ಜಯಾ ಕೇಸ್ : ಕರ್ನಾಟಕದ ಮೇಲ್ಮನವಿ ಹೋರಾಟ ಹೇಗೆ?
ಬೆಂಗಳೂರು, ಜೂ. 02 : ಕರ್ನಾಟಕದ ಕಾನೂನು ಇಲಾಖೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಆರಂಭಿಸಿದೆ. ಇದೇ ವಾರದಲ್ಲಿ ಸರ್ಕಾರ ಮೇಲ್ಮನವಿ ಸಲ್ಲಿಸಲಿದೆ.
ಸುಪ್ರೀಂಕೋರ್ಟ್ನಲ್ಲಿ
ಕರ್ನಾಟಕ
ಸರ್ಕಾರದ
ಪರವಾಗಿ
ಹಿರಿಯ
ವಕೀಲ
ಬಿ.ವಿ.ಆಚಾರ್ಯ
ಮತ್ತು
ವಕೀಲ
ಸಂದೇಶ್
ಚೌಟ
ಅವರು
ವಾದ
ಮಂಡನೆ
ಮಾಡಲಿದ್ದಾರೆ.
ಕಾನೂನು
ಇಲಾಖೆ
ಮೇಲ್ಮನವಿ
ಸಲ್ಲಿಸಲು
ಬೇಕಾದ
ಅರ್ಜಿಯ
ತಯಾರಿಯಲ್ಲಿ
ತೊಡಗಿದೆ.
[ಮೇಲ್ಮನವಿ
ಸಲ್ಲಿಕೆ
ಕೈಬಿಡಿ
:
ಸಿಎಂ
ಸಿದ್ದುಗೆ
ಸಲಹೆ]
ಅರ್ಜಿಯಲ್ಲೇನಿರುತ್ತದೆ? : ಜಯಲಲಿತಾ ಅವರನ್ನು ಖುಲಾಸೆಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನಲ್ಲಿನ ಆಸ್ತಿಯ ಲೆಕ್ಕಾಚಾರಗಳು ತಪ್ಪಾಗಿರುವುದನ್ನು ವಿಶೇಷ ಸರ್ಕಾರಿ ಅಭಿಯೋಜಕ ಬಿ.ವಿ.ಆಚಾರ್ಯ ಪತ್ತೆ ಹಚ್ಚಿದ್ದರು. ಇದನ್ನು ಪ್ರಮುಖವಾಗಿ ಮೇಲ್ಮನವಿ ಅರ್ಜಿಯಲ್ಲಿ ಉಲ್ಲೇಖಿಸಲಾಗುತ್ತದೆ. [ಮೇಲ್ಮನವಿ ಸಲ್ಲಿಸಲು ಕರ್ನಾಟಕದ ತೀರ್ಮಾನ]
ಪ್ರತಿವಾದಿಯನ್ನಾಗಿ ಮಾಡಲಿಲ್ಲ : ಪ್ರಕರಣದಲ್ಲಿ ಕರ್ನಾಟಕ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಲಿಲ್ಲ ಎಂದು ಮೇಲ್ಮನವಿ ಅರ್ಜಿಯಲ್ಲಿ ಸರ್ಕಾರ ಗಮನಸೆಳೆಯಲಿದೆ. ತಮಿಳುನಾಡಿನಿಂದ ಕರ್ನಾಟಕಕ್ಕೆ ಆಕ್ರಮ ಆಸ್ತಿಗಳಿಕೆ ಪ್ರಕರಣ ವರ್ಗಾವಣೆಯಾದರೂ ರಾಜ್ಯವನ್ನು ಪ್ರತಿವಾದಿ ಮಾಡಲಿಲ್ಲ ಎಂದು ಅರ್ಜಿಯಲ್ಲಿ ಕರ್ನಾಟಕ ತಿಳಿಸಲಿದೆ. [ಜಯಲಲಿತಾ ಪ್ರಕರಣ Timeline]
ಪ್ರಕರಣದ ವಿಚಾರಣೆ ಸಂದರ್ಭದಲ್ಲಿಯೂ ಕರ್ನಾಟಕದ ವಾದವನ್ನು ಮಂಡನೆ ಮಾಡಲು ಅವಕಾಶ ನೀಡಲಿಲ್ಲ. ಜಯಲಲಿತಾ ಪರ ವಕೀಲರಿಗೆ ವಾದ ಮಂಡನೆಗೆ ಎರಡು ತಿಂಗಳ ಕಾಲಾವಕಾಶ ನೀಡಲಾಯಿತು. ಆದರೆ, ಕರ್ನಾಟಕಕ್ಕೆ ಅವಕಾಶ ನೀಡಲಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗುತ್ತದೆ.
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೆ.ಜಯಲಲಿತಾ ಸೇರಿದಂತೆ ನಾಲ್ವರು ಅಪರಾಧಿಗಳನ್ನು ನಿರ್ದೋಷಿಗಳು ಎಂದು ಕರ್ನಾಟಕ ಹೈಕೋರ್ಟ್ ವಿಶೇಷ ಪೀಠದ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು ಮೇ 11ರಂದು ತೀರ್ಪು ನೀಡಿದ್ದರು. ಮೇ.23ರಂದು ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. [ಪಿಟಿಐ ಚಿತ್ರ]