ಕರ್ನಾಟಕದಲ್ಲಿ ಮಳೆ; ರಾಜ್ಯದ 14 ಡ್ಯಾಂಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ಮಾಹಿತಿ
ಬೆಂಗಳೂರು,ಮೇ 31: ರಾಜ್ಯದಲ್ಲಿ ಬೇಸಿಗೆಯ ಬಿರು ಬೀಸಿಲಿಗೆ ಡ್ಯಾಂಗಳ ನೀರು ತಳ ಸೇರಿತ್ತು. ಇದೀಗ ರಾಜ್ಯದಲ್ಲಿ ಮುಂಗಾರು ಮಳೆಗೂ ಮೊದಲೇ ವರುಣಾರ್ಭಟ ಜೋರಾಗಿದ್ದು, ಕರ್ನಾಟಕದಲ್ಲಿ ಮಳೆಯ ರೌದ್ರ ನರ್ತನ ಎಷ್ಟಿರ ಮಟ್ಟಿಗೆ ಇದೆ ಅಂದ್ರೆ ಒಂದೇ ವಾರದಲ್ಲಿ ಜಲಾಶಯಗಳಿಗೆ ಭರಪೂರ ನೀರು ಹರಿದು ಬಂದಿದೆ. ಒಂದೇ ವಾರದಲ್ಲಿ ರಾಜ್ಯದ 14 ಜಲಾಶಯಗಳಲ್ಲಿ ಒಳ ಹರಿವು ಭರ್ಜರಿ ಹೆಚ್ಚಳವಾಗಿದೆ. ಒಂದೇ ವಾರದಲ್ಲಿ ಬರೋಬ್ಬರಿ 54 ಟಿಎಂಸಿ ನೀರು ಹರಿದು ಬಂದಿದ್ದು,ರಾಜ್ಯದ ರೈತರು ಸಂತಸದಲ್ಲಿದ್ದಾರೆ.
ಮುಂಗಾರು ಮಳೆಯ ಅಬ್ಬರಕ್ಕೂ ಮೊದಲೇ ರಾಜ್ಯದ ಜೀವನಾಡಿಗಳಾದ ಜಲಾಶಯಗಳು ಭರ್ತಿಯಾಗುತ್ತವೆ. ರಾಜ್ಯದ ಜಲಾಶಯಗಳಲ್ಲಿ ನೀರು ಸಂಗ್ರಹಮಟ್ಟವು 50 ಟಿಎಂಸಿಯಷ್ಟು ಹೆಚ್ಚಳವಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಇತ್ತ ನದಿ ಪಾತ್ರದ ಜನರಿಗೆ ಪ್ರವಾಹದ ಆತಂಕ ಎದುರಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಾಗೂ ಮುಂಗಾರು ಪ್ರವೇಶದಿಂದ ಕರ್ನಾಟಕದಲ್ಲಿ ಮೇ 23ರಿಂದ ಜೋರು ಮಳೆಯಾಗುತ್ತಿದ್ದು, ಜೂನ್ ಆರಂಭಕ್ಕೂ ಮೊದಲೇ ಜಲಾಶಯಗಳ ನೀರಿನ ಮಟ್ಟ ಹೆಚ್ಚಾಗುತ್ತಿದೆ.

ಮುಂಗಾರು ಆರಂಭದ ದಿನಗಳಲ್ಲಿಯೇ ಮಳೆ ಉತ್ತಮವಾಗಿ ಜಲಾಶಯಕ್ಕೆ ನೀರು ಬರುತ್ತಿರುವುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ರು, ಅಷ್ಟೇ ಅವಾಂತರಗಳು ಸೃಷ್ಟಿಯಾಗಿವೆ. ಮಳೆ ಹೊಡೆತಕ್ಕೆ ಕಾವೇರಿ, ಕೃಷ್ಣಾ, ತುಂಗಭದ್ರಾ, ಕಬಿನಿ, ಹೇಮಾವತಿ ನದಿಗಳಲ್ಲಿ ನೀರಿನಮಟ್ಟ ಹೆಚ್ಚಾಗಿ ಕೆಆರ್ಎಸ್, ಆಲಮಟ್ಟಿ, ಕಬಿನಿ, ನಾರಾಯಣಪುರ ಸೇರಿದಂತೆ ರಾಜ್ಯ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ.
ರಾಜ್ಯದಲ್ಲಿ ಸುರಿದ ಭರಪೂರ ಮಳೆಯಿಂದ ಡ್ಯಾಂಗಳಿಗೆ ಭರ್ಜರಿ ನೀರು ಬಂದಿದೆ. ಮೇ 23 ರಿಂದ ಮೇ 29ರ ನಡುವೆ ಕರ್ನಾಟಕದ 14 ಜಲಾಶಯಗಳಿಗೆ ಒಟ್ಟು 54 ಟಿಎಂಸಿ ನೀರು ಬಂದು ಸೇರಿದೆ. ಕೃಷ್ಣಾಜಲಾನಯನ ಪ್ರದೇಶದ ಡ್ಯಾಂಗಳಲ್ಲಿ 27 ಟಿಎಂಸಿ ಒಳಹರಿವು ಇದ್ರೆ, ಕಾವೇರಿ ಜಲಾನಯನ ಪ್ರದೇಶ ಡ್ಯಾಂಗಳಲ್ಲಿ 19 ಟಿಎಂಸಿ ಒಳ ಹರಿವು ಇದೆ. ಇತರೆ ಜಲಾಶನಯನ ಪ್ರದೇಶದಲ್ಲಿ 8 ಟಿಎಂಸಿ ನೀರು ಇದೆ. ಒಟ್ಟು 54 ಟಿಎಂಸಿ ನೀರು ಹರಿದು ಬಂದಿದೆ.
ಇನ್ನೂ ಲಿಂಗನಮಕ್ಕಿ ಡ್ಯಾಂನಲ್ಲಿ 23 % ನೀರು ಸಂಗ್ರಹವಾಗಿದೆ, ಸೂಪಾ ಡ್ಯಾಂನಲ್ಲಿ ಶೇ. 28 ರಷ್ಟು ನೀರು ಸಂಗ್ರಹವಾದ್ರೆ ವರಾಹಿ ಡ್ಯಾಂನಲ್ಲಿ ಶೇ. 28 ರಷ್ಟು, ಭದ್ರಾ ಡ್ಯಾಂನಲ್ಲಿ 37, ತುಂಗಭದ್ರಾ ಡ್ಯಾಂನಲ್ಲಿ 12, ಘಟಪ್ರಭಾ ಡ್ಯಾಂನಲ್ಲಿ 19, ಮಲಪ್ರಭಾ ಡ್ಯಾಂನಲ್ಲಿ 28, ಆಲಮಟ್ಟಿ ಡ್ಯಾಂನಲ್ಲಿ 37,ಕೆಆರ್ಎಸ್ ಡ್ಯಾಂನಲ್ಲಿ 43 ನೀರು ಸಂಗ್ರಹವಾಗಿದ್ದು, 14 ಜಲಾಶಯಗಳಲ್ಲಿ ಸೇರಿ ಹೇಳುವುದಾದ್ರೆ ಒಟ್ಟಾರೆ 33 ರಷ್ಟು ಸಂಗ್ರಹವಾಗಿದೆ.
ಇನ್ನೂ ರಾಜ್ಯದಲ್ಲಿ ಮೇ ತಿಂಗಳಲ್ಲಿಯೇ ಹೆಚ್ಚು ಮಳೆಯಾಗುತ್ತಿದ್ದು, ಜೂನ್ ಹಾಗೂ ಸೆಪ್ಟೆಂಬರ್ ಒಳಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 1 ರಿಂದ ಸೆ.30ರವರೆಗೆ ಅಂದ್ರೇ ನಾಲ್ಕು ತಿಂಗಳ ಅವಧಿಯಲ್ಲಿ ವಾಡಿಕೆಯಂತೆ 852 ಮಿಲಿ ಮೀಟರ್ ಮಳೆಯಾಗಬೇಕು. ಆದರೆ, ಈ ವರ್ಷ ಇದು ಸಾವಿರ ಮಿಲಿ ಮೀಟರ್ಗೂ ಅಧಿಕ ಮಳೆಯಾಗಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications