Get Updates
Get notified of breaking news, exclusive insights, and must-see stories!

ಕರ್ನಾಟಕ: ಇಂಧನ ಕ್ಷೇತ್ರದಲ್ಲಿ 2ಲಕ್ಷ ಕೋಟಿ ಬಂಡವಾಳ ಹೂಡಿಕೆ: ಸಿಎಂ

ಬೆಂಗಳೂರು, ಡಿಸೆಂಬರ್ 16: ಸದ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಸುಮಾರು 2 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಹರಿದು ಬಂದಿದೆ. ಇದರಿಂದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿ ರಾಜ್ಯವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ಇಂಡಿಯಾ ಎನರ್ಜಿ ವೀಕ್ -2023 ಪೂರ್ವಭಾಗಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಿ ಅವರು ಮಾತನಾಡಿದರು. ಭಾರತದದಲ್ಲಿ ಶೇ.46 ರಷ್ಟು ವಿದ್ಯುತ್ ಕರ್ನಾಟಕದಲ್ಲಿ ಉತ್ಪಾದನೆ ಆಗುತ್ತಿದೆ ಎಂದರು.

ಕರ್ನಾಟಕವು ಇಂಧನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಏಷ್ಯಾದಲ್ಲೇ ಮೊದಲ ಜಲವಿದ್ಯುತ್ ಶಕ್ತಿ ಘಟಕವನ್ನು ಪ್ರಾರಂಭಿಸಿದ್ದು, ಈ ನೆಲದಲ್ಲಿಯೇ. ಕರ್ನಾಟಕದಲ್ಲಿ ಹಾಲಿ 31,000ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಅದರಲ್ಲಿ ಅರ್ಧದಷ್ಟು ನವೀಕರಿಸಬಹುದಾದ ಇಂಧನವಾಗಿದೆ. ಬೆಂಗಳೂರಿನ ಸಮೀಪವೇ ಸೋಲಾರ್ ಪಾಕ್‌ ಸ್ಥಾಪಿಸಲಾಗಿದೆ. ಈ ಎಲ್ಲ ಅಂಶಗಳಿಂದ ಭಾರತದ ಶೇ.46 ರಷ್ಟು ವಿದ್ಯುತ್ ಕರ್ನಾಟಕ ರಾಜ್ಯದಲ್ಲಿ ಉತ್ಪಾದನೆ ಆಗುತ್ತಿದೆ.

ಆದರೆ ಇಂದು ವಿದ್ಯುತ್ ಸಂಗ್ರಹಣೆ ಸವಾಲಿನ ವಿಷಯವಾಗಿದೆ. ನವೀಕರಿಸಬಹುದಾದ ಇಂಧನವನ್ನು ವಿದ್ಯುತ್ ಉತ್ಪಾದನೆ ಹಾಗೂ ಸಂಗ್ರಹಣೆ ಹೆಚ್ಚಿಸಲು ಬಳಸಲಾಗುತ್ತದೆ. ರಾಜ್ಯದ ಹೈಡ್ರೋಜನ್ ಸೈನ್ಸ್ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯೂ ಆಗುತ್ತಿದೆ. ಇದಲ್ಲದೇ ಸಮುದ್ರದ ನೀರಿನಿಂದ ಅಮೋನಿಯಾ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ಪಳೆಯುಳಿಕೆ ಇಂಧನದ ಕಡಿಮೆ ಬಳಕೆ ಹಾಗೂ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಸಮತೋಲನ ಕಂಡುಕೊಳ್ಳಬೇಕಿದೆ ಎಂದು ವಿವರಿಸಿದರು.

Karnataka 2 lakh capital investment in energy sector CM Basavaraj Bommai Said

'ಒಂದು ದೇಶ-ಒಂದು ಗ್ರೀಡ್' ನೀತಿಯಿಂದ ಸುಧಾರಣೆ

ಇಂಧನ ಕ್ಷೇತ್ರದಲ್ಲಿ ಉತ್ತಮ ಆರ್ ಎಂಡ್ ಡಿ ಕೇಂದ್ರಗಳು ರಾಜ್ಯದಲ್ಲಿವೆ. ರಾಜ್ಯದಲ್ಲಿ ಉತ್ತಮ ರೀತಿಯ ವಿದ್ಯುತ್ ಉತ್ಪಾದನೆ ಹಾಗೂ ಪ್ರಸರಣಾ ವ್ಯವಸ್ಥೆಗಳಿವೆ. ಕೇಂದ್ರ ಸರ್ಕಾರದ ಒಂದು ದೇಶ, ಒಂದು ಗ್ರಿಡ್ ನೀತಿಯು ಇಂಧನ ಕ್ಷೇತ್ರದಲ್ಲಿ ಸುಧಾರಣೆ ತರಲಿದೆ. ದೇಶದಾದ್ಯಂತ ವಿದ್ಯುತ್ ಪ್ರಸರಣವನ್ನು ಸರಳೀಕರಿಸುವ ಯೋಜನೆ ಇದಾಗಿದೆ. ದೇಶಕ್ಕೆ ಸಾಕಾಗುವಷ್ಟು ಇಂಧನ ಉತ್ಪಾದನೆ ಆಗುವತ್ತ ಪ್ರಯತ್ನಗಳಾಗುತ್ತಿದೆ. ಹಸಿರು ಇಂಧನದ ಉತ್ಪಾದನೆ ಹಾಗೂ ಬಳಕೆಯ ಬಗ್ಗೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಗಮನಹರಿಸಬೇಕು. ಇಂಡಿಯಾ ಎನರ್ಜಿ ವೀಕ್ 2023 ಕಾರ್ಯಕ್ರಮ ಉದ್ದೇಶ ಸಾಕಾರಗೊಳ್ಳಲಿ ಎಂದು ಮುಖ್ಯಮಂತ್ರಿಗಳು ಆಶಿಸಿದರು.

ಅಭಿವೃದ್ಧಿಗೆ ಇಂಧನ ಶಕ್ತಿ ಬೇಕು

ಸಾಹಸಪ್ರಿಯನಾದ ಮನುಷ್ಯ ಹೊಸ ಅವಿಷ್ಕಾರಗಳನ್ನು ಮಾಡುತ್ತಲೇ ಇರುತ್ತಾನೆ. ಮೂಲಭೂತ ಸಂಶೋಧನೆಗಳನ್ನು ಪ್ರತ್ಯೇಕ ವ್ಯಕ್ತಿಗಳು ಮಾಡಿರುವುದೇ ಹೊರತು ಸಂಸ್ಥೆಗಳಲ್ಲ. ವಿಜ್ಞಾನಿಗಳಾದ ಸರ್ ಐಸಾಕ್ ನ್ಯೂಟನ್, ಥಾಮಸ್ ಆಲ್ವಾ ಎಡಿಸನ್ ನಂತವರ ಸಂಶೋಧನೆಗಳು ಪ್ರಪಂಚಕ್ಕೆ ಒಳಿತನ್ನು ತಂದಿದೆ. ಮನುಷ್ಯನ ಎಲ್ಲ ಅವಶ್ಯಕತೆಗಳನ್ನು ನಿಸರ್ಗ ಪೂರೈಸುತ್ತದೆ. ಸುಸ್ಥಿರ ಅಭಿವೃದ್ಧಿ ಹಾಗೂ ಸುಸ್ಥಿರ ಪರಿಸರವನ್ನು ಖಾತ್ರಿಪಡಿಸುವ ಸಂಶೋಧನೆಗಳು ನಡೆಯಬೇಕು. ಇಂಧನ ಮತ್ತು ಪರಿಸರ ವಿಜ್ಞಾನ ಎರಡೂ ಸಮತೋಲನವನ್ನು ಸಾಧಿಸಬೇಕು. ಪಳೆಯುಳಿಕೆ ಇಂಧನದಿಂದ ಪರಿಸರದಲ್ಲಿ ಅಸಮತೋಲನತೆಯನ್ನು ಸೃಷ್ಟಿಸಿದೆ. ಅಭಿವೃದ್ಧಿಗೆ ಇಂಧನ ಶಕ್ತಿ ಬೇಕು ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ, ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಡಾ. ಹರ್ ದೀಪ್ ಸಿಂಗ್ ಪುರಿ ಮತ್ತಿತರರು ಪಾಲ್ಗೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+