ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಿದೆ ಸರ್ಕಾರ
ಬೆಂಗಳೂರು, ಏಪ್ರಿಲ್ 21 : ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದು ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಇನ್ನೂ 20 ದಿನಗಳಿಗೆ ಸಾಕಾಗುವಷ್ಟು ಮಾತ್ರ ನೀರು ಲಭ್ಯವಿದೆ. ನೀರಿನ ಕೊರತೆ ನೀಗಿಸಲು ಸರ್ಕಾರ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಮುಂದಾಗಿದೆ.
ಕೊಳವೆ
ಬಾವಿಗಳನ್ನು
ಬಾಡಿಗೆಗೆ
ಪಡೆಯುವ
ಬಗ್ಗೆ
ರಾಜ್ಯ
ಸರ್ಕಾರ
ಎಲ್ಲಾ
ಜಿಲ್ಲಾಧಿಕಾರಿಗಳಿಗೆ
ಸೂಚನೆ
ನೀಡಿದೆ.
ತಾಲೂಕು
ಮಟ್ಟದಲ್ಲಿ
ಸ್ಥಳೀಯ
ಶಾಸಕರ
ನೇತೃತ್ವದ
ಟಾಸ್ಕ್ಪೋರ್ಸ್
ಯಾವ
ಬೋರ್
ವೆಲ್
ಬಾಡಿಗೆಗೆ
ಪಡೆಯಬಹುದು.
ಬಾಡಿಗೆ
ಎಷ್ಟು
ಮುಂತಾದವುಗಳನ್ನು
ನಿರ್ಧರಿಸಲಿದೆ.
[ಕುಡಿಯುವ
ನೀರಿಗೆ
100
ಕೋಟಿ
ತುರ್ತು
ಹಣ]
ಸರ್ಕಾರ ಟಾಸ್ಕ್ಪೋರ್ಸ್ ನೀಡಿದ ವರದಿಯ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಿದೆ. ಒಂದು ಖಾಸಗಿ ಬೋರ್ವೆಲ್ಗೆ ಸುಮಾರು 20 ಸಾವಿರ ರೂ. ತಿಂಗಳ ಬಾಡಿಗೆ ನಿಗದಿ ಮಾಡಲಾಗುತ್ತದೆ. ಲಭ್ಯವಿರುವ ನೀರಿನ ಪ್ರಮಾಣ ಮುಂತಾದವುಗಳನ್ನು ನೋಡಿಕೊಂಡು ಬಾಡಿಗೆಗೆ ಪಡೆಯಲಾಗುತ್ತದೆ. [ನೀಲಕಂಠರಾಯನಗಡ್ಡಿ ವಾಸಿಗಳಿಗೆ ನೀರು ಎಂದೂ ಶಾಪ!]
ಗ್ರಾಮಗಳಿಗೆ ನೀರು ಪೂರೈಸುವ ಘಟಕದ ಹತ್ತಿರವಿರುವ ಕೊಳವೆ ಬಾವಿಗಳನ್ನು ಗುರುತಿಸಲಾಗುತ್ತದೆ. ಬೋರ್ವೆಲ್ನಿಂದ ಅಲ್ಲಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಯೋಜನೆ ಕೋಲಾರ ಜಿಲ್ಲೆಯಲ್ಲಿ ಮೊದಲು ಜಾರಿಗೆ ಬರಲಿದೆ. [ಮಳೆಯಿಲ್ಲ, ಬೆಳೆಯಿಲ್ಲ, ಉತ್ತರದ ಮಂದಿ ಹೊಂಟರು ಗುಳೆ]
ಕಳೆದ ವರ್ಷ ಇದೇ ಸಮಯದಲ್ಲಿ ರಾಜ್ಯದ ಜಲಾಶಯಗಳಲ್ಲಿ ಶೇ 35ರಷ್ಟು ನೀರು ಲಭ್ಯವಿತ್ತು. ಆದರೆ, ಈ ಬಾರಿ ನೀರಿನ ಮಟ್ಟ ಶೇ 20ಕ್ಕೆ ಕುಸಿದಿದೆ. ಏಪ್ರಿಲ್ ಅಂತ್ಯ ಅಥವ ಮೇ ಮೊದಲವಾರದ ತನಕ ಈ ನೀರನ್ನು ಬಳಸಬಹುದು. ನಂತರ ಜಲಾಶಯದ ನೀರನ್ನು ಬಳಕೆ ಮಾಡಲು ಸಾಧ್ಯವಿಲ್ಲ. [ಭೀಕರ ಬರ, ಜನರ ಸುಲಿಗೆ ಮಾಡುತ್ತಿರುವ ಟ್ಯಾಂಕರ್ ಮಾಫಿಯಾ]
ಕರ್ನಾಟಕದಲ್ಲಿ ಈ ವರ್ಷದ ಭೀಕರ ಬರಗಾಲ ಆವರಿಸಿದ್ದು ಕುಡಿಯುವ ನೀರಿಗೂ ಪರದಾಡುವಂತಾಗಿದೆ. 120ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಪೀಡಿತ ಜಿಲ್ಲೆಗಳ ಪ್ರವಾಸ ಮುಗಿಸಿ ಬಂದಿದ್ದಾರೆ.