ಗ್ಯಾರಂಟಿ ಬೆನ್ನಲ್ಲೇ ಪಿಂಚಣಿದಾರರಿಗೆ ಶಾಕ್: 16 ಲಕ್ಷಕ್ಕೂ ಹೆಚ್ಚು ಜನರ ಪಿಂಚಣಿಗೆ ಕತ್ತರಿ ಹಾಕಿದ ಸರ್ಕಾರ

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯ ಬಳಿಕ ಇದೀಗ ಲಕ್ಷಾಂತರ ಜನರಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯ ಸರ್ಕಾರವು ಬರೋಬ್ಬರಿ 16 ಲಕ್ಷಕ್ಕೂ ಹೆಚ್ಚು ಜನರ ಸಾಮಾಜಿಕ ಪಿಂಚಣಿಯನ್ನು ದಿಢೀರನೆ ಕಡಿತಗೊಳಿಸಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿದ ಬೆನ್ನಲ್ಲೇ, ಆರ್ಥಿಕ ಹೊರೆ ತಗ್ಗಿಸಲು ಮತ್ತು ಯೋಜನೆಗಳು ಕೇವಲ ಅರ್ಹರಿಗೆ ಮಾತ್ರ ತಲುಪುವಂತೆ ಮಾಡಲು ಸರ್ಕಾರವು ಫಲಾನುಭವಿಗಳ ಪಟ್ಟಿಗೆ 'ಸರ್ಜರಿ' ಮಾಡಲು ಮುಂದಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಈ ಬೃಹತ್ ಕಾರ್ಯಾಚರಣೆ ನಡೆದಿದ್ದು, ನಕಲಿ ದಾಖಲೆ ನೀಡಿ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುತ್ತಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯಾದ್ಯಂತ ಒಟ್ಟು 82.71 ಲಕ್ಷ ಫಲಾನುಭವಿಗಳು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಮಾಸಾಶನ ಪಡೆಯುತ್ತಿದ್ದರು. ಆದರೆ ಇವರಲ್ಲಿ ಬರೋಬ್ಬರಿ 23.13 ಲಕ್ಷ ಜನರ ದಾಖಲೆಗಳು ಮತ್ತು ವಿವರಗಳು ಕೆಲವು ಸಂದೇಹಕ್ಕೆ ಎಡೆಮಾಡಿಕೊಟ್ಟಿದ್ದವು. ಈ ಹಿನ್ನೆಲೆಯಲ್ಲಿ, ಸಂದೇಹಾಸ್ಪದ ಪ್ರಕರಣಗಳ ಪಿಂಚಣಿ ವಿತರಣೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಕಂದಾಯ ಇಲಾಖೆಯು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿತ್ತು.

Karnataka Government

ಗ್ಯಾರಂಟಿ ಯೋಜನೆಗಳ ಪಿಂಚಣಿ ಮಾಹಿತಿ

ಸಂದೇಹಾಸ್ಪದ ಫಲಾನುಭವಿಗಳನ್ನು ಪತ್ತೆಹಚ್ಚಲು ಸರ್ಕಾರವು 'ಸಂಯೋಜನೆ' ಎಂಬ ನೂತನ ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿ, ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಮನೆಮನೆಗೆ ತೆರಳಿ ಪರಿಶೀಲನೆ ನಡೆಸಿದೆ. ಇದುವರೆಗೆ ಸುಮಾರು 20 ಲಕ್ಷ ಪ್ರಕರಣಗಳನ್ನು ಭೌತಿಕವಾಗಿ ಪರಿಶೀಲಿಸಲಾಗಿದ್ದು, ಈ ಪೈಕಿ 16,41,440 ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಮಾಸಾಶನವನ್ನು ಖಾಯಂ ಆಗಿ ನಿಲ್ಲಿಸಲಾಗಿದೆ. ಇನ್ನೂ 3 ಲಕ್ಷಕ್ಕೂ ಅಧಿಕ ಪ್ರಕರಣಗಳ ಪರಿಶೀಲನಾ ಕಾರ್ಯ ಭರದಿಂದ ಸಾಗುತ್ತಿದ್ದು, ರದ್ದಾದ ಪಿಂಚಣಿದಾರರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

Guarantee Schemes: ಪಂಚ ಗ್ಯಾರಂಟಿ ಪಡೆಯಲು ರಾಜ್ಯದ ಜನತೆಗೆ ಬಿಗ್ ಅಪ್ಡೇಟ್ ನೀಡಿದ ಡಿ.ಕೆ. ಶಿವಕುಮಾರ್
Guarantee Schemes: ಪಂಚ ಗ್ಯಾರಂಟಿ ಪಡೆಯಲು ರಾಜ್ಯದ ಜನತೆಗೆ ಬಿಗ್ ಅಪ್ಡೇಟ್ ನೀಡಿದ ಡಿ.ಕೆ. ಶಿವಕುಮಾರ್

ಪಿಂಚಣಿ ಕಡಿತಕ್ಕೆ ಪ್ರಮುಖ ಕಾರಣವೇನು?

ಪಿಂಚಣಿ ಕಡಿತಕ್ಕೆ ಹಲವು ಕಾರಣಗಳು ಬೆಳಕಿಗೆ ಬಂದಿವೆ. ತನಿಖೆಯ ವೇಳೆ 2.21 ಲಕ್ಷಕ್ಕೂ ಹೆಚ್ಚು ಜನರು ತಾವು ನೀಡಿದ್ದ ವಿಳಾಸದಲ್ಲಿ ವಾಸವಾಗಿರಲಿಲ್ಲ. ಬರೋಬ್ಬರಿ 13.23 ಲಕ್ಷ ಮಂದಿ ತಮ್ಮ ವಯಸ್ಸು ಹಾಗೂ ಅರ್ಹತೆಯನ್ನು ಸಾಬೀತುಪಡಿಸುವ ಸೂಕ್ತ ದಾಖಲೆಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇದರ ಜೊತೆಗೆ, 88,277 ಜನರು ವಯಸ್ಸಿನ ದೃಢೀಕರಣದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರೆ, 45,853 ಮಂದಿಯ ಆದಾಯವು ಸರ್ಕಾರ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿರುವುದು ಪತ್ತೆಯಾಗಿದೆ. ಇವರೆಲ್ಲರ ಪಿಂಚಣಿಯನ್ನು ನಿರ್ದಾಕ್ಷಿಣ್ಯವಾಗಿ ರದ್ದುಗೊಳಿಸಲಾಗಿದೆ.

ಜಿಲ್ಲೆವಾರು ಅಂಕಿ-ಅಂಶಗಳು ಹೀಗಿದೆ

ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 1,38,215 ಜನರ ಪಿಂಚಣಿ ರದ್ದಾಗಿದೆ. ಹಾಗೆಯೇ, ಬೆಂಗಳೂರು ನಗರದಲ್ಲಿ 55,800, ಕಲಬುರಗಿಯಲ್ಲಿ 94,712, ದಾವಣಗೆರೆಯಲ್ಲಿ 95,297 ಹಾಗೂ ಹಾಸನದಲ್ಲಿ 44,188 ಜನರ ಮಾಸಾಶನವನ್ನು ತಡೆಹಿಡಿಯಲಾಗಿದೆ.

ಕೇವಲ ನಕಲಿ ಫಲಾನುಭವಿಗಳಷ್ಟೇ ಅಲ್ಲದೆ, ಸರ್ಕಾರದ ಈ ದಿಢೀರ್ ಕ್ರಮದಿಂದಾಗಿ ಮಾಹಿತಿ ಕೊರತೆಯಿರುವ ಕೆಲವು ನೈಜ ಫಲಾನುಭವಿಗಳಿಗೂ ತೊಂದರೆಯಾಗಿದೆ. ವಿಧವಾ ವೇತನ, ಸಂಧ್ಯಾ ಸುರಕ್ಷಾ, ವಿಕಲಚೇತನರ ಪಿಂಚಣಿ ಸೇರಿದಂತೆ ಪ್ರತಿ ತಿಂಗಳು ಬರುತ್ತಿದ್ದ ಹಣ ಕಳೆದ ಮೂರು ತಿಂಗಳಿಂದ ಬಾರದೆ, ಅದೆಷ್ಟೋ ವೃದ್ಧರು ಮತ್ತು ಅಸಹಾಯಕರು ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿರುವ ದೃಶ್ಯಗಳು ಸಹ ಸಾಮಾನ್ಯವಾಗಿದೆ.

Gruhalaxmi scheme: 'ಗೃಹಲಕ್ಷ್ಮಿ'ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಮರು ಅರ್ಜಿ ಸಲ್ಲಿಕೆ ಮತ್ತು ಅಪ್ಡೇಟ್ ಕುರಿತ ಸಂಪೂರ್ಣ ಮಾಹಿತಿ
Gruhalaxmi scheme: 'ಗೃಹಲಕ್ಷ್ಮಿ'ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಮರು ಅರ್ಜಿ ಸಲ್ಲಿಕೆ ಮತ್ತು ಅಪ್ಡೇಟ್ ಕುರಿತ ಸಂಪೂರ್ಣ ಮಾಹಿತಿ

ಪಿಂಚಣಿ ರದ್ದಾಗಿರುವ ಫಲಾನುಭವಿಗಳಿಗೆ ಸರ್ಕಾರವು 30 ದಿನಗಳ ಕಾಲಾವಕಾಶವನ್ನು ನೀಡಿದ್ದು, ಈ ಅವಧಿಯೊಳಗೆ ಸೂಕ್ತ ಮತ್ತು ಅಧಿಕೃತ ದಾಖಲೆಗಳನ್ನು ಹಾಜರುಪಡಿಸಿ ಮೇಲ್ಮನವಿ ಸಲ್ಲಿಸುವ ಮೂಲಕ ತಮ್ಮ ಪಿಂಚಣಿಯನ್ನು ಮರುಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಾಲಮಿತಿಯೊಳಗೆ ದಾಖಲೆ ನೀಡದವರ ಪಿಂಚಣಿಯನ್ನು ಶಾಶ್ವತವಾಗಿ ರದ್ದು ಮಾಡಲಾಗುವುದು ಎಂದು ಕಂದಾಯ ಇಲಾಖೆ ಎಚ್ಚರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+