Get Updates
Get notified of breaking news, exclusive insights, and must-see stories!

Bus fare hike: ಬಸ್ ಟಿಕೆಟ್ ದರ ಮಾತ್ರವಲ್ಲ ಹಾಲು, ವಿದ್ಯುತ್, ಕಾವೇರಿ ನೀರು ದರ ಏರಿಕೆ?

ಬೆಂಗಳೂರು, ಜನವರಿ 03: ಐದು ಗ್ಯಾರೆಂಟಿ ಯೋಜನೆಗಳನ್ನು ಕೊಟ್ಟ ಕರ್ನಾಟಕ ರಾಜ್ಯ ಸರ್ಕಾರ ಬಸ್ ಪ್ರಯಾಣವನ್ನು ಮತ್ತಷ್ಟು ದುಬಾರಿ ಮಾಡಿದೆ. ಕೇವಲ ಬಸ್ ದರ ಮಾತ್ರವಲ್ಲದೇ, ಇತ್ತೀಚೆಗೆ ಹಾಲಿನ ದರವನ್ನು ಹೆಚ್ಚಿಸಿತ್ತು. ಮುಂದಿನ ದಿನಗಳಲ್ಲಿ ವಿದ್ಯುತ್ ದರ, ಕಾವೇರಿ ನೀರಿನ ದರವನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಸದ್ಯ ಸರ್ಕಾರದ ನಿರ್ಧಾರ ವಿರುದ್ಧ ಬಿಜೆಪಿ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರೂಪಾಯಿ ಹೆಚ್ಚಿಗೆ ಮಾಡಿತಲ್ಲದೇ, ಈ ಹಿಂದಿನ ಆದೇಶದನ್ವಯ ಪಾಕೇಟ್ ಹಾಲಿನಲ್ಲಿ ನೀಡುತ್ತಿದ್ದ 50 ಎಂಎಲ್ ಹೆಚ್ಚುವರಿ ಹಾಲನ್ನು ಕಡಿತಗೊಳಿಸಿ ಈ ಬಾರಿ ಆದೇಶಿಸಿತು. ಇದಾಗಿ ಒಂದು ವಾರದೊಳಗೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲುಕೆಆರ್‌ಟಿಸಿ ನಿಗಮಗಳ ಬಸ್ ಟಿಕೆಟ್ ದರವನ್ನು ಶೇಕಡಾ 15ರಷ್ಟು ಹೆಚ್ಚಳ ಮಾಡಿ ಗುರುವಾರ (ಜನವರಿ 02) ಆದೇಶಿಸಿತು.

Karnataka Government Mulls Hike in Electricity and Water Prices After Bus Fare Increased

ಹೊಸ ವರ್ಷಾಚರಣೆ ಬೆನ್ನಲ್ಲೆ ನಾಡಿನ ಜನರಿಗೆ ಬೆಲೆ ಏರಿಕೆ ಶಾಕ್ ನೀಡಿತು. ಮಹಿಳೆಯರಿಗೆ ಉಚಿತ ಬಸ್‌ ಇದ್ದು, ದುಡ್ಡು ಕೊಟ್ಟು ಬಸ್‌ನಲ್ಲಿ ಸಂಚರಿಸುತ್ತಿದ್ದ ಪುರುಷರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಈ ಬೆಲೆ ಏರಿಕೆ ಪ್ರಕ್ರಿಯೆ ಇಲ್ಲಿಗೆ ಮುಗಿಯಿತು ಎಂದುಕೊಳ್ಳಬೇಡಿ. ಸಕ್ರಾಂತಿ ಹೊತ್ತಿಗೆ ವಿದ್ಯುತ್ ದರ ಹಾಗೂ ನೀರಿನ ದರವನ್ನು ಹೆಚ್ಚಳ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ.

ವಿದ್ಯುತ್, ನೀರಿನ ದರ ಏರಿಕೆ ಶೀಘ್ರ?

ರಾಜ್ಯ ಸರ್ಕಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕಂಪನಿ (KPTCL), ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸೇರಿದಂತೆ ಸಂಬಂಧಿಸಿದಂತೆ ಸಂಸ್ಥೆಗಳು ನೀಡಿರುವ ಮನವಿಗೆ ಸರ್ಕಾರ ಒಪ್ಪಿದರೆ ನೀರು ಹಾಗೂ ವಿದ್ಯುತ್ ದರ ಏರಿಕೆ ಖಚಿತ ಎನ್ನಲಾಗಿದೆ.

Karnataka Government Mulls Hike in Electricity and Water Prices After Bus Fare Increased

ಈಗಾಗಲೇ ಇಲಾಖೆ ಸಚಿವರುಗಳು, ಅಧಿಕಾರಿಗಳು ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದು, ಇನ್ನೊಂದು ಸುತ್ತಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

2025 ಆರ್ಥಿಕ ಹೊರೆಯ ವರ್ಷ

ಒಂದು ವೇಳೆ ಹೀಗಾದರೆ, ರಾಜ್ಯದ ಜನರಿಗೆ 2025 ಆರ್ಥಿಕ ಹೊರೆಯ ವರ್ಷವಾಗಬಹುದು. ಈ ಬೆಲೆ ಏರಿಕೆಗಳಿಗೆ ರಾಜ್ಯ ಸರ್ಕಾರ ನಿರ್ವಹಣೆ ವೆಚ್ಚ ಹೆಚ್ಚಾಗಿರುವುದು, ಶುಲ್ಕ ಪಾವತಿ ಬಾಕಿ ಉಳಿದಿರುವುದು, ಸಂಗ್ರಹವಾಗುವ ಆದಾಯವು ಖರ್ಚಿಗೆ ಸಮನಾಗುತ್ತಿರುವುದು ಸೇರಿದಂತೆ ಹಲವು ಕಾರಣ ನೀಡಿ ಬೆಲೆ ಏರಿಕೆಯ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದೆ.

ಇತ್ತ ಬಿಜೆಪಿ ನಾಯಕರು, ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿದ ರಾಜ್ಯ ಸರ್ಕಾರದ ಭೊಕ್ಕಸ ಬರಿದಾಗಿದೆ. ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ನೀಡಲು ಹಣ ಇಲ್ಲ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಸರ್ಕಾರ ಒಂದು ಕಡೆ ಉಚಿತ ಭಾಗ್ಯ ಕೊಟ್ಟು ಮತ್ತೊಂದೆಡೆ ತೆರಿಗೆ, ಶುಲ್ಕ ಇತರ ಬೆಲೆಗಳನ್ನು ಹೆಚ್ಚಿಸಿ ಜನರಿಗೆ ಆರ್ಥಿಕ ಬರೆ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+