದರೆ ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ತಗ್ಗಲಿದ್ದು, ಒಳಹರಿವು ಕಡಿಮೆಯಾಗಲಿದೆ.

ಕಳೆದ ಕೆಲವು ದಿನಗಳಿಂದ ಕಲ್ಯಾಣ ಕರ್ನಾಟಕ ಭಾಗದ ಕೆಲವು ಭಾಗಗಳಲ್ಲಿ ಮಳೆಯಾಗಿದ್ದರೂ, ಪ್ರದೇಶದ ಯಾವುದೇ ಭಾಗದಲ್ಲಿ ಬಿತ್ತನೆ ಮಾಡಲು ಸಾಕಷ್ಟು ಮಳೆಯಾಗಿಲ್ಲ. ಹಾವೇರಿಯಲ್ಲಿ ಶೇ 42, ಬೆಳಗಾವಿಯಲ್ಲಿ ಶೇ 27, ಕಲಬುರಗಿಯಲ್ಲಿ ಶೇ 8 ಮಳೆಯ ಕೊರತೆಯಿದೆ. ರಾಯಚೂರು, ಧಾರವಾಡ, ಹಾವೇರಿ, ಯಾದಗಿರಿ, ಬಾಗಲಕೋಟೆ, ಬೀದರ್, ಕೊಪ್ಪಳ ಮುಂತಾದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+