ಬಜೆಟ್ 2018: ಅಬಕಾರಿ ಸುಂಕ ಏರಿಕೆ, ತುಟಿ ಸುಡಲಿದೆ ಸಿಗರೇಟು
ಬೆಂಗಳೂರು, ಫೆಬ್ರವರಿ 16: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಿ ಆರ್ಥಿಕ ಸುಸ್ಥಿರತೆಗೆ ಆದ್ಯತೆ ನೀಡುವ ಕೇಂದ್ರ ಸರ್ಕಾರದ ಬಜೆಟ್ ನ ಪ್ರತಿರೂಪವಾಗಿ ಕಾಂಗ್ರೆಸ್ ಸರ್ಕಾರದ ಕೊನೆ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನರ ಮೇಲೆ ಹೆಚ್ಚು ಹೊರೆ ಹಾಕದೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚು ಅನುಕೂಲ ಕಲ್ಪಿಸುವ, ವಿದ್ಯಾರ್ಥಿಗಳು, ನೀರಾವರಿ ಯೋಜನೆಗಳಿಗೆ ಅನುಕೂಲವಾಗುವ ಯೋಜನೆಗಳನ್ನು ಘೋಷಿಸಿದ್ದಾರೆ. ಇಂದು 13ನೇ ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ಅಬಕಾರಿ ಸುಂಕ ಹೆಚ್ಚಿಸಿದ್ದು ಬಿಟ್ಟರೆ, ಹಲವು ಯೋಜನೆಗಳಿಗೆ ಅನುದಾನ ಹೆಚ್ಚಿಸಿ ಜನಸ್ನೇಹಿ ಎನಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
Live : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳು
ಯಾವುದು
ಏರಿಕೆ?:
*
ಮದ್ಯದ
ಮೇಲಿನ
ಅಬಕಾರಿ
ಸುಂಕ
ಶೇ8ರಷ್ಟು
ಹೆಚ್ಚಳ.
*
ಅಬಕಾರಿ
ಸುಂಕ
17
ಸ್ಲ್ಯಾಬ್
ಗಳಿಗೆ
ಶೇ
16
ರಿಂದ
ಶೇ
40ಕ್ಕೆ
ಏರಿಕೆ
*
ಮದ್ಯ,
ತಂಬಾಕು
ಉತ್ಪನ್ನಗಳು,
ಸಿಗರೇಟು,
ಬೀಡಿ
ಬೆಲೆ
ಏರಿಕೆ
ಯಾವುದು
ಇಳಿಕೆ?
*
ಡೀಸೆಲ್
ಮೇಲಿನ
ಸೆಸ್
16.75
ರೂನಿಂದ
16.65ಕ್ಕೆ
ಇಳಿಕೆ.
ಇದರಿಂದ
ಡೀಸೆಲ್
ತುಸು
ಅಗ್ಗವಾಗಲಿದೆ.
*
ಕಬ್ಬಿನ
ಮೇಲಿನ
ಸೆಸ್
ಗಳು
ಇಳಿಕೆ
*
ಸಿರಿಧಾನ್ಯಗಳಾದ
ನವಣೆ,
ಸಾಮೆ,
ಅರಕ
ಹಾಗೂ
ಬರಗು
ಮೇಲಿನ
ಹಿಟ್ಟುಗಳಿಗೆ
ತೆರಿಗೆ
ವಿನಾಯ್ತಿ
*
ದ್ವಿದಳ
ಧಾನ್ಯ,
ತೆಂಗಿನ
ಕಾಯಿ
ಸಿಪ್ಪೆಯ
ಮೇಲಿನ
ತೆರಿಗೆ
ವಿನಾಯಿತಿ.