ಇನ್ಫೋಸಿಸ್ ಪ್ರತಿಷ್ಠಾನಕ್ಕೆ ಗುಡ್ ಬೈ ಹೇಳಲಿದ್ದಾರೆ ಸುಧಾಮೂರ್ತಿ
ಬೆಂಗಳೂರು, ಅಕ್ಟೋಬರ್ 15: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು 2021ರ ಡಿಸೆಂಬರ್ 31ರಂದು ನಿವೃತ್ತರಾಗಲಿದ್ದಾರೆ. ಅವರು ಅವಧಿ ಈ ವರ್ಷವೇ ಅಂತ್ಯಗೊಳ್ಳಬೇಕಿತ್ತು. ಆದರೆ ಒಂದು ವರ್ಷದವರೆಗೆ ಅದನ್ನು ವಿಸ್ತರಿಸಲಾಗಿದೆ.
ಅಕ್ಟೋಬರ್ 10ರಂದು ಸುಧಾಮೂರ್ತಿ ಅವರ ಅಧಿಕಾರಾವಧಿ ಅಂತ್ಯಗೊಂಡಿತ್ತು. ಇನ್ಫೋಸಿಸ್ ಮಂಡಳಿಯು ಅದನ್ನು ಮುಂದಿನ ವರ್ಷದವರೆಗೆ ವಿಸ್ತರಿಸಿದ್ದು, 2021ರ ಅಂತ್ಯದೊಳಗೆ ಅವರ ಸ್ಥಾನಕ್ಕೆ ಹೊಸ ಅಧ್ಯಕ್ಷರನ್ನು ಹುಡುಕಬೇಕಿದೆ. ಇದೇ ರೀತಿಯ ಸಮಾಜಸೇವೆಗೆ ಮೀಸಲಾಗಿರುವ ತಮ್ಮ ಕುಟುಂಬದ ನೇತೃತ್ವದ ಮೂರ್ತಿ ಪ್ರತಿಷ್ಠಾನದಲ್ಲಿ ತೊಡಗಿಸಿಕೊಳ್ಳಲು ಸುಧಾಮೂರ್ತಿ ಉದ್ದೇಶಿಸಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ.
'ನನ್ನ ಚಟುವಟಿಕೆಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ನನ್ನ ಉದ್ದೇಶದಂತೆ ಪರೋಪಕಾರದ ಕೆಲಸಗಳು ಮುಂದುವರಿಯಲಿದೆ. ಇನ್ಫೋಸಿಸ್ ಪ್ರತಿಷ್ಠಾನದ ಬದಲು ಮೂರ್ತಿ ಪ್ರತಿಷ್ಠಾನ ಎಂಬ ಹೆಸರಿನ ಹೊರತು ಬೇರೇನೂ ಬದಲಾಗುವುದಿಲ್ಲ' ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಮುಂದೆ ಓದಿ.

ರಾಜಕೀಯದ ಆಹ್ವಾನಕ್ಕೆ ಪ್ರತಿಕ್ರಿಯೆ
ರಾಜಕೀಯ ಪಕ್ಷಗಳು ತಮಗೆ ರಾಜ್ಯಸಭೆ ಸದಸ್ಯತ್ವ ನೀಡಲು ಉದ್ದೇಶಿಸಿವೆ ಎನ್ನಲಾದ ವರದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಸುಧಾಮೂರ್ತಿ, ಪಕ್ಷಗಳಾಚೆಗಿನ ಚಟುವಟಿಕೆಗಳನ್ನು ಮಾಡಲು ಮಾತ್ರವೇ ತಾವು ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ರಾಜಕೀಯಕ್ಕೆ ಸಮಯ ಇಲ್ಲ
'ನಾನು ಯಾವುದೇ ಪಕ್ಷದ ಪರವಾಗಿರುವುದಿಲ್ಲ. ನಾನು ತಟಸ್ಥಳಾಗಿರಲು ಬಯಸುತ್ತೇನೆ. ತಟಸ್ಥತೆ ಎಂದರೆ ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಕೆಲಸಗಳಿವೆ. ಒಂದು ಪಕ್ಷಕ್ಕೆ ಸಂಪರ್ಕ ಪಡೆದುಕೊಂಡರೆ ಸನ್ನಿವೇಶಗಳು ಬದಲಾಗುತ್ತವೆ. ಹೀಗಾಗಿ ತಟಸ್ಥವಾಗಿರುವ ಯಾವುದೇ ಅವಕಾಶ ಬಂದಾಗ ಒಂದು ಪಕ್ಷಕ್ಕೆ ಸೀಮಿತವಾಗುವುದಿಲ್ಲ. ಅದರಾಚೆಗೆ ನಾನು ಯೋಚಿಸುತ್ತೇನೆ. ಇನ್ಫೋಸಿಸ್ ಪ್ರತಿಷ್ಠಾನದಲ್ಲಿ ಇದ್ದ ಈ ದಿನಗಳವರೆಗೂ ನಾನು ಅಂತಹ ಸಾಧ್ಯತೆ ಬಗ್ಗೆ ಯೋಚಿಸಿಲ್ಲ. ಅದಕ್ಕೆ ನನಗೆ ಸಮಯವೂ ಇಲ್ಲ' ಎಂದು ಹೇಳಿದ್ದಾರೆ.

400 ಕೋಟಿ ರೂ. ನಿರ್ವಹಣೆ
32 ಲಕ್ಷವನ್ನು ಇರಿಸಿಕೊಂಡು ಇನ್ಫೋಸಿಸ್ ಪ್ರತಿಷ್ಠಾನವನ್ನು ಆರಂಭಿಸಲಾಗಿತ್ತು. ಇಂದು ಅದು 400 ಕೋಟಿ ರೂ.ದಷ್ಟು ಮೊತ್ತವನ್ನು ನಿರ್ವಹಿಸುವವರೆಗೆ ಬೆಳೆದಿದೆ. 25 ವರ್ಷಗಳಿಂದ ಪ್ರತಿಷ್ಠಾನದಲ್ಲಿ ಭಾಗಿಯಾಗಿದ್ದೇನೆ ಎಂದು ಅವರು ನೆನಪಿಸಿಕೊಂಡಿದ್ದಾರೆ.
Recommended Video

'ಸೇವೆಯಿಂದ ನಿವೃತ್ತಳಾಗುವುದಿಲ್ಲ'
'ಇನ್ಫೋಸಿಸ್ ಪ್ರತಿಷ್ಠಾನ ಮುಟ್ಟದ ಒಂದು ಕ್ಷೇತ್ರವನ್ನು ತೋರಿಸಿ. ಆಸ್ಪತ್ರೆ ಅಥವಾ ಶಿಕ್ಷಣ, ಪ್ರವಾಹ ಅಥವಾ ಪಿಡುಗು, ಸಂಸ್ಕೃತಿ ಅಥವಾ ಸಾಹಿತ್ಯ, ಯಾವುದನ್ನೇ ನೀವು ತೆಗೆದುಕೊಳ್ಳಿ ಅದರಿಂದ ಲಕ್ಷಾಂತರ ಮಂದಿಗೆ ನೆರವಾಗಿದೆ. ಮೂರ್ತಿ ಪ್ರತಿಷ್ಠಾನದಲ್ಲಿಯೂ ಕೆಲಸ ಮುಂದುವರಿಸಲು ನಾನು ಉತ್ಸುಕಳಾಗಿದ್ದೇನೆ. ನಾನು ಇನ್ಫೋಸಿಸ್ ಪ್ರತಿಷ್ಠಾನದಿಂದ ನಿವೃತ್ತಳಾಗಬಹುದು ಆದರೆ, ಪರೋಪಕಾರದ ಕೆಲಸದಿಂದ ಅಲ್ಲ' ಎಂದಿದ್ದಾರೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications