ಆರ್ ಟಿ ನಗರದ ದತ್ತು ಭಾವಿ ಸುಪ್ರೀಂ ಜಸ್ಟೀಸ್
ನವದೆಹಲಿ, ಜ.3: ಬೆಂಗಳೂರಿನ ಆರ್ ಟಿ ನಗರದ ನಿವಾಸಿ, ಸುಪ್ರೀಂಕೋರ್ಟಿನ ಹಾಲಿ ನ್ಯಾಯಮೂರ್ತಿ ಹಂದ್ಯಾಲ ಲಕ್ಷ್ಮೀನಾರಾಯಣಸ್ವಾಮಿ ದತ್ತು ಅವರು ಭಾರತದ ಭಾವಿ ಚೀಫ್ ಜಸ್ಟೀಸ್!
ಹೌದು,
ಈಗ
Chief
Justice
of
India
ಆಗಿರುವ
ಪಿ
ಸದಾಶಿವಂ
ಅವರ
ಸೇವಾವಧಿ
ಇದೇ
ವರ್ಷ
ಏಪ್ರಿಲ್
26ಕ್ಕೆ
ಕೊನೆಗೊಳ್ಳಲಿದೆ.
ಬಳಿಕ,
ಏಪ್ರಿಲ್
27ರಿಂದ
ಮುಖ್ಯ
ನ್ಯಾಯಮೂರ್ತಿಗಳಾಗಿ
ಜಸ್ಟೀಸ್
ಆರ್
ಎಂ
ಲೋಧಾ
ಅವರು
ಅಧಿಕಾರ
ವಹಿಸಿಕೊಳ್ಳಲಿದ್ದಾರೆ.
5
ತಿಂಗಳ
ಅವರ
ಸೇವಾವಧಿ
ಸೆ.
27
ಕ್ಕೆ
ಮುಕ್ತಾಯಗೊಳ್ಳಲಿದೆ.
ಅದಾದನಂತರ,
ಜಸ್ಟೀಸ್
ಎಚ್ಎಲ್
ದತ್ತು
ಅವರು
2015ರ
ಡಿಸೆಂಬರ್
3ರವರೆಗೆ
ಕಾರ್ಯಭಾರ
ನಿರ್ವಹಿಸಲಿದ್ದಾರೆ.
ಚಿಕ್ಕ-ಚೊಕ್ಕ
ಕುಟುಂಬ:
ಅಂದಹಾಗೆ
ಜಸ್ಟೀಸ್
ದತ್ತು
ಅವರು
ಬೆಂಗಳೂರಿನ
ಆರ್
ಟಿ
ನಗರದವರು.
ಅವರ
ಪತ್ನಿ
ಜಿ
ಗಾಯತ್ರಿ
ದತ್ತು,
ಪುತ್ರ
ನಿತಿನ್
ದತ್
ಮತ್ತು
ಮೊಮ್ಮಗ
ಮಿಹಿರ್
ಆದಿತ್ಯ.
ಜಸ್ಟೀಸ್
ದತ್ತು
ಅವರು
1950ರ
ಡಿ.
3ರಂದು
ಜನಿಸಿದರು.
ಬಿಎಸ್ಸಿ-
ಎಲ್ಎಲ್ಬಿ
ಪದವೀಧರರಾದ
ದತ್ತು
1975ರ
ಅ.
23ರಂದು
ವಕೀಲರಾಗಿ
ನೋಂದಾಯಿತರಾದರು.
ಅವರು
ಮೊದಲು
ವಕೀಲಿ
ವೃತ್ತಿ
ಆರಂಭಿಸಿದ್ದು
ಬೆಂಗಳೂರಿನಲ್ಲಿ.
ಸಿವಿಲ್
,
ಕ್ರಿಮಿನಲ್,
ಸಾಂವಿಧಾನಿಕ
ಮತ್ತು
ತೆರಿಗೆ
ಸಂಬಂಧಿ
ವ್ಯಾಜ್ಯಗಳಲ್ಲಿ
ಅವರು
ವಾದ
ಮಾಡುತ್ತಿದ್ದರು.
ಬೆಂಗಳೂರು
ಮಹಾನಗರಪಾಲಿಕೆಯ
ವಕೀಲರಾಗಿದ್ದರು:
1983ರಲ್ಲಿ
ಸರ್ಕಾರಿ
ವಕೀಲರಾಗಿ
ನೇಮಕಗೊಂಡ
ಅವರು
1990ರಲ್ಲಿ
ಸರ್ಕಾರಿ
ಅಡ್ವೋಕೇಟ್
ಆಗಿ
ನಿಯೋಜಿತರಾಗಿ
1992ರವರೆಗೆ
ಕಾರ್ಯನಿರ್ವಹಿಸಿದರು.
1992ರಿಂದ
1993ವರೆಗೆ
ತೆರಿಗೆ
ಇಲಾಖೆಯ
ಹೆಚ್ಚುವರಿ
ಸ್ಥಾಯಿ
ವಕೀಲರಾಗಿದ್ದ
ಅವರು,
ಬೆಂಗಳೂರು
ಮಹಾನಗರಪಾಲಿಕೆಯ
ವಕೀಲರಾಗಿಯೂ
ಕೆಲಸ
ಮಾಡಿದರು.
1995ರ ಡಿ. 18ರಂದು ಕರ್ನಾಟಕ ಹೈಕೋರ್ಟ್ನ ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡ ದತ್ತು , 2007ರ ಮೇ 18ರಂದು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದರು. ಬಳಿಕ 2008ರ ಡಿ. 17ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.
ಹಿಂದಿನ
ಮೂವರು
ಕನ್ನಡಿಗ
ಮುಖ್ಯ
ನ್ಯಾಯಮೂರ್ತಿಗಳು
1.
ಇಎಸ್
ವೆಂಕಟರಾಮಯ್ಯ
-
19.6.1989
-
17.12.1989
2.
ಎಂ
ಎನ್
ವೆಂಕಟಾಚಲಯ್ಯ
-
12.2.1993
-
24.10.1994
3.
ಎಸ್
ರಾಜೇಂದ್ರಬಾಬು
-
2.5.2004
-
1.6.2004