Kannada Live News: ಒನ್ಇಂಡಿಯಾ ಕನ್ನಡ ಲೈವ್ ಪೇಜ್ ನ್ಯೂಸ್ ಅಪ್ಡೇಟ್
Karnataka
oi-Malathesha M
By Oneindia Staff
7,00,00,000 ಕೋಟಿ ಕನ್ನಡಿಗರ ನೆಚ್ಚಿನ & ನಂಬಿಕೆಯ ನ್ಯೂಸ್ ಪೋರ್ಟಲ್ ಈಗ ಲೈವ್ ಪೇಜ್ನಲ್ಲಿ. ಕನ್ನಡದಲ್ಲಿ ಸುದ್ದಿಗಳನ್ನು ತಾಜಾ ಮತ್ತು ನೇರ ಪ್ರಸಾರದ ಮೂಲಕ ಪಡೆಯಲು ಒನ್ಇಂಡಿಯಾ ಕನ್ನಡ ಪೋರ್ಟಲ್ ಫಾಲೋ ಮಾಡಿ. ನಮ್ಮ ಲೈವ್ ಪೇಜ್ ಮೂಲಕ ರಾಜಕೀಯ, ಉದ್ಯೋಗ, ಸಿನಿಮಾ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಉಚಿತವಾಗಿ ಓದಿರಿ. ಇಡೀ ಪ್ರಪಂಚದ ಮೂಲೆ ಮೂಲೆಯಲ್ಲಿ ನಡೆಯುವ ಪ್ರತಿಕ್ಷಣದ ಅಪ್ಡೇಟ್ ಕನ್ನಡಿಗರ ಮುಂದೆ ಇಡಲು ಒನ್ಇಂಡಿಯಾ ಕನ್ನಡ ಲೈವ್ ಪೇಜ್ ಫಾಲೋ ಮಾಡಿ.
Oct 11, 2025, 8:06 am IST
ಚೀನಾ ವಿರುದ್ಧ ಶೇ. 100 ತೆರಿಗೆ ಹೇರಿಕೆ?
ಚೀನಾ ವಿರುದ್ಧ ಇದೀಗ ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ಷರಶಃ ರೊಚ್ಚಿಗೆದ್ದಿದ್ದು, ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡುವ ಮೂಲಕ ಚೀನಾಗೆ ಡಬಲ್ ಆಘಾತ ನೀಡಲು ಸಜ್ಜಾಗಿದ್ದಾರೆ. ಚೀನಾ ವಿಚಾರದಲ್ಲಿ ಪದೇ ಪದೇ ಅಸಮಾಧಾನ ಹೊಂದಿರುವ ಡೊನಾಲ್ಡ್ ಟ್ರಂಪ್, ಕೆಲವು ತಿಂಗಳ ಹಿಂದಷ್ಟೇ ಚೀನಾ ಜೊತೆಗೆ ಟ್ಯಾಕ್ಸ್ ಫೈಟ್ ಮಾಡಲು ಹೋಗಿ ಆ ನಂತರ ಸೈಲೆಂಟ್ ಆಗಿದ್ದರು. ಇದೀಗ ಮತ್ತೊಂದು ಹಂತದಲ್ಲಿ ತೆರಿಗೆ ವಾರ್ ಮಾಡಲು ಟ್ರಂಪ್ ಮುಂದೆ ನುಗ್ಗಿದಂತಿದೆ. ಇದೇ ಕಾರಣಕ್ಕೆ ದಿಢೀರ್ ಎಚ್ಚರಿಕೆ ನೀಡುವ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೆ ಶೇಕಡಾ 100ರಷ್ಟು ತೆರಿಗೆ ಹೇರಿಕೆ ಮಾಡಲು ಚಿಂತನೆ ನಡೆಸಿದ್ದಾರೆ ಎಂಬ ಮುನ್ಸೂಚನೆ ಸಿಕ್ಕಿದೆ.
Oct 10, 2025, 4:42 pm IST
ಎಸ್ಎಸ್ಎಲ್ಸಿ ಪರೀಕ್ಷೆಗೆ ಮಹತ್ವದ ಅಪ್ಡೇಟ್
ಶಿಕ್ಷಣ ಇಲಾಖೆ 2026ರ ಮಾರ್ಚ್/ಏಪ್ರಿಲ್ನಲ್ಲಿ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆ-1 ನೋಂದಣಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸರ್ಕಾರಿ, ಅನುದಾನಿತ & ಅನುದಾನರಹಿತ ಶಾಲಾ ವಿದ್ಯಾರ್ಥಿಗಳಿಗೆ ನೋಂದಣಿ ಅರ್ಜಿ ಆಹ್ವಾನಿಸಲಾಗಿದೆ. ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ ನೋಂದಣಿ ಮಾಡುವಂತೆ ಈಗ ತಿಳಿಸಲಾಗಿದೆ. ಪ್ರಥಮ ಬಾರಿಗೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ 710 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ಬಾಲಕಿಯರು, ಆದಾಯ ಮಿತಿಗೆ ಒಳಪಟ್ಟ ವಿವಿಧ ಪ್ರವರ್ಗಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಪರೀಕ್ಷೆಗೆ ಹಾಜರಾಗಲು ಶೇಕಡಾ 75ರಷ್ಟು ಹಾಜರಾತಿ ಕಡ್ಡಾಯ ಮಾಡಲಾಗಿದೆ.
Oct 10, 2025, 12:42 pm IST
ನವಿ ಮುಂಬೈ ವಿಮಾನ ನಿಲ್ದಾಣ ಉದ್ಘಾಟನೆ
ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ ಮತ್ತು ದೇಶದ ವಾಯುಯಾನ ಪ್ರಯಾಣದಲ್ಲಿ ನಿರ್ಣಾಯಕ ಮೈಲಿಗಲ್ಲು ಆಗಿರುವ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (NMIA) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಪ್ರಧಾನಿ ನರೇಂದ್ರ ಮೋದಿ ಬುಧವಾರ 19,650 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಉದ್ಘಾಟಿಸಿದರು.
Oct 10, 2025, 8:15 am IST
ಬೆಳ್ಳಿ ಬೆಲೆ ಒಂದೇ ದಿನ 7,000 ರೂಪಾಯಿ ಏರಿಕೆ!
ಚಿನ್ನದ ಬೆಲೆ ಮತ್ತೆ ದಿಢೀರ್ ಏರಿಕೆ ಆಗಿದೆ. ಈ ಮೂಲಕ ಚಿನ್ನದ ಬೆಲೆ ಬಗ್ಗೆ ತಲೆ ಕೆಡಿಸಿಕೊಂಡು ಕೂತಿದ್ದ ಆಭರಣ ಪ್ರಿಯರಿಗೆ ಭಾರಿ ದೊಡ್ಡ ಆಘಾತ ಎದುರಾಗಿದೆ. ಚಿನ್ನಕ್ಕೆ ಸಖತ್ ಬೇಡಿಕೆ ಬಂದಿರುವ ಹಿನ್ನೆಲೆ ಬಂಗಾರದ ಬೆಲೆ ಭಾರಿ ಭರ್ಜರಿ ಏರಿಕೆ ಕಂಡಿದೆ. ಇದರ ಜೊತೆಗೆ ಬೆಳ್ಳಿ ಬೆಲೆ ಕೂಡ ಭಯ ಹುಟ್ಟಿಸುವ ಮಟ್ಟಿಗೆ ಏರಿಕೆ ಕಾಣುತ್ತಿದೆ. ಒಂದು ಅಂದಾಜಿನ ಪ್ರಕಾರ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣಲಿದೆ ಅಂತಾ ಚಿನ್ನ & ಬೆಳ್ಳಿ ಮಾರುಕಟ್ಟೆ ತಜ್ಞರು ಕೆಲವು ತಿಂಗಳ ಹಿಂದೆ ಮುನ್ಸೂಚನೆ ನೀಡಿದ್ದರು. ಈಗ ಅದೇ ರೀತಿಯಾಗಿ ಬೆಳ್ಳಿ ಬೆಲೆ ಆಕಾಶ ಮುಟ್ಟುತ್ತಿದ್ದು, ಬೆಳ್ಳಿಯ ಬೆಲೆ ನಿನ್ನೆ ಒಂದೇ ದಿನ ಬರೋಬ್ಬರಿ 7,000 ರೂಪಾಯಿ ಪ್ರತಿ ಕೆಜಿಗೆ ಏರಿಕೆ ಕಂಡಿದೆ.
Oct 10, 2025, 6:51 am IST
4 ದಿನ ಮತ್ತಷ್ಟು ಮಳೆ ಅಬ್ಬರ?
ಚಂಡಮಾರುತ ಪರಿಣಾಮ ಮಳೆ ಆರ್ಭಟ ಮತ್ತೆ ಶುರುವಾಗಿದೆ, ಹೀಗೆ ಸೈಕ್ಲೋನ್ ಹಿನ್ನೆಲೆ ಮಳೆ ಆರ್ಭಟ ಹೆಚ್ಚಾದ ಕಾರಣ ಜನ ಜೀವನ ಅಸ್ತವ್ಯಸ್ಥ ಆಗಿದೆ. ಮತ್ತೊಂದು ಕಡೆ ಚಳಿ ಪ್ರಮಾಣ ಕೂಡ ಹೆಚ್ಚಾಗಿದ್ದು, ಜನ ಚಿಂತೆ ಮಾಡುವಂತೆ ಆಗಿದೆ. ಇಂತಹ ಸಮಯಕ್ಕೇ ದಕ್ಷಿಣ ಭಾರತದಲ್ಲಿ ಮಳೆಯ ಕಾರಣ ಸಾಕಷ್ಟು ಸಮಸ್ಯೆ ಎದುರಾಗಿದ್ದು, ಈಗಾಗಲೇ ಹಲವು ಪ್ರದೇಶಗಳು ಮಳೆಯ ನೀರಲ್ಲಿ ಮುಳುಗಿ ಹೋಗಿ ಸಮಸ್ಯೆ ದೊಡ್ಡದಾಗುತ್ತಿದೆ. ಇದೇ ಸಮಯದಲ್ಲಿ ಮತ್ತಷ್ಟು ಕೋಪ ಮಾಡಿಕೊಂಡಿರುವ ಪ್ರಕೃತಿ ಮಾತೆ ಮತ್ತೆ ತನ್ನ ಆರ್ಭಟ ತೋರಿಸುವ ಸಾಧ್ಯತೆ ದಟ್ಟವಾಗಿದೆ. ಮಳೆ ಆರ್ಭಟಕ್ಕೆ ಬೆಚ್ಚಿಬಿದ್ದ ಜನರಿಗೆ ಮತ್ತೆ 4 ದಿನ ಮತ್ತಷ್ಟು ಮಳೆ ಅಬ್ಬರ ಗ್ಯಾರಂಟಿ ಆಗಿದೆ...
Oct 09, 2025, 9:33 pm IST
ಸಂಪುಟ ಬದಲಾವಣೆ ಸಿಎಂಗೆ ಬಿಟ್ಟ ವಿಚಾರ
ಸಚಿವ ಸಂಪುಟದಲ್ಲಿ ಬದಲಾವಣೆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ಇದು ಪಕ್ಷ ಹಾಗೂ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಇದೀಗ ರಾಜ್ಯದಲ್ಲಿ ಸಚಿವ ಸಂಪುಟ ವಿಚಾರ ಭಾರಿ ದೊಡ್ಡ ಸದ್ದು ಕೂಡ ಮಾಡುತ್ತಿದ್ದು, ಹಲವು ಹಾಲಿ ಸಚಿವರು ತಮ್ಮ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ಈ ನಡುವೆ ಹೊಸ ಸಚಿವರ ಎಂಟ್ರಿ ಕೂಡ ಆಗುವುದು ಬಹುತೇಕ ಫಿಕ್ಸ್ ಆಗುತ್ತಿದೆ.
Oct 09, 2025, 3:23 pm IST
ಹೊಸ ಬಿಪಿಎಲ್ ಕಾರ್ಡ್ ವಿತರಣೆ
ಶೀಘ್ರದಲ್ಲೇ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಭರವಸೆ ನೀಡಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹರನ್ನು ಎಪಿಎಲ್ಗೆ ವರ್ಗಾಹಿಸುವ ಕೆಲಸ ಮುಂದುವರೆದಿದ್ದು, ಅರ್ಹತೆ ಇರುವ ಎಲ್ಲರಿಗೂ ಬಿಪಿಎಲ್ ಪಡಿತರ ಚೀಟಿಗಳನ್ನು ನೀಡಲಾಗುವುದು ಎಂದು ಹೇಳಿದರು.
Oct 09, 2025, 2:20 pm IST
ಹಾಸನಾಂಬೆ ದರ್ಶನ ಪ್ರಾರಂಭ
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲನ್ನು ಗುರುವಾರ ಶಾಸ್ತ್ರೋಕ್ತ ವಿಧಿವಿಧಾನದೊಂದಿಗೆ ತೆಗೆಯಲಾಗಿದೆ. ಭಕ್ತರು ದೇವಿಯ ದರ್ಶನ ಪಡೆಯುವುದಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮಧ್ಯಾಹ್ನ 12.10 ಕ್ಕೆ ಅರಸು ವಂಶಸ್ಥ ನಂಜರಾಜೇ ಅರಸ್ ಅವರು ಗೊನೆಯುಳ್ಳ ಬಾಳೆಗೊನೆ ಕಡಿದ ನಂತರ ಬಾಗಿಲನ್ನು ತೆರೆಯಲಾಗಿದೆ. ಕಳೆದ ಬಾರಿ ಹಾಸನಾಂಬೆ ದರ್ಶನಕ್ಕೆ ಭಾರೀ ಗೊಂದಲ ಸೃಷ್ಟಿಯಾಗಿತ್ತು. ಹೀಗಾಗಿ, ಈ ಬಾರಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
Oct 09, 2025, 1:04 pm IST
‘ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಾರೆ’
ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗಬೇಕು ಎಂಬುದೇ ನನ್ನ ಅಭಿಲಾಷೆ, ಅಂತಾ ದಿಢೀರ್ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ನೀಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗಬೇಕು ಎಂಬ ಆಸೆ ಇದ್ದು, ಅವರು ಸಿಎಂ ಆಗುತ್ತಾರೆ ಕೂಡ ಎಂದಿದ್ದಾರೆ ಶಾಸಕ ಇಕ್ಬಾಲ್ ಹುಸೇನ್. ಈಗಾಗಲೇ ಸಿಎಂ ಸ್ಥಾನದ ಬಗ್ಗೆ ಯಾರೂ ಮಾತನಾಡಬಾರದು ಎಂದು ಹೈಕಮಾಂಡ್ ನಾಯಕರು & ವರಿಷ್ಠರು ಎಚ್ಚರಿಕೆ ನೀಡಿದ್ದರೂ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಈ ಹೇಳಿಕೆ ನೀಡಿರುವುದು ಭಾರಿ ಕುತೂಹಲ ಕೆರಳಿಸಿದೆ.
ಅಲ್ಲದೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಅವರು ಸೇರಿದಂತೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಎಲ್ಲರೂ ಸೇರಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಅಂತಾ ಕೂಡ ಇದೀಗ ಶಾಸಕ ಇಕ್ಬಾಲ್ ಹುಸೇನ್ ಭರವಸೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮತ್ತೆ ಕಾಂಗ್ರೆಸ್ ಸರ್ಕಾರದಲ್ಲಿ ಹೊಸ ಮುಖ್ಯಮಂತ್ರಿ ವಿಚಾರ ಬಿರುಗಾಳಿ ಎಬ್ಬಿಸುತ್ತಾ? ಅನ್ನೋದನ್ನ ಸ್ವಲ್ಪದಿನ ಕಾದು ನೋಡಬೇಕು.
Oct 09, 2025, 11:22 am IST
ಬಂಗಾರದ ಬೆಲೆ ಮತ್ತೆ ಏರಿಕೆ
ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಕಂಡುಬಂದಿದ್ದು, ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಬಂಗಾರ ದರವು 1,13,800 ರೂಪಾಯಿ ತಲುಪಿದ್ದು ಆಭರಣ ಮಾಡಿಸುವವರಿಗೆ ಚಿನ್ನ ಬೆಲೆ ಇಷ್ಟು ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಚಿಂತೆ ತರಿಸಿದೆ. ಹಾಗೂ 10 ಗ್ರಾಂ 24 ಕ್ಯಾರೆಟ್ ಅಂದ್ರೆ ಶುದ್ಧ ಚಿನ್ನ ಬೆಲೆ 1,24,150 ರೂಪಾಯಿಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಒಂದೇ ದಿನ 220 ರೂಪಾಯಿ ಏರಿಕೆ ಕಂಡಿದೆ ಶುದ್ಧ ಚಿನ್ನದ ಬೆಲೆ. ಮತ್ತೊಂದು ಕಡೆ ಬೆಳ್ಳಿ ಬೆಲೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಬೆಳ್ಳಿಯ ಬೆಲೆ ಇಂದು ಪ್ರತಿ ಕೆಜಿಗೆ 1,000 ರೂಪಾಯಿ ಏರಿಕೆ ಕಾಣುವ ಮೂಲಕ 1,61,000 ರೂಪಾಯಿ ತಲುಪಿದೆ.
11:22 AM, 9 Oct
ಬಂಗಾರದ ಬೆಲೆ ಮತ್ತೆ ಏರಿಕೆ
ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಕಂಡುಬಂದಿದ್ದು, ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಬಂಗಾರ ದರವು 1,13,800 ರೂಪಾಯಿ ತಲುಪಿದ್ದು ಆಭರಣ ಮಾಡಿಸುವವರಿಗೆ ಚಿನ್ನ ಬೆಲೆ ಇಷ್ಟು ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಚಿಂತೆ ತರಿಸಿದೆ. ಹಾಗೂ 10 ಗ್ರಾಂ 24 ಕ್ಯಾರೆಟ್ ಅಂದ್ರೆ ಶುದ್ಧ ಚಿನ್ನ ಬೆಲೆ 1,24,150 ರೂಪಾಯಿಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಒಂದೇ ದಿನ 220 ರೂಪಾಯಿ ಏರಿಕೆ ಕಂಡಿದೆ ಶುದ್ಧ ಚಿನ್ನದ ಬೆಲೆ. ಮತ್ತೊಂದು ಕಡೆ ಬೆಳ್ಳಿ ಬೆಲೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಬೆಳ್ಳಿಯ ಬೆಲೆ ಇಂದು ಪ್ರತಿ ಕೆಜಿಗೆ 1,000 ರೂಪಾಯಿ ಏರಿಕೆ ಕಾಣುವ ಮೂಲಕ 1,61,000 ರೂಪಾಯಿ ತಲುಪಿದೆ.
1:04 PM, 9 Oct
‘ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಾರೆ’
ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗಬೇಕು ಎಂಬುದೇ ನನ್ನ ಅಭಿಲಾಷೆ, ಅಂತಾ ದಿಢೀರ್ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ನೀಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗಬೇಕು ಎಂಬ ಆಸೆ ಇದ್ದು, ಅವರು ಸಿಎಂ ಆಗುತ್ತಾರೆ ಕೂಡ ಎಂದಿದ್ದಾರೆ ಶಾಸಕ ಇಕ್ಬಾಲ್ ಹುಸೇನ್. ಈಗಾಗಲೇ ಸಿಎಂ ಸ್ಥಾನದ ಬಗ್ಗೆ ಯಾರೂ ಮಾತನಾಡಬಾರದು ಎಂದು ಹೈಕಮಾಂಡ್ ನಾಯಕರು & ವರಿಷ್ಠರು ಎಚ್ಚರಿಕೆ ನೀಡಿದ್ದರೂ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಈ ಹೇಳಿಕೆ ನೀಡಿರುವುದು ಭಾರಿ ಕುತೂಹಲ ಕೆರಳಿಸಿದೆ.
ಅಲ್ಲದೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ಅವರು ಸೇರಿದಂತೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಎಲ್ಲರೂ ಸೇರಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಅಂತಾ ಕೂಡ ಇದೀಗ ಶಾಸಕ ಇಕ್ಬಾಲ್ ಹುಸೇನ್ ಭರವಸೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮತ್ತೆ ಕಾಂಗ್ರೆಸ್ ಸರ್ಕಾರದಲ್ಲಿ ಹೊಸ ಮುಖ್ಯಮಂತ್ರಿ ವಿಚಾರ ಬಿರುಗಾಳಿ ಎಬ್ಬಿಸುತ್ತಾ? ಅನ್ನೋದನ್ನ ಸ್ವಲ್ಪದಿನ ಕಾದು ನೋಡಬೇಕು.
2:20 PM, 9 Oct
ಹಾಸನಾಂಬೆ ದರ್ಶನ ಪ್ರಾರಂಭ
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲನ್ನು ಗುರುವಾರ ಶಾಸ್ತ್ರೋಕ್ತ ವಿಧಿವಿಧಾನದೊಂದಿಗೆ ತೆಗೆಯಲಾಗಿದೆ. ಭಕ್ತರು ದೇವಿಯ ದರ್ಶನ ಪಡೆಯುವುದಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮಧ್ಯಾಹ್ನ 12.10 ಕ್ಕೆ ಅರಸು ವಂಶಸ್ಥ ನಂಜರಾಜೇ ಅರಸ್ ಅವರು ಗೊನೆಯುಳ್ಳ ಬಾಳೆಗೊನೆ ಕಡಿದ ನಂತರ ಬಾಗಿಲನ್ನು ತೆರೆಯಲಾಗಿದೆ. ಕಳೆದ ಬಾರಿ ಹಾಸನಾಂಬೆ ದರ್ಶನಕ್ಕೆ ಭಾರೀ ಗೊಂದಲ ಸೃಷ್ಟಿಯಾಗಿತ್ತು. ಹೀಗಾಗಿ, ಈ ಬಾರಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
3:23 PM, 9 Oct
ಹೊಸ ಬಿಪಿಎಲ್ ಕಾರ್ಡ್ ವಿತರಣೆ
ಶೀಘ್ರದಲ್ಲೇ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಭರವಸೆ ನೀಡಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹರನ್ನು ಎಪಿಎಲ್ಗೆ ವರ್ಗಾಹಿಸುವ ಕೆಲಸ ಮುಂದುವರೆದಿದ್ದು, ಅರ್ಹತೆ ಇರುವ ಎಲ್ಲರಿಗೂ ಬಿಪಿಎಲ್ ಪಡಿತರ ಚೀಟಿಗಳನ್ನು ನೀಡಲಾಗುವುದು ಎಂದು ಹೇಳಿದರು.
9:33 PM, 9 Oct
ಸಂಪುಟ ಬದಲಾವಣೆ ಸಿಎಂಗೆ ಬಿಟ್ಟ ವಿಚಾರ
ಸಚಿವ ಸಂಪುಟದಲ್ಲಿ ಬದಲಾವಣೆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ಇದು ಪಕ್ಷ ಹಾಗೂ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಇದೀಗ ರಾಜ್ಯದಲ್ಲಿ ಸಚಿವ ಸಂಪುಟ ವಿಚಾರ ಭಾರಿ ದೊಡ್ಡ ಸದ್ದು ಕೂಡ ಮಾಡುತ್ತಿದ್ದು, ಹಲವು ಹಾಲಿ ಸಚಿವರು ತಮ್ಮ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ಈ ನಡುವೆ ಹೊಸ ಸಚಿವರ ಎಂಟ್ರಿ ಕೂಡ ಆಗುವುದು ಬಹುತೇಕ ಫಿಕ್ಸ್ ಆಗುತ್ತಿದೆ.
6:51 AM, 10 Oct
4 ದಿನ ಮತ್ತಷ್ಟು ಮಳೆ ಅಬ್ಬರ?
ಚಂಡಮಾರುತ ಪರಿಣಾಮ ಮಳೆ ಆರ್ಭಟ ಮತ್ತೆ ಶುರುವಾಗಿದೆ, ಹೀಗೆ ಸೈಕ್ಲೋನ್ ಹಿನ್ನೆಲೆ ಮಳೆ ಆರ್ಭಟ ಹೆಚ್ಚಾದ ಕಾರಣ ಜನ ಜೀವನ ಅಸ್ತವ್ಯಸ್ಥ ಆಗಿದೆ. ಮತ್ತೊಂದು ಕಡೆ ಚಳಿ ಪ್ರಮಾಣ ಕೂಡ ಹೆಚ್ಚಾಗಿದ್ದು, ಜನ ಚಿಂತೆ ಮಾಡುವಂತೆ ಆಗಿದೆ. ಇಂತಹ ಸಮಯಕ್ಕೇ ದಕ್ಷಿಣ ಭಾರತದಲ್ಲಿ ಮಳೆಯ ಕಾರಣ ಸಾಕಷ್ಟು ಸಮಸ್ಯೆ ಎದುರಾಗಿದ್ದು, ಈಗಾಗಲೇ ಹಲವು ಪ್ರದೇಶಗಳು ಮಳೆಯ ನೀರಲ್ಲಿ ಮುಳುಗಿ ಹೋಗಿ ಸಮಸ್ಯೆ ದೊಡ್ಡದಾಗುತ್ತಿದೆ. ಇದೇ ಸಮಯದಲ್ಲಿ ಮತ್ತಷ್ಟು ಕೋಪ ಮಾಡಿಕೊಂಡಿರುವ ಪ್ರಕೃತಿ ಮಾತೆ ಮತ್ತೆ ತನ್ನ ಆರ್ಭಟ ತೋರಿಸುವ ಸಾಧ್ಯತೆ ದಟ್ಟವಾಗಿದೆ. ಮಳೆ ಆರ್ಭಟಕ್ಕೆ ಬೆಚ್ಚಿಬಿದ್ದ ಜನರಿಗೆ ಮತ್ತೆ 4 ದಿನ ಮತ್ತಷ್ಟು ಮಳೆ ಅಬ್ಬರ ಗ್ಯಾರಂಟಿ ಆಗಿದೆ...
8:15 AM, 10 Oct
ಬೆಳ್ಳಿ ಬೆಲೆ ಒಂದೇ ದಿನ 7,000 ರೂಪಾಯಿ ಏರಿಕೆ!
ಚಿನ್ನದ ಬೆಲೆ ಮತ್ತೆ ದಿಢೀರ್ ಏರಿಕೆ ಆಗಿದೆ. ಈ ಮೂಲಕ ಚಿನ್ನದ ಬೆಲೆ ಬಗ್ಗೆ ತಲೆ ಕೆಡಿಸಿಕೊಂಡು ಕೂತಿದ್ದ ಆಭರಣ ಪ್ರಿಯರಿಗೆ ಭಾರಿ ದೊಡ್ಡ ಆಘಾತ ಎದುರಾಗಿದೆ. ಚಿನ್ನಕ್ಕೆ ಸಖತ್ ಬೇಡಿಕೆ ಬಂದಿರುವ ಹಿನ್ನೆಲೆ ಬಂಗಾರದ ಬೆಲೆ ಭಾರಿ ಭರ್ಜರಿ ಏರಿಕೆ ಕಂಡಿದೆ. ಇದರ ಜೊತೆಗೆ ಬೆಳ್ಳಿ ಬೆಲೆ ಕೂಡ ಭಯ ಹುಟ್ಟಿಸುವ ಮಟ್ಟಿಗೆ ಏರಿಕೆ ಕಾಣುತ್ತಿದೆ. ಒಂದು ಅಂದಾಜಿನ ಪ್ರಕಾರ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣಲಿದೆ ಅಂತಾ ಚಿನ್ನ & ಬೆಳ್ಳಿ ಮಾರುಕಟ್ಟೆ ತಜ್ಞರು ಕೆಲವು ತಿಂಗಳ ಹಿಂದೆ ಮುನ್ಸೂಚನೆ ನೀಡಿದ್ದರು. ಈಗ ಅದೇ ರೀತಿಯಾಗಿ ಬೆಳ್ಳಿ ಬೆಲೆ ಆಕಾಶ ಮುಟ್ಟುತ್ತಿದ್ದು, ಬೆಳ್ಳಿಯ ಬೆಲೆ ನಿನ್ನೆ ಒಂದೇ ದಿನ ಬರೋಬ್ಬರಿ 7,000 ರೂಪಾಯಿ ಪ್ರತಿ ಕೆಜಿಗೆ ಏರಿಕೆ ಕಂಡಿದೆ.
12:42 PM, 10 Oct
ನವಿ ಮುಂಬೈ ವಿಮಾನ ನಿಲ್ದಾಣ ಉದ್ಘಾಟನೆ
ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ ಮತ್ತು ದೇಶದ ವಾಯುಯಾನ ಪ್ರಯಾಣದಲ್ಲಿ ನಿರ್ಣಾಯಕ ಮೈಲಿಗಲ್ಲು ಆಗಿರುವ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (NMIA) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಪ್ರಧಾನಿ ನರೇಂದ್ರ ಮೋದಿ ಬುಧವಾರ 19,650 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಉದ್ಘಾಟಿಸಿದರು.
4:42 PM, 10 Oct
ಎಸ್ಎಸ್ಎಲ್ಸಿ ಪರೀಕ್ಷೆಗೆ ಮಹತ್ವದ ಅಪ್ಡೇಟ್
ಶಿಕ್ಷಣ ಇಲಾಖೆ 2026ರ ಮಾರ್ಚ್/ಏಪ್ರಿಲ್ನಲ್ಲಿ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆ-1 ನೋಂದಣಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸರ್ಕಾರಿ, ಅನುದಾನಿತ & ಅನುದಾನರಹಿತ ಶಾಲಾ ವಿದ್ಯಾರ್ಥಿಗಳಿಗೆ ನೋಂದಣಿ ಅರ್ಜಿ ಆಹ್ವಾನಿಸಲಾಗಿದೆ. ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ ನೋಂದಣಿ ಮಾಡುವಂತೆ ಈಗ ತಿಳಿಸಲಾಗಿದೆ. ಪ್ರಥಮ ಬಾರಿಗೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ 710 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ಬಾಲಕಿಯರು, ಆದಾಯ ಮಿತಿಗೆ ಒಳಪಟ್ಟ ವಿವಿಧ ಪ್ರವರ್ಗಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಪರೀಕ್ಷೆಗೆ ಹಾಜರಾಗಲು ಶೇಕಡಾ 75ರಷ್ಟು ಹಾಜರಾತಿ ಕಡ್ಡಾಯ ಮಾಡಲಾಗಿದೆ.
8:06 AM, 11 Oct
ಚೀನಾ ವಿರುದ್ಧ ಶೇ. 100 ತೆರಿಗೆ ಹೇರಿಕೆ?
ಚೀನಾ ವಿರುದ್ಧ ಇದೀಗ ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ಷರಶಃ ರೊಚ್ಚಿಗೆದ್ದಿದ್ದು, ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡುವ ಮೂಲಕ ಚೀನಾಗೆ ಡಬಲ್ ಆಘಾತ ನೀಡಲು ಸಜ್ಜಾಗಿದ್ದಾರೆ. ಚೀನಾ ವಿಚಾರದಲ್ಲಿ ಪದೇ ಪದೇ ಅಸಮಾಧಾನ ಹೊಂದಿರುವ ಡೊನಾಲ್ಡ್ ಟ್ರಂಪ್, ಕೆಲವು ತಿಂಗಳ ಹಿಂದಷ್ಟೇ ಚೀನಾ ಜೊತೆಗೆ ಟ್ಯಾಕ್ಸ್ ಫೈಟ್ ಮಾಡಲು ಹೋಗಿ ಆ ನಂತರ ಸೈಲೆಂಟ್ ಆಗಿದ್ದರು. ಇದೀಗ ಮತ್ತೊಂದು ಹಂತದಲ್ಲಿ ತೆರಿಗೆ ವಾರ್ ಮಾಡಲು ಟ್ರಂಪ್ ಮುಂದೆ ನುಗ್ಗಿದಂತಿದೆ. ಇದೇ ಕಾರಣಕ್ಕೆ ದಿಢೀರ್ ಎಚ್ಚರಿಕೆ ನೀಡುವ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೆ ಶೇಕಡಾ 100ರಷ್ಟು ತೆರಿಗೆ ಹೇರಿಕೆ ಮಾಡಲು ಚಿಂತನೆ ನಡೆಸಿದ್ದಾರೆ ಎಂಬ ಮುನ್ಸೂಚನೆ ಸಿಕ್ಕಿದೆ.
ಬಿಗ್ಬಾಸ್ ಕನ್ನಡ ಸೀಸನ್ 12 ನಿಂತು ಹೋಯ್ತು, ಬಿಗ್ಬಾಸ್ ಕನ್ನಡ ಸ್ಪರ್ಧಿಗಳ ಕಥೆ ಏನು ಈಗ? ಅಂತಾ ಚರ್ಚೆಗಳು ದೊಡ್ಡ ಮಟ್ಟದಲ್ಲಿ ಶುರುವಾಗಿತ್ತು. ಅದರಲ್ಲೂ ಬಿಗ್ಬಾಸ್ ಕನ್ನಡ ದಿಢೀರ್ ಅಂತಾ ನಿಂತು ಹೋದ ಸಮಯದಲ್ಲಿ ವಿರೋಧಿಗಳು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದರು. ಹೀಗಿದ್ದಾಗ ಬಿಗ್ಬಾಸ್ ಕನ್ನಡ ಕಾರ್ಯಕ್ರಮದ ಸ್ಪರ್ಧಿಗಳ ಮುಂದಿನ ಹೆಜ್ಜೆ ಏನು? ಅನ್ನೋ ಬಗ್ಗೆ ಕೂಡ ಚರ್ಚೆ ಜೋರಾಗಿ ಇತ್ತು. ಇಷ್ಟೆಲ್ಲದರ ನಡುವೆ ಇದೀಗ ದಿಢೀರ್ ಒಂದು ಸುದ್ದಿ ಹಲ್ಚಲ್ ಎಬ್ಬಿಸಿದೆ. ಬಿಗ್ಬಾಸ್ ಕನ್ನಡ ಕಾರ್ಯಕ್ರಮ ಮತ್ತೆ ಶೀಘ್ರದಲ್ಲೇ ಶುರುವಾಗುತ್ತೆ ಎಂಬ ಸುದ್ದಿ ಹಬ್ಬಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಇನ್ನೂ ಮಾಹಿತಿ ಹೊರಬಿದ್ದಿಲ್ಲ, ಹೀಗಾಗಿ ಕುತೂಹಲ ಡಬಲ್ ಆಗಿದೆ.
ಭಾರಿ ಮಳೆಯ ಮುನ್ನೆಚ್ಚರಿಕೆ
ಅಕಾಲಿಕ ಮಳೆ ಕಾರಣಕ್ಕೆ ರೈತರು ಇದೀಗ ತಮ್ಮ ಬೆಳೆ ಉಳಿಸಿಕೊಳ್ಳಲು ಪರದಾಡುವಂತೆ ಆಗಿಬಿಟ್ಟಿದೆ. ಬೆಳಗಾವಿ, ಹುಬ್ಬಳ್ಳಿ, ಹಾವೇರಿ & ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ ಸೇರಿದಂತೆ ಹಳೇ ಮೈಸೂರು ಭಾಗ, ಬೆಂಗಳೂರು ಹಾಗೇ ಕಲ್ಯಾಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲೂ ಇದೀಗ ಭಾರಿ ಮಳೆ ಮುನ್ಸೂಚನೆ ಸಿಕ್ಕಿದೆ. ಇದರ ಜೊತೆಗೆ ಕರ್ನಾಟಕದ ಇನ್ನುಳಿದ ಭಾಗದಲ್ಲೂ ಭಾರಿ ಮಳೆ ಸುರಿದು ಅವಾಂತರ ಸೃಷ್ಟಿಯಾಗುವ ಭೀತಿ ಮೂಡಿದೆ.
ಹಾಸನಾಂಬೆ ದರ್ಶನ ಪ್ರಾರಂಭ
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲನ್ನು ಗುರುವಾರ ಶಾಸ್ತ್ರೋಕ್ತ ವಿಧಿವಿಧಾನದೊಂದಿಗೆ ತೆಗೆಯಲಾಗಿದೆ. ಭಕ್ತರು ದೇವಿಯ ದರ್ಶನ ಪಡೆಯುವುದಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮಧ್ಯಾಹ್ನ 12.10 ಕ್ಕೆ ಅರಸು ವಂಶಸ್ಥ ನಂಜರಾಜೇ ಅರಸ್ ಅವರು ಗೊನೆಯುಳ್ಳ ಬಾಳೆಗೊನೆ ಕಡಿದ ನಂತರ ಬಾಗಿಲನ್ನು ತೆರೆಯಲಾಗಿದೆ. ಕಳೆದ ಬಾರಿ ಹಾಸನಾಂಬೆ ದರ್ಶನಕ್ಕೆ ಭಾರೀ ಗೊಂದಲ ಸೃಷ್ಟಿಯಾಗಿತ್ತು. ಹೀಗಾಗಿ, ಈ ಬಾರಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
Stay updated with today’s live Kannada news — get the latest breaking news from Karnataka, India, and around the world. Read all top headlines and live updates on OneIndia Kannada: