ಜೆಡಿಎಸ್ ಶಾಸಕ ರೇವಣ್ಣಗೆ ಡಿಸಿಎಂ ಸ್ಥಾನದ ಆಫರ್! ಯಾರಿಂದ ಗೊತ್ತಾ?
ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಹಿಂದೆ ತನಗೆ ರಾಜ್ಯದ ಉಪಮುಖ್ಯಮಂತ್ರಿ ಆಗುವ ಆಫರ್ ಬಂದಿತ್ತು ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರೇವಣ್ಣ, ನಾನು ನಾಯಕರ ಮನೆಯೊಂದರಲ್ಲಿ ಇದ್ದೆ. ಆಗ ಒಬ್ಬ ನಾಯಕರು ಫೋನ್ ಮಾಡಿ ದೆಹಲಿಯಿಂದ ಐದು ಮಂದಿಯನ್ನು ಕರೆತರುತ್ತೇನೆ. ನೀವು ಉಪಮುಖ್ಯಮಂತ್ರಿಯಾಗಿ, ನಾನು ಸಿಎಂ ಆಗುತ್ತೇನೆ ಎಂದು ಆಫರ್ ಮುಂದಿಟ್ಟಿದ್ದರು ಎಂದು ಹೇಳಿದ್ದಾರೆ. ನಾವು ಅಧಿಕಾರಕ್ಕೆ ಆಸೆ ಪಟ್ಟಿದ್ದರೆ ಅವತ್ತು ಡಿಸಿಎಂ ಆಗಬಹುದಿತ್ತು ಎಂದು ರೇವಣ್ಣ ಹೇಳಿದ್ದಾರೆ. ಅಂದೇ ನಾಯಕರೊಬ್ಬರು ಡಿಸಿಎಂ ಆಫರ್ ಕೊಟ್ಟಿದ್ದರು ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಆ ನಾಯಕ ಯಾರು ಎಂದು ಪ್ರಶ್ನಿಸಿದಾಗ, ಸಮಯ ಬಂದಾಗ ಅದಕ್ಕೆ ಉತ್ತರ ಕೊಡುತ್ತೇನೆ ಎಂದು ರೇವಣ್ಣ ಜಾರಿಕೊಂಡಿದ್ದಾರೆ.

ಯಾವ ಪಕ್ಷದಿಂದ ಬಂದಿತ್ತು? ಯಾವ ನಾಯಕರಿಂದ ಆ ಆಫರ್ ಬಂದಿತ್ತು? ಎಂಬುದನ್ನು ಈಗಲೇ ಹೇಳುವುದಿಲ್ಲ. ಕಾಲ ಬಂದಾಗ ನಾನೇ ಹೇಳುತ್ತೇನೆ ಎಂದಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ನಾವೇನು ಕೆಲಸ ಮಾಡಿದ್ದೇವೆ ಎಂಬುದರ ಬಗ್ಗೆ ಕುಮಾರಸ್ವಾಮಿ ಪ್ರಚಾರ ತಗೊಂಡಿಲ್ಲ. ರಾಮನಗರ ಜಿಲ್ಲೆಯಲ್ಲಿ ಕುಮಾರಸ್ವಾಮಿ ಪ್ರಚಾರ ತೆಗೆದುಕೊಂಡಿಲ್ಲ. ರಾಮನಗರ ಹಾಗೂ ಚಿಕ್ಕಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.
ಚನ್ನಪಟ್ಟಣದಲ್ಲಿ ಜೆಡಿಎಸ್ ಸೋಲಿನ ಬಗ್ಗೆ ರೇವಣ್ಣ ಮಾತನಾಡಿದ್ದಾರೆ. ಚನ್ನಪಟ್ಟಣದಲ್ಲಿ ಸೋತ ತಕ್ಷಣ ಗೊಂದಲದ ಗೂಡು ಯಾಕಾಗುತ್ತೆ? ಈಗ ಮಹಾರಾಷ್ಟ್ರ ಸೇರಿ ಕೆಲವು ಕಡೆ ಕಾಂಗ್ರೆಸ್ ಸೋತಿದೆ. ಒಂದು ರಾಷ್ಟ್ರೀಯ ಪಕ್ಷಕ್ಕೆ ಈ ಪರಿಸ್ಥಿತಿ ಬಂದಿದೆ. ಆದರೆ ನಮ್ಮದೊಂದು ಪ್ರಾದೇಶಿಕ ಪಕ್ಷ. ನೂರಾರು ಸೀಟುಗಳಿರುವ ಕಡೆ ಕಾಂಗ್ರೆಸ್ ಕೇವಲ ಎರಡಂಕಿ ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ತಮ್ಮ ಗ್ಯಾರಂಟಿಗಳ ಬಗ್ಗೆ ಪ್ರಚಾರ ಮಾಡಿದರೂ ಗೆದ್ದಿದ್ದು ಎಷ್ಟು ಸ್ಥಾನ? ಏನೋ ಈಗ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿರಬಹುದು. ಭಗವಂತ ಅವರಿಗೆ ಒಳ್ಳೇದು ಮಾಡಲಿ. ಚನ್ನಪಟ್ಟಣದಲ್ಲಿ ಬಾಕಿ ಏನು ಕೆಲಸಗಳು ಉಳಿದಿದೆಯೋ ಅದನ್ನು ಮಾಡಲಿ. ಬಡವರ ಬಗ್ಗೆ ಕಾಂಗ್ರೆಸ್ ಕಾಳಜಿ ವಹಿಸಲಿ. ಮುಂದಿನ ದಿನಗಳಲ್ಲಿ ಅದೇ ಕ್ಷೇತ್ರದ ಜನ ನಮ್ಮ ಕೈಹಿಡಿಯಬಹುದು ಎಂದು ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿಖಿಲ್ಗೆ 85000 ಮತ ನೀಡಿದ್ದಾರೆ. ನಿಖಿಲ್ ನಮ್ರತೆಯಿಂದ ಕೆಲಸ ಮಾಡಿದ. ನಿಖಿಲ್ ಸಂಸದೀಯ ಪಟುಗಳಂತೆ ಮಾತನಾಡಿದ್ದನ್ನು ನಾನು ಗಮನಿಸಿದ್ದೇನೆ. ಜನತೆ ಆಶೀರ್ವಾದ ಮಾಡಿದರೆ ಅವನು ಮತ್ತೆ ಬರುತ್ತಾನೆ. ಈಗ ಜನತೆ ಕಾಂಗ್ರೆಸ್ ಪರವಿದ್ದಿದ್ದರಿಂದ ಅವರು ಗೆದ್ದಿದ್ದಾರೆ ಎಂದಿದ್ದಾರೆ.
ನಾನು ಚನ್ನಪಟ್ಟಣ ಚುನಾವಣೆಯಿಂದ ಅಂತರ ಕಾಯ್ದುಕೊಂಡಿರಲಿಲ್ಲ. ನಾನು ಎರಡು ತಿಂಗಳಿಂದ ನನಗೆ ಫ್ರಾಕ್ಚರ್ ಆಗಿದೆ. ದೇವಸ್ಥಾನ, ಮನೆಯಲ್ಲಿ ಬಿದ್ದು ಗಾಯಗಳಾಗಿವೆ. ನಾನು ಆ ನೋವನ್ನು ಅನುಭವಿಸುತ್ತಿದ್ದೆ. ನಾನು ಕುಮಾರಣ್ಣನ ಜೊತೆ ಮೂರು ದಿನ ಹೋಗಿದ್ದೆ. ನನಗೆ ಆರೋಗ್ಯ ಸ್ಥಿತಿ ಸರಿ ಇಲ್ಲದಿದ್ದಿದ್ದರಿಂದ ನಾನು ಹೋಗಲಿಲ್ಲ. ಮಲಗಲು ಕೂಡ ನನಗೆ ಆಗುತ್ತಿರಲಿಲ್ಲ ಎಂದು ಕಾರಣ ಬಿಚ್ಚಿಟ್ಟಿದ್ದಾರೆ.
ನಾನು ಕುಮಾರಣ್ಣ ಒಡೆದಾಡಿಕೊಂಡಿದ್ದಾರೆ ಎಂದುಕೊಂಡರೆ ತಪ್ಪು. ನಾನು ಬದುಕಿರುವವರೆಗೂ ಕುಮಾರಣ್ಣ ಏನು ಹೇಳ್ತಾರೋ ಹಾಗೇ ನಡೆದುಕೊಳ್ಳುವೆ. ಈ ವಿಚಾರದಲ್ಲಿ ನಾನು ಅಷ್ಟೇ, ನನ್ನ ಮಕ್ಕಳೂ ಅಷ್ಟೇ ಎಂದು ರೇವಣ್ಣ ಹೇಳಿದ್ದಾರೆ. ನಮಗೆ ದೇವೇಗೌಡರು, ಕುಮಾರಸ್ವಾಮಿ ಅವರೇ ನಾಯಕರು.
-
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications