ಕರ್ನಾಟಕ : ಸೋಮವಾರದ ತುಣುಕು ಸುದ್ದಿಗಳು
ಬೆಂಗಳೂರು, ಡಿ. 1 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.
ಸಮಯ 3 ಗಂಟೆ : ಜಲಾಶಯಗಳಿಂದ ಕುಡಿಯುವ ನೀರು, ಕೃಷಿ ಹಾಗೂ ಕೈಗಾರಿಕೆಗಳಿಗೆ ಪೂರೈಸುವ ನೀರಿನ ದರ ಪರಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಸಮಯ 2 ಗಂಟೆ : ಸಮಾಜ ಕಲ್ಯಾಣ ಇಲಾಖೆಯಲ್ಲಿ 12 ಸಾವಿರ ಹುದ್ದೆಗಳು ಖಾಲಿಯಿದ್ದು, ಆರು ತಿಂಗಳಲ್ಲಿ ಭರ್ತಿ ಮಾಡುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಬೆಂಗಳೂರಿನಲ್ಲಿ ಹೇಳಿದ್ದಾರೆ.
ಸಮಯ 1 ಗಂಟೆ : ತುಮಕೂರಿನಲ್ಲಿ ನಾಲ್ವರನ್ನು ಗಾಯಗೊಳಿಸಿದ್ದ ಗೂಳಿಯನ್ನು ಮಹಾನಗರ ಪಾಲಿಕೆ ಮತ್ತು ಸ್ಥಳೀಯರು ಸೇರಿ ಸೆರೆಹಿಡಿದಿದ್ದಾರೆ.
ಸಮಯ 12 ಗಂಟೆ : ಲೋಕಾಯುಕ್ತವನ್ನು ಮುಚ್ಚುವ ಕಾರ್ಯಕ್ಕೆ ಸರ್ಕಾರ ಕೈ ಹಾಕಿಲ್ಲ, ಕೆಲವೊಂದು ತಿದ್ದುಪಡಿಗಳನ್ನು ಮಾಡಿ ಲೋಕಾಯುಕ್ತಕ್ಕೆ ಹೊಸ ರೂಪ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಮಯ 11 ಗಂಟೆ : ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪ್ರಥಮ ವರ್ಷದ ಪುಣ್ಯಾರಾಧನೆ ಇಂದು ಮೈಸೂರು ಅರಮನೆ ಮತ್ತು ಮಧುವನದಲ್ಲಿ ನಡೆಯುತ್ತಿದೆ. ಅರಮನೆಯ ಕಲ್ಯಾಣಮಂಟಪದಲ್ಲಿ ಬೆಳಗ್ಗಿನಿಂದಲೇ ಪುಣ್ಯಾರಾಧನೆಯ ವಿಧಿವಿಧಾನಗಳು ನಡೆಯತ್ತಿದ್ದು, ಇಂದು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರಾಕರಿಸಲಾಗಿದೆ.
ಸಮಯ 10 ಗಂಟೆ : ಬೆಳಗಾವಿ ಅಧಿವೇಶನಕ್ಕೂ ಮೊದಲು ಸಚಿವ ಸಂಪುಟ ವಿಸ್ತರಣೆ ಮಾಡುವಂತೆ ಹೈಕಮಾಂಡ್ ಸೂಚನೆ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಮಯ 9 ಗಂಟೆ : ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹಗರಹಳ್ಳಿಯಲ್ಲಿ ಬೇಟೆಗಾರರು ಇಟ್ಟಿದ್ದ ಜಾಟ್ರ್ಯಾಪ್ಗೆ ಸಿಕ್ಕಿಹಾಕಿಕೊಂಡಿದ್ದ ಚಿರತೆಯನ್ನು ರಕ್ಷಿಸಲಾಗಿದೆ. ಚಿರತೆಯನ್ನು ನೋಡಿ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರವಳಿಕೆ ಚುಚ್ಚು ಮದ್ದು ನೀಡಿ ಚಿರತೆಯನ್ನು ಸೆರೆಹಿಡಿಯಲಾಗಿದ್ದು, ಚಿರತೆ ಕಾಲಿಗೆ ಗಾಯವಾಗಿದೆ.
ಸಮಯ
8
ಗಂಟೆ
:
ಜೈಲಿನಿಂದ
ಪರೋಲ್
ಮೇಲೆ
ಬಿಡುಗಡೆಯಾಗಿದ್ದ
ಕೈದಿಯನ್ನು
ಬಳ್ಳಾರಿ
ರೈಲ್ವೆ
ನಿಲ್ದಾಣದಲ್ಲಿ
ಕೊಲೆ
ಮಾಡಲಾಗಿದ್ದು,
ಇಂದು
ಬೆಳಗ್ಗೆ
ಶವವನ್ನು
ಕಂಡ
ಪೊಲೀಸರು
ಸ್ಥಳೀಯರಿಗೆ
ಮಾಹಿತಿ
ನೀಡಿದ್ದಾರೆ.
ಸಮಯ 7.30 : ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಮೊದಲ ವರ್ಷದ ಪುಣ್ಯತಿಥಿ ಧಾರ್ಮಿಕ ಕಾರ್ಯಕ್ರಮಗಳು ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಆರಂಭಗೊಂಡಿದ್ದು, ಡಿ.1ರಂದು ಒಡೆಯರ್ ವೈಕುಂಠ ಸಮಾರಾಧನೆ ನಡೆಯಲಿದೆ. ಆದ್ದರಿಂದ ಇಂದು ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿರ್ಬಂಧಿಸಲಾಗಿದೆ. [ಮೈಸೂರು ಒಡೆಯರಿಗೆ ಚಿತ್ರ ನಮನ]