Electricity Bill: ಇತರೆ ಶುಲ್ಕ ಹೆಚ್ಚಿಸಿದ್ದ ಸರ್ಕಾರದಿಂದ ಫಿಕ್ಸ್ಡ್ ಚಾರ್ಜ್ ಏರಿಕೆ
ಬೆಂಗಳೂರು, ಜೂನ್ 07: ಕರ್ನಾಟಕ ವಿದ್ಯುತ್ಚ್ಚಕ್ತಿ ನಿಯಂತ್ರಣ ಆಯೋಗವು (KERC) ಪ್ರತಿ ಯೂನಿಟ್ಗೆ 70 ಪೈಸೆ ಹೆಚ್ಚಿಸಿದ್ದಕ್ಕೆ ರಾಜ್ಯದ ಜನರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತ ವಿದ್ಯುತ್ ಬಿಲ್ನ ಫಿಕ್ಸ್ಡ್ ಚಾರ್ಜ್ ಸಹ 100 ರೂ. ನಿಂದ 110ಕ್ಕೆ ಏರಿಕೆ ಮಾಡಲಾಗಿದೆ. ಈ ಮೂಲಕ ಸರ್ಕಾರ ಗ್ರಾಹಕರಿಗೆ ಶಾಕ್ ನೀಡುತ್ತಿದೆ.
ಗೃಹ ಬಳಕೆಯ ವಿದ್ಯುತ್ ಸಂಪರ್ಕಕ್ಕೆ ಪ್ರತಿ ವ್ಯಾಟ್ಗೆ 100 ರೂಪಾಯಿ ನಿಗದಿತ ಶುಲ್ಕವನ್ನು ಮೇ ತಿಂಗಳಿಂದಲೇ ಜಾರಿಗೆ ಬರುವಂತೆ 110ಕ್ಕೆ ಹೆಚ್ಚಳವಾಗಿದೆ. ಇದು ಗೃಹ ಬಳಕೆಗೆ 50 ಕೆವಿ ವಿದ್ಯುತ್ ಬಳಕೆ ಮಾಡುವವರಿಗೆ ಅನ್ವಯವಾಗುತ್ತದೆ. ಇನ್ನೂ 50 ಕೆವಿ ವಿದ್ಯುತ್ ಮೇಲ್ಪಟ್ಟ ಬಳಕೆಗೆ 210 ರೂಪಾಯಿವರೆಗೆ ಹೆಚ್ಚಳ ಮಾಡಲಾಗಿದೆ.

ಉಚಿತ ವಿದ್ಯುತ್ ಜಾರಿಗೂ ಮುನ್ನವೇ ರಾಜ್ಯ ಸರ್ಕಾರ ವಿದ್ಯುತ್ ಯುನಿಟ್ ದರ ಜೂನ್ಗೆ ಜಾರಿ ಬರುವಂತೆ ಏರಿಕೆ ಮಾಡಲಾಗಿದೆ. ಇದರೊಂದಿಗೆ ಫಿಕ್ಸ್ಡ್ ಶುಲ್ಕ, ಇತರೆ ಶುಲ್ಕವನ್ನು ಕಳೆದ ಎರಡು ತಿಂಗಳಿನಿಂದ ಅನ್ವಯಿಸುವಂತೆ ಹೆಚ್ಚಿಸಿದ್ದಕ್ಕೆ ಜನರು ಅಸಮಾಧಾನಗೊಂಡಿದ್ದಾರೆ.
ಅಧಿಕ ಶುಲ್ಕದ ಬಿಲ್ ನೋಡಿ ಗ್ರಾಹಕರಲ್ಲಿ ಗೊಂದಲ
ಮೇ ತಿಂಗಳಿನ ಬಿಲ್ ಅನ್ನು ಜೂನ್ ಮೊದಲ ವಾರ ಪಡೆದ ಗ್ರಾಹಕರು ಬೆರಗಾಗಿದ್ದಾರೆ. ಪ್ರತಿ ತಿಂಗಳು ತಪ್ಪದೇ ವಿದ್ಯುತ್ ಬಿಲ್ ಪಾವತಿಸಿದರೂ ದುಪಟ್ಟು ಶುಲ್ಕ ವಿಧಿಸಲಾಗಿದೆ. ಕಾರಣ ಫಿಕ್ಸ್ಡ್ ದರ ಏರಿಕ, ಯುನಿಟ್ ದರ ಏರಿಕೆ, ಹೆಚ್ಚುವರಿಯಾಗಿ ಇತರ ಶುಲ್ಕ ವಿಧಿಸಲಾಗಿದೆ. ಇದೆಲ್ಲ ನೋಡಿ ಎರಡು - ಮೂರು ತಿಂಗಳ ಒಟ್ಟಿಗೆ ಬಂದಿದೆಯೇ ಎಂಬ ಅನುಮಾನ ಗ್ರಾಹಕರಲ್ಲಿ ಕಾಡಿದೆ. ಜನ ಗೊಂದಲಕ್ಕಾಗಿದ್ದು, ಗೃಹಜ್ಯೋತಿ ಅಡಿ ಉಚಿತ ವಿದ್ಯುತ್ ಘೋಷಿಸಿದ ಸರ್ಕಾರ ಹಿಂಬಾಗಿಲಿನಿಂದ ಪರೋಕ್ಷ ಶುಲ್ಕ ಮೂಲಕ ವಸೂಲಿಗೆ ಮುಂದಾಗಿದೆ ಎಂದು ಕಿಡಿ ಕಾರಿದ್ದಾರೆ.

ವಿದ್ಯುತ್ ನಿಯಂತ್ರಣ ಆಯೋಗವು ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ವಿಧಿಸುತ್ತಿದ್ದ ದುಬಾರಿ ನಿಗದಿತ ಶುಲ್ಕ ಕಡಿತಗೊಳಿಸಿದೆ. ಇದರಿಂದ ಮನೆ ನಿರ್ಮಾಣ ಮತ್ತಿತರ ಕೆಲಸಗಳಿಗೆ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಪಡೆಯುವವರು ಅಧಿಕ ಶುಲ್ಕದಿಂದ ಮುಕ್ತ ಪಡೆದಂತಾಗಿದೆ.
ಉಚಿತ ಫಲಾನುಭವಿಗಳಿಗೆ ತಲೆನೋವಾದ ಮೇ ಬಿಲ್
ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಯಂತೆ ಜುಲೈ ವೇಳೆಗೆ 200 ಯುನಿಟ್ ವಿದ್ಯುತ್ ಉಚಿತ ಒದಗಿಸುವುದಾಗಿ ತಿಳಿಸಿದೆ. ಈ ಮಧ್ಯೆ ಏಪ್ರಿಲ್ ಮತ್ತು ಮೇ ತಿಂಗಳ ವಿದ್ಯುತ್ ಬಿಲ್ ಅನ್ನ ಕಟ್ಟಬೇಕಿದೆ. ಜನರ ಉಚಿತ ವಿದ್ಯುತ್ ಪಡೆಯುವ ಉತ್ಸಾಹದಲ್ಲಿದ್ದು, ಈವರೆಗಿನ ಬಿಲ್/ಬಾಕಿ ಬಿಲ್ ಕಟ್ಟಿದರಾಯಿತು ಎಂದುಕೊಂಡರೆ, ಜೂನ್ ಮೊದಲ ವಾರ ದೊರೆ ವಿದ್ಯುತ್ ಬಿಲ್ ಜನರಿಗೆ ತಲೆನೋವಾಗಿ ಪರಿಣಮಿಸಿದೆ.
-
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications