'ಯಡಿಯೂರಪ್ಪ ಅವರಿಗೆ ಬಿಜೆಪಿ ಕಿರುಕುಳ ನೀಡಿದೆ, ಅವರ ಕಣ್ಣೀರು ಕರ್ನಾಟಕದ ಬೀದಿಗಳಲ್ಲಿ ಹರಿದಿದೆ' ಡಿಕೆ ಶಿವಕುಮಾರ್
ಬೆಂಗಳೂರು ಏಪ್ರಿಲ್ 22: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ನಡುವೆ ರಾಜಕೀಯ ನಾಯಕರ ಪರಸ್ಪರ ವಾಗ್ದಾಳಿಗಳೂ ಹೆಚ್ಚಾಗಿವೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೇಲೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಒತ್ತಡ ಹಾಕುತ್ತಿದೆ ಎಂದು ಶನಿವಾರ ಆರೋಪಿಸಿದ್ದಾರೆ.
ಬೆಂಗಳೂರಿನ ದಿ ರಿಟ್ಜ್-ಕಾರ್ಲ್ಟನ್ನಲ್ಲಿ (Ritz-Carlton)ನಲ್ಲಿ ಇಂದು ನಡೆದ ಕರ್ನಾಟಕ ದುಂಡುಮೇಜಿನ 2023ರ ಸಭೆಯಲ್ಲಿಡಿಕೆ ಶಿವಕುಮಾರ್ ಅವರು ಮಾತನಾಡಿದರು. 'ಯಡಿಯೂರಪ್ಪ ಅವರಿಗೆ ಬಿಜೆಪಿಯಿಂದ ಕಿರುಕುಳ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಬಿಎಸ್ವೈ ಕಣ್ಣೀರು ಕರ್ನಾಟಕದ ಬೀದಿಗಳಲ್ಲಿ ಹರಿದಿದೆ. ಬಿಎಸ್ವೈ ಅವರ ಸ್ವಂತ ಪಕ್ಷ ಮತ್ತು ಸಂಸ್ಥೆಗಳಿಂದ ಭಾರಿ ಒತ್ತಡವಿದೆ' ಎಂದು ಕನಕಪುರ ಕ್ಷೇತ್ರದ ಹಾಲಿ ಶಾಸಕ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ ಬಿಎಸ್ ಯಡಿಯೂರಪ್ಪ ಅವರು ಲಿಂಗಾಯತ ಮತದಾರರ ದೊಡ್ಡ ವರ್ಗಗಳಲ್ಲಿ ಜನಪ್ರಿಯರಾಗಿದ್ದಾರೆ. ಕರ್ನಾಟಕದಲ್ಲಿ ಚುನಾವಣಾ ಗೆಲುವಿಗೆ ನಿರ್ಣಾಯಕರಾಗಿದ್ದಾರೆ. ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿಯು ಪ್ರಬಲವಾದ ಆಡಳಿತ ವಿರೋಧಿಯನ್ನು ಎದುರಿಸುತ್ತಿದೆ. ಬಿಎಸ್ವೈ ಅವರು ಪಕ್ಷದ ತಂತ್ರವನ್ನು ತಿಳಿದರೂ ಮತಬ್ಯಾಂಕಿಂಗ್ ಹೋರಾಡುತ್ತಿದ್ದಾರೆ ಎಂದಿದ್ದಾರೆ.
ದಕ್ಷಿಣ ರಾಜ್ಯದಲ್ಲಿ ಬಿಜೆಪಿಯನ್ನು ಸ್ಥಾಪಿಸುವಲ್ಲಿ ಯಡಿಯೂರಪ್ಪ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಒತ್ತಡ ಬಿಎಸ್ವೈ ಅವರ ಮೇಲಿದೆ. ಅದು ಅವರನ್ನು ಕಮಲದ ರಾಜನನ್ನಾಗಿ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಅವರು ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ನೀಡಿದ್ದರೂ, 2023 ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಸದ್ಯ ಚುನಾವಣಾ ಕಣದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರ ಮೇಲೆ ಪಕ್ಷದ ಒತ್ತಡ ಹೆಚ್ಚಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಕರ್ನಾಟಕದಲ್ಲಿ ಭ್ರಷ್ಟಾಚಾರದ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಕರ್ನಾಟಕದಲ್ಲಿ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿಕೆಶಿ, "ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ. ಕರ್ನಾಟಕದ ಜನರು ಚೆನ್ನಾಗಿ ಓದಿದ್ದಾರೆ ಮತ್ತು ವಿದ್ಯಾವಂತರಾಗಿದ್ದಾರೆ. ಕರ್ನಾಟಕ ಮಾರ್ಪಟ್ಟಿದೆ. ದೇಶದಲ್ಲಿ ಭ್ರಷ್ಟಾಚಾರದ ಪ್ರಧಾನಿ ರಾಜಧಾನಿಯಲ್ಲಿ ಏನು ಮಾಡಿದ್ದಾರೆ?" ಎಂದು ಪ್ರಶ್ನೆ ಮಾಡಿದರು.

"ಪ್ರಧಾನಿ ಬಂದು ಭಾಷಣ ಮಾಡುತ್ತಿದ್ದಾರೆ ಅಷ್ಟೇ. ಆದರೆ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಭ್ರಷ್ಟಾಚಾರವನ್ನು ನಿಲ್ಲಿಸಿಲ್ಲ" ಎಂದು ಡಿಕೆ ಶಿವಕುಮಾರ್ ಹೇಳಿದರು. ಈ ಮೂಲಕ ಬಿಜೆಪಿ ನೇತೃತ್ವದ ಆಡಳಿತಾರೂಢ ಸರ್ಕಾರದ ಮೇಲೆ '40% ಕಮಿಷನ್ ಶುಲ್ಕ'ದ ಬಗ್ಗೆ ಕಾಂಗ್ರೆಸ್ ಪದೇ ಪದೇ ವಾಗ್ದಾಳಿ ನಡೆಸಿದೆ.
ಲಿಂಗಾಯತರ ಬಗ್ಗೆ ಕೆಪಿಸಿಸಿ ಮುಖ್ಯಸ್ಥ
ರಾಜ್ಯದ ಜನಸಂಖ್ಯೆಯ ಶೇಕಡಾ 17 ರಷ್ಟಿರುವ, ರಾಜಕೀಯವಾಗಿ ಪ್ರಭಾವಿ ಸಮುದಾಯವಾದ ಲಿಂಗಾಯತರು ಬಿಜೆಪಿಯಿಂದ ಕಾಂಗ್ರೆಸ್ಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಲಿಂಗಾಯತರಿಗೆ ಬಿಜೆಪಿಯಿಂದ ಬೆದರಿಕೆ ಮತ್ತು ಕಿರುಕುಳ ನೀಡಲಾಗಿದೆ. ಅವರಿಗೆ ಯಾವುದೇ ನ್ಯಾಯವನ್ನು ನೀಡಲಾಗಿಲ್ಲ ಎಂದು ಅವರು ಹೇಳಿದರು.
ಸುಮಾರು ಎರಡು ದಶಕಗಳಿಂದ ವೀರಶೈವ-ಲಿಂಗಾಯತ ಬೆಂಬಲದ ಮೇಲೆ ಹಣಾಹಣಿ ನಡೆಸುತ್ತಿದ್ದ ಆಡಳಿತಾರೂಢ ಬಿಜೆಪಿ ಈಗ ಚುನಾವಣೆಗೂ ಮುನ್ನವೇ ಇಕ್ಕಟ್ಟಿನಲ್ಲಿ ಸಿಲುಕಿದ್ದು, ಉತ್ತರ ಕರ್ನಾಟಕದ ಇಬ್ಬರು ಪ್ರಮುಖ ಲಿಂಗಾಯತ ನಾಯಕರನ್ನು ಕಳೆದುಕೊಂಡಿದೆ.
ಲಿಂಗಾಯತ ಮುಖಂಡರಾದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೇಸರಿ ಪಾಳಯವನ್ನು ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇದು ಬಿಜೆಪಿ ಪಕ್ಷದಲ್ಲಿ ಇರುಸುಮುರುಸು ಉಂಟು ಮಾಡಿದೆ. ಲಕ್ಷ್ಮಣ ಸವದಿ ಗಾಣಿಗ ಲಿಂಗಾಯತ ಉಪಪಂಗಡಕ್ಕೆ ಸೇರಿದರೆ, ಜಗದೀಶ್ ಶೆಟ್ಟರ್ ರಾಜಕೀಯವಾಗಿ ಪ್ರಬಲ ಬಣಜಿಗ ಲಿಂಗಾಯತ ಉಪಪಂಗಡಕ್ಕೆ ಸೇರಿದವರು. ಇವರು ಪಕ್ಷ ತೊರೆದಾಗಿನಿಂದ ಬಿಜೆಪಿಗೆ ಲಿಂಗಾಯ ಮತಗಳು ಕೈ ತಪ್ಪುಬ ಆತಂಕ ಎದುರಾಗಿದೆ.
ಖರ್ಗೆ ಸಿಎಂ ಆದ ಮೇಲೆ ಶಿವಕುಮಾರ್
ಕರ್ನಾಟಕ ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರು ಹೇಳಿದ ಡಿ.ಕೆ.ಶಿವಕುಮಾರ್, 'ಖರ್ಗೆ ಅವರು ತುಂಬಾ ದೊಡ್ಡ ನಾಯಕರು, ಬ್ಲಾಕ್ ನಾಯಕನಿಂದ ಕಾಂಗ್ರೆಸ್ ಮುಖ್ಯಸ್ಥರವರೆಗೆ 51 ವರ್ಷಗಳ ಅನುಭವವಿದೆ. ಅವರಿಗೆ ಅವಕಾಶ ಸಿಕ್ಕಿಲ್ಲ. ಅವರು ಸಿಎಂ ಆಗಬಹುದು' ಎಂದು ಡಿಕೆ ಶಿವಕುಮಾರ್ ಖರ್ಗೆ ಅವರತ್ತ ಒಲವು ತೋರಿದ್ದಾರೆ.
"ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದು ಅವರು ಬಯಸುತ್ತಾರೆ, ನಾವು ಖರ್ಗೆ ಅವರ ಭಾವನೆಗಳನ್ನು ಗೌರವಿಸುತ್ತೇವೆ" ಎಂದು ಶಿವಕುಮಾರ್ ಹೇಳಿದರು.
ಇದು ಖರ್ಗೆ ಅವರನ್ನು ಬೆಂಬಲಿಸುವ ಮೂಲಕ 'ದಲಿತ ಸಿಎಂ' ಮತ್ತು 'ಸ್ಥಳೀಯ ವರ್ಸಸ್ ವಲಸಿಗ' ಎಂಬ ಚರ್ಚೆಯನ್ನು ಪುನರುಜ್ಜೀವನಗೊಳಿಸುವ ಮೂಲಕ ಸಿದ್ದರಾಮಯ್ಯ ಅವರ ಭವಿಷ್ಯವನ್ನು ಚೆಕ್ಮೇಟ್ ಮಾಡುವ ಪ್ರಯತ್ನವೆಂದು ಕೆಲವರು ನೋಡುತ್ತಿದ್ದಾರೆ.












Click it and Unblock the Notifications