ಕರ್ನಾಟಕ : ಗುರುವಾರದ ತುಣುಕು ಸುದ್ದಿಗಳು
ಬೆಂಗಳೂರು, ಡಿ. 4 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.
ಸಮಯ 12 ಗಂಟೆ : ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ವೆಬ್ಸೈಟ್ನಲ್ಲಿ ಸದಸ್ಯತ್ವ ನೋಂದಣಿ ಮಾಡಿಕೊಂಡು 50 ಕೋಟಿಗೂ ಹೆಚ್ಚು ವಂಚನೆ ಮಾಡಿರುವ ಚೈನ್ಲಿಂಕ್ ವಂಚನಾ ಜಾಲವನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ಭೇದಿಸಿದ್ದಾರೆ.
ಸಮಯ 11 ಗಂಟೆ : ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಇಂದು ವೈದ್ಯಕೀಯ ಪರೀಕ್ಷೆಗೆ ಹಾಜರಾಗಿಲ್ಲ. ಪರೀಕ್ಷೆಗೆ ಹಾಜರಾಗಲು ಒಂದು ತಿಂಗಳ ಕಾಲಾವಕಾಶವನ್ನು ಅವರು ಹೇಳಿದ್ದಾರೆ.[ಒಂದು ವಾರದ ಸಮಯ ಕೇಳಿದ ರಾಘವೇಶ್ವರ ಶ್ರೀಗಳು]
ಸಮಯ 10 ಗಂಟೆ : ಬೆಂಗಳೂರು ಹೊರವಲಯದಲ್ಲಿ ಕೂಲಿ ಕಾರ್ಮಿಕನನ್ನು ಹತ್ಯೆ ಮಾಡಲಾಗಿದೆ. ಮೃತ ವ್ಯಕ್ತಿಯನ್ನು ಸಕ್ರಪ್ಪ ಎಂದು ಗುರುತಿಸಲಾಗಿದ್ದು, ಕಲಬುರಗಿ ಮೂಲದವರು ಎಂದು ತಿಳಿದುಬಂದಿದೆ. ವರ್ತೂರು ಬಳಿ ಇಂದು ಬೆಳಗ್ಗೆ ವಿವಸ್ತ್ರ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಸಮಯ 9 ಗಂಟೆ : ಶಿರಸಿಯ ಪ್ರೇಮಿಗಳಿಬ್ಬರು ಹುಬ್ಬಳ್ಳಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಕಾಲೇಜು ವಿದ್ಯಾರ್ಥಿಗಳಾಗಿದ್ದು, ತನಿಖೆ ಮುಂದುವರೆದಿದೆ.
ಸಮಯ
8
ಗಂಟೆ
:
ಡಿ.9ರಿಂದ
ಬೆಳಗಾವಿಯಲ್ಲಿ
ಚಳಿಗಾಲದ
ಅಧಿವೇಶನ
ಆರಂಭವಾಗುವ
ಹಿನ್ನಲೆಯಲ್ಲಿ
ಇಂದು
ಜೆಡಿಎಸ್
ಶಾಸಕಾಂಗ
ಪಕ್ಷದ
ಸಭೆ
ಕರೆಯಲಾಗಿದೆ.
ಜೆಡಿಎಸ್
ರಾಜ್ಯಾಧ್ಯಕ್ಷ
ಕುಮಾರಸ್ವಾಮಿ
ನೇತೃತ್ವದಲ್ಲಿ
ಸಭೆ
ನಡೆಯಲಿದ್ದು,
ಶಾಸಕರು
ಮತ್ತು
ವಿಧಾನಪರಿಷತ್
ಸದಸ್ಯರು
ಪಾಲ್ಗೊಳ್ಳಲಿದ್ದಾರೆ.
ಸಮಯ 7.30 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರತಿ ತಿಂಗಳಿನಿಂತೆ ಇಂದು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್ ಡೇ ಆಚರಣೆ ಮಾಡಲಿದೆ. ಬಸ್ ದಿನದ ಅಂಗವಾಗಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಸ್ಸಿನಲ್ಲಿ ಪ್ರಯಾಣ ಮಾಡಲಿದ್ದಾರೆ.