ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿ, ಮೇಷ್ಟರು, ಸಜ್ಜನ, ಸಾಶಿ ಮರುಳಯ್ಯ ಕಣ್ಮರೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 05 : ಹಿರಿಯ ಸಾಹಿತಿ ಡಾ.ಸಾ.ಶಿ.ಮರುಳಯ್ಯ ಅವರು ವಿಧಿವಶರಾಗಿದ್ದಾರೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದು, ದೇಹವನ್ನು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾನ ಮಾಡಲಾಗಿದೆ.

ಹೃದಯ ಸಂಬಂಧಿ ಕಾಯಿಲೆಯಿಂದ ಬಳುತ್ತಿದ್ದ ಸಾ.ಶಿ.ಮರುಳಯ್ಯ (85) ಅವರನ್ನು ಜನವರಿ 22ರಂದು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 6 ಗಂಟೆಗೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. [ಸಾ.ಶಿ.ಮ. ಜೊತೆಗೊಂದು ಸುಮಧುರ ಸಂಜೆ]

sa shi marulayya

'ತಮ್ಮ ದೇಹವನ್ನು ದಾನ ಮಾಡಬೇಕು ಎಂದು ಪತ್ರ ಬರೆದಿಟ್ಟಿದ್ದರು. ಅವರ ಇಚ್ಛೆಯಂತೆ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದೇಹವನ್ನು ದಾನ ಮಾಡಲಾಗುತ್ತದೆ' ಎಂದು ಸಾ.ಶಿ.ಮರುಳಯ್ಯ ಪುತ್ರ ಸಾ.ಶಿ.ಶಿವಪ್ರಸಾದ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ. [ಸಾ.ಶಿ.ಮರುಳಯ್ಯ ಬಗ್ಗೆ ಓದಿ]

1931ರ ಜನವರಿ 28ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಾಸಲು ಗ್ರಾಮದಲ್ಲಿ ಜನಿಸಿದ್ದ, ಸಾ.ಶಿ.ಮರುಳಯ್ಯ ಅವರ ಪೂರ್ಣ ಹೆಸರು ಸಾಸಲು ಶಿವರುದ್ರಯ್ಯ ಮರುಳಯ್ಯ. ಮರುಳಯ್ಯ ಅವರು ಪ್ರಾಧ್ಯಾಪಕರಾಗಿ ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ವಿವಿಧ ಕಡೆ ಸುದೀರ್ಘ ಸೇವೆ ಸಲ್ಲಿಸಿದ್ದರು.

ಡಾ.ಸಾ.ಶಿ.ಮರುಳಯ್ಯ ಅವರು ಕಾವ್ಯ, ಪ್ರಹಸನ, ಕಾದಂಬರಿ, ಸಣ್ಣಕಥೆ, ನಾಟಕ, ವಿಮರ್ಶೆ ಸೇರಿದಂತೆ 60ಕ್ಕೂ ಅಧಿಕ ಕೃತಿಗಳನ್ನು ರಚನೆ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಿಂದ 'ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ' ಕುರಿತ ಮಹಾ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಪ್ರಮುಖ ಕೃತಿಗಳು : ಶಿವತಾಂಡವ, ಕೆಂಗನಕಲ್ಲು, ರೂಪಸಿ ಮುಂತಾದ ಕವನ ಸಂಕಲನ, ನೆಲದ ಸೊಗಡು, ಹೇಮಕೂಟ ಕಥಾ ಸಂಕಲನ, ಮರೀಬೇಡಿ, ವಿಜಯವಾತಪಿ ನಾಟಕ, ಭಾರತ ರತ್ನ ನೆಹರು, ದೇವುಡು ಜೀವನ ಚರಿತ್ರೆ ಸಾ.ಶಿ.ಮರುಳಯ್ಯ ಅವರ ಪ್ರಮುಖ ಕೃತಿಗಳು.

English summary
Kannada poet Dr.Sa.Shi.Marulayya no more. On Friday, Febuary 5, 2016 morning Sa.Shi.Marulayya died in Jayadeva hospital Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X