#KarnatakaBudget2018 ಬವಣೆಗಳನ್ನು ಹೆಚ್ಚಿಸಿದ ಜನವಿರೋಧಿ ಬಜೆಟ್
ಬೆಂಗಳೂರು, ಜುಲೈ 05: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ಯಾರಿಗೆ ಏನು ಕೊಡುತ್ತಾರೆ ಎಂಬ ನಿರೀಕ್ಷೆ, ಏನು ಸಿಕ್ಕಿತು ಎಂಬುದರ ಬಗ್ಗೆ ಚರ್ಚೆ ಎಲ್ಲದ್ದಕ್ಕೂ ಸಾಮಾಜಿಕ ಜಾಲ ತಾಣಗಳಲ್ಲಿ ಇಂದಿನ ಚರ್ಚೆ ವಿಷಯವಾಗಿದೆ.
ಮೈತ್ರಿ ಧರ್ಮಕ್ಕೆ ಅನುಗುಣವಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿ, ಅದರಂತೆ, ಹಲವು ಮಹತ್ವಪೂರ್ಣ ಕಾರ್ಯಕ್ರಮಗಳನ್ನು ಪ್ರಕಟಿಸುವ ಹಾಗೂ ಹಾಲಿ ಜನಪ್ರಿಯ ಯೋಜನೆಗಳನ್ನು ವಿಸ್ತರಿಸಲು ಮುಂದಾಗಿದ್ದಾರೆ.
Development and Growth is our only agenda for #KarnatakaBudget2018. The INC-JDS Govt will continue all efforts to build a 'Nava Karnataka'.
— Dr. G Parameshwara (@DrParameshwara) July 5, 2018
In the next 5 years, we will extend the benefits of @INCKarnataka flagship programs and further the Karnataka Model of Development.
ಒಂದೇ ಹಂತದಲ್ಲಿ 2 ಲಕ್ಷರು ತನಕದ ಸುಸ್ತಿ ಬೆಳೆ ಸಾಲ ಮನ್ನಾ, ಸಿದ್ದರಾಮಯ್ಯ ಅವರ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ ಯೋಜನೆಗಳನ್ನು ಮುಂದುವರೆಸಲಾಗುವುದು ಎಂದು ಘೋಷಿಸಿದ್ದಾರೆ.
ಎಲ್ಲ ನಾಗರಿಕರಿಗೂ ಸಮರ್ಪಕ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ನೂತನ ಆರೋಗ್ಯ ಸೇವಾ ವ್ಯವಸ್ಥೆಯ ಅಡಿಯಲ್ಲಿ ಎಲ್ಲ ವಲಯದ, ಅಂದರೆ ಸಾರ್ವಜನಿಕ ಹಾಗೂ ಖಾಸಗಿವಲಯಗಳೆರಡರ ನೋಂದಾಯಿತ ವೈದ್ಯರ ನೆಟ್ವರ್ಕ್-ಜಾಲ ಸ್ಥಾಪನೆ ನಿರೀಕ್ಷೆಯಿದೆ.
#HDKbudget #MaitriBudget #karnatakabudget2018 pic.twitter.com/VXp7fOIMMn
— CM of Karnataka (@CMofKarnataka) July 5, 2018
ರೈತರ ಸಾಲಮನ್ನಾ ಕುರಿತಂತೆ ಮತ್ತೆ ಗೊಂದಲ ಚರ್ಚೆ ಆರಂಭವಾಗಿದೆ. ಸಾಲಮನ್ನಾ ಮಾಡಿರೋವುದೇನೋ ಸರಿ ಆದರೆ, ಸಂಪನ್ಮೂಲ ಗಳಿಕೆ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹಾಕಲಾಗುತ್ತಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್ ಡಿಸೀಲ್ ಮೇಲಿನ ಸೆಸ್ ಅನ್ನು ಯಾಕೆ ಏರಿಸಿದ್ದೀರಿ ಮುಖ್ಯಮಂತ್ರಿಗಳೆ? ಜನರ ಬವಣೆಗಳನ್ನು ಹೆಚ್ಚಿಸಿದ ಜನವಿರೋಧಿ ಬಜೆಟ್#KarnatakaBudget2018
— Harish Poonja (@HPoonja) July 5, 2018
ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಜನಪ್ರಿಯ ಯೋಜನೆಗಳಲ್ಲದೆ, ಪ್ರದೇಶವಾರು ಅನುದಾನವನ್ನು ಮುಂದುವರೆಸಲಾಗುತ್ತಿದೆ. ಹಾಗಾದರೆ, ಬಜೆಟ್ ಗಾತ್ರ ಏಕೆ ಹೆಚ್ಚಾಯಿತು? ಕರಾವಳಿ ಭಾಗಕ್ಕೆ ಹೊಸ ಯೋಜನೆ ಏಕೆ ನೀಡಿಲ್ಲ ಎಂದು ಪ್ರಶ್ನಿಸಲಾಗಿದೆ.