Get Updates
Get notified of breaking news, exclusive insights, and must-see stories!

ಸ್ವಾತಂತ್ರ್ಯ ದಿನಕ್ಕೆ ಹವಾಮಾನ ಬದಲಾವಣೆ ವಿರುದ್ಧ ಹೋರಾಡುವ ಹೊಸ ಸಂಕಲ್ಪ ಕೈಕೊಂಡ ಕರಣ್ ಜೋಹರ್

ಭಾರತದ ಬಹುಭಾಷಾ ಸಾಮಾಜಿಕ ಮಾಧ್ಯಮ ವೇದಿಕೆ ಕೂ ಆಪ್ ಅತ್ಯಾಕರ್ಷಕ ಅಭಿಯಾನವೊಂದನ್ನು ಪ್ರಕಟಿಸಿದೆ. ಜನರು ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಸಂದರ್ಭದಲ್ಲಿ ಹೊಸ ಸಂಕಲ್ಪ ಕೈಗೊಳ್ಳುವುದನ್ನು ಹೊಸ ಅಭಿಯಾನ #NayeBharatKaSapna ಪ್ರೋತ್ಸಾಹಿಸುತ್ತದೆ.

ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರು ಈ ಅಭಿಯಾನದ ಹ್ಯಾಶ್‌ಟ್ಯಾಗ್ #NayeBharatKaSapna ಬಿಡುಗಡೆ ಮಾಡಿ, ಹೊಸ ಭಾರತಕ್ಕಾಗಿ ಬದಲಾಗುವ ಸಂಕಲ್ಪವನ್ನು ಸಾಮೂಹಿಕವಾಗಿ ಸ್ವೀಕರಿಸಲು ಬಳಕೆದಾರರನ್ನು ಉತ್ತೇಜಿಸಿದ್ದಾರೆ.

ಭಾರತ-ನಿರ್ಮಿತ ಉತ್ಪನ್ನಗಳನ್ನು ಬಳಸುವ ಮೂಲಕ #GoSwadeshi ನಿರ್ಣಯ ಕೈಗೊಳ್ಳುವುದು, ಏಕ ಬಳಕೆ ಪ್ಲಾಸ್ಟಿಕ್ ತ್ಯಜಿಸುವ ಮೂಲಕ #CleanTheEarth, ಮರುಬಳಕೆ (reuse), ಕಡಿಮೆಗೊಳಿಸು (reduce), ದುರಸ್ತಿ (repair) ಮತ್ತು ಪುನಃ ಬಳಸು (recycle) ಅಳವಡಿಸಿಕೊಳ್ಳುವ ಮೂಲಕ #FightClimateChange ಸಂಕಲ್ಪ ಮಾಡಬಹುದು. ಕರಣ್ ಜೋಹರ್ ಅವರು ವಸ್ತುಗಳ ಮರುಬಳಕೆ ಮತ್ತು ಪುನರ್ ನಿರ್ಮಾಣ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಹವಾಮಾನ ಬದಲಾವಣೆಯ ಸಮಸ್ಯೆ ವಿರುದ್ಧ ಹೊರಡುವ ಪ್ರತಿಜ್ಞೆ ಮೂಲಕ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ಪೋಸ್ಟ್ ಲಿಂಕ್ - ಕರಣ್ ಜೋಹರ್: https://www.kooapp.com/koo/karanjohar/291854e9-08c2-4ffa-8222-45bbeb955b94

ಭಾರತದ ಬಹು-ಭಾಷಾ ವೇದಿಕೆ ಕೂ - ಈ ಅಭಿಯಾನದ ಮೂಲಕ, ಬಳಕೆದಾರರು ಈ ದೇಶಕ್ಕಾಗಿ ಏನು ಮಾಡಲು ಬಯಸುತ್ತಾರೆ ಎಂಬುದನ್ನು ಹಂಚಿಕೊಂಡು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸುವ ಅವಕಾಶ ಕಲ್ಪಿಸಿದೆ. ಆಗಸ್ಟ್ 1 ರಿಂದ15 ದಿನಗಳ ಕಾಲದ ಈ ಅಭಿಯಾನವು ಸಮಾಜದ ಕಲ್ಯಾಣಕ್ಕಾಗಿ ಪ್ರತಿದಿನ ಶ್ರಮಿಸುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದಂತೆ ಭಾರತದ ಸಶಸ್ತ್ರ ಪಡೆಗಳು ಮತ್ತು ಕೋವಿಡ್ ಯೋಧರಿಗೆ ವಂದನೆಗಳನ್ನು ಸಲ್ಲಿಸಲು ಜನರನ್ನು ಪ್ರೋತ್ಸಾಹಿಸುತ್ತದೆ.

Karan Johar Kick starts the Independence Day campaign on Kooapp

ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಕೂ ವೇದಿಕೆಯ ಮುಖ್ಯ ವ್ಯವಹಾರ ಅಧಿಕಾರಿಗಳಾದ ಸುನೀಲ್ ಕಾಮತ್, " ಶತಕೋಟಿ ಧ್ವನಿಗಳಿಗೆ ಡಿಜಿಟಲ್ ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿಕೊಡುವುದರ ಮೂಲಕ, ಕೂ ಭಾರತದ ಭಾವನೆಯನ್ನು ಪ್ರತಿಬಿಂಬಿಸುತ್ತದೆ. #ನವಭಾರತದಕನಸು ಅಭಿಯಾನ ಪ್ರಗತಿಪರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ಜನರನ್ನು ಪ್ರೇರೇಪಿಸುವ ಮೂಲಕ ಅಭಿವ್ಯಕ್ತಿಯ ಹೊಸ ಪ್ರಯಾಣವನ್ನು ಮುನ್ನಡೆಸುತ್ತದೆ. ಕರಣ್ ಜೋಹರ್ ಅವರು ಈ ಅಭಿಯಾನವನ್ನು ಪ್ರಾರಂಭಿಸಿದ್ದು ನಮಗೆ ಖುಷಿ ತಂದಿದೆ, ಜೊತೆಗೆ ಹೊಸ ಭಾರತಕ್ಕಾಗಿ ಸಾಮಾಜಿಕ ಕಾರಣವನ್ನು ತೆಗೆದುಕೊಳ್ಳಲು ತಮ್ಮ ಫಾಲೋವರ್ಸ್ ಪ್ರೇರೇಪಿಸುತ್ತಿರುವ ಎಲ್ಲಾ ಗಣ್ಯ ವ್ಯಕ್ತಿಗಳಿಗೆ ಕೃತಜ್ಞತೆಗಳು." ಎಂದು ಮಾತನಾಡಿದರು

#ಹವಾಮಾನಬದಲಾವಣೆವಿರುದ್ಧಹೋರಾಟ ಕುರಿತು ತಮ್ಮ ಬದ್ಧತೆಯ ಬಗ್ಗೆ ಮಾತನಾಡುತ್ತಾ ಕರಣ್ ಜೋಹರ್, "ಈ ಹವಾಮಾನ ಬದಲಾವಣೆಯ ಹೋರಾಟದಲ್ಲಿ ಪ್ರತಿಯೊಬ್ಬರಿಗೂ ಒಂದು ಪಾತ್ರವಿದೆ. ನಾನು #ನವಭಾರತದಕನಸು ಅಭಿಯಾನದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ, ಕೂ ನಲ್ಲಿ ಬಹುಭಾಷಾ ಬಳಕೆದಾರರೊಂದಿಗೆ ಸಂವಹನ ನಡೆಸುತ್ತೇನೆ ಮತ್ತು ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಈ ಸ್ವಾತಂತ್ರ್ಯ ಮಾಸದಲ್ಲಿ ನಾವೆಲ್ಲರೂ ಕೈಜೋಡಿಸೋಣ ಮತ್ತು ನಮ್ಮ ಗ್ರಹ, ನಮ್ಮ ದೇಶ ಮತ್ತು ನಮ್ಮ ಜನರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣ. ಜೈ ಹಿಂದ್!" ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+