IPS Transfer: 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಜುಲೈ 15: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು, ಬರೋಬ್ಬರಿ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಡಿಐಜಿ ಎಂ ಎನ್ ಅನುಚೇತ್ ದಕ್ಷಿಣ ಕನ್ನಡದ ಕಾನೂನು ಸುವ್ಯವಸ್ಥೆ ಡಿಸಿಪಿ ಜಿತೇಂದ್ರ ಕುಮಾರ್ ಸೇರಿದಂತೆ 35 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎನ್ನುವ ವಿಪಕ್ಷಗಳ ಆರೋಪ ಹಾಗೂ ಅಧಿಕಾರಿಗಳ ಅಕ್ರಮದ ಬಗ್ಗೆ ವರದಿ ಹೆಚ್ಚಿದ ಹಿನ್ನೆಲೆ ಕರ್ನಾಟಕ ಸರ್ಕಾರ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. ಅಪರಾಧ ವಿಭಾಗ, ಸಂಚಾರ ವಿಭಾಗ ಸೇರಿದಂತೆ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಐಪಿಎಸ್ ಅಧಿಕಾರಿಗಳ ವರ್ಗಾವಣೆ
* ಕೇಂದ್ರ ವಿಭಾಗ ಡಿಸಿಪಿ- ಅಕ್ಷಯ್ ಮಚೀಂದ್ರ.
*ಜಂಟಿ ಪೊಲೀಸ್ ಆಯುಕ್ತ ಅಪರಾಧ - ಅಜಯ್ ಹಿಲೋರಿ
* ವೈಟ್ ಫೀಲ್ಡ್ ಡಿಸಿಪಿ - ಪರಶುರಾಮ್
* ಜಂಟಿ ಪೊಲೀಸ್ ಆಯುಕ್ತ ಸಂಚಾರ - ಕಾರ್ತಿಕ್ ರೆಡ್ಡಿ
* ಬೆಂಗಳೂರು ಪಶ್ಚಿಮ ವಿಭಾಗ ಸಂಚಾರ - ಅನುಪ್ ಶೆಟ್ಟಿ
* ಲೋಕಾಯುಕ್ತ. ಎಸ್ಪಿ ಬೆಂಗಳೂರು - ಶಿವಪ್ರಕಾಶ್ ದೇವರಾಜು.
* ಡಿಸಿಪಿ ಉತ್ತರ ಸಂಚಾರ ವಿಭಾಗ - ಜಯಪ್ರಕಾಶ್
* ಡಿಸಿಪಿ ಎಲೆಕ್ಟ್ರಾನಿಕ್ ಸಿಟಿ ವಿಭಾಗ- ಎಂ ನಾರಾಯಣ್
* ಆಗ್ನೇಯ ವಿಭಾಗ ಡಿಸಿಪಿ - ಅನಿತಾ ಬಿ ಹದ್ದನವರ್
* ಸಿಐಡಿ ಎಸ್ಪಿ - ಸೈದಲು ಅಡವಾತ್
* ಡಿಸಿಪಿ ಉತ್ತರ ವಿಭಾಗ - ಬಾಬಾ ಸಾಬ್ ನ್ಯಾಮಗೌಡ
* ವಾಯುವ್ಯ ವಿಭಾಗ ಡಿಸಿಪಿ - ನಾಗೇಶ್
* ಸಿಸಿಬಿ ಡಿಸಿಪಿ - ಶ್ರೀಹರಿ ಬಾಬು.
*ಡಿಸಿಪಿ ಸಿಎಆರ್ ಹೆಡ್ ಕ್ವಾರ್ಟರ್ಸ್ -ಸೌಮ್ಯಲತಾ
* ಎಂ ಎನ್ ಅನುಚ್ಛೇತ್- ಡಿಐಜಿ ನೇಮಕಾತಿ ವಿಭಾಗ
* ವರ್ತಿಕಾ ಕಟೀಯಾರ್ -ಡಿಐಜಿ ಬಳ್ಳಾರಿ ವಲಯ
* ಶಾಂತರಾಜು - ಎಸ್ಪಿ, ಗುಪ್ತಚರ ಇಲಾಖೆ
* ಸಿರಿಗೌರಿ - ಎಸ್ಪಿ ರಾಜ್ಯ ಅಪರಾಧ ದಾಖಲೆ ವಿಭಾಗ.
* ಸುಮನ್ ಡಿ ಪೆನ್ನೆಕರ್ - ಡಿಸಿಪಿ ಇಂಟಲಿಜೆನ್ಸ್
* ಸಿಮಿ ಮರೀಯ ಜಾರ್ಜ್ - ಡಿಸಿಪಿ ದಕ್ಷಿಣ ವಿಭಾಗ ಸಂಚಾರ.
* ಅಮರ್ ನಾಥ್ ವೈ - ಕಮಾಂಡೆಂಟ್ ಫಸ್ಟ್ ಬೆಟಾಲಿಯನ್ ಕೆಎಸ್ ಆರ್ ಪಿ.
* ಯಶೋಧ ವಟ್ಟಗೋಡಿ - ಎಸ್ಪಿ ಹಾವೇರಿ.
* ಗುಂಜನ್ ಅರ್ಯಾ - ಎಸ್ಪಿ ಧಾರವಾಡ.
* ಗೋಪಾಲ್ ಎಂ - ಜಂಟಿ ನಿರ್ದೇಶಕ ಎಫ್ ಎಸ್ ಎಲ್ ಬೆಂಗಳೂರು.
* ಸಿದ್ದಾರ್ಥ ಗೋಯಲ್ - ಎಸ್ಪಿ, ಬಾಗಲಕೋಟೆ
* ರೋಹನ್ ಜಗದೀಶ್ - ಎಸ್ಪಿ, ಗದಗ್
* ಶಿವಾಂಶು ರಜಪೂತ - ಎಸ್ಪಿ ,ಕೆಜಿಎಫ್
* ಜಿತೇಂದ್ರ ಕುಮಾರ್ - ಡಿಸಿಪಿ ಕಾನೂನು ಸುವ್ಯವಸ್ಥೆ - ಮಂಗಳೂರು ನಗರ.
* ದೀಪನ್ ಎಮ್ ಎನ್ - ಎಸ್ಪಿ , ಉತ್ತರ ಕನ್ನಡ
* ಜಾನವಿ ಎಸ್ - ಎಸ್ಪಿ , ವಿಜಯನಗರ
-
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕಡೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಎಂದ ಡಿ.ಕೆ.ಶಿವಕುಮಾರ್ -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications