ದ್ರಾಕ್ಷಿ ತಿನ್ನುವ ಮೊದಲು ಸ್ವಚ್ಛಗೊಳಿಸಿ: ಆರೋಗ್ಯ ಕಾಪಾಡುವ ಸರಳ ಟಿಪ್ಸ್
ಹೊಳೆಯುವ ದ್ರಾಕ್ಷಿ ಗೊಂಚಲು ನೋಡುತ್ತಿದ್ದಂತೆಯೇ ತಿನ್ನಬೇಕೆನ್ನಿಸುವುದು ಸಹಜ. ಆದರೆ ಅವು ಹೊರನೋಟಕ್ಕೆ ಸ್ವಚ್ಛವಾಗಿ ಕಾಣಿಸಿದರೂ, ಅವುಗಳ ಮೇಲೆ ಕೀಟನಾಶಕ ಅಂಶಗಳು, ಮೇಣದ ಲೇಪನ ಮತ್ತು ಧೂಳು ಅಂಟಿಕೊಂಡಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಿಶೇಷವಾಗಿ ಮಕ್ಕಳು ಹಣ್ಣುಗಳನ್ನು ನೇರವಾಗಿ ಸೇವಿಸುವುರಿಂದ ಅಥವಾ ಫ್ರಿಜ್ನಿಂದ ತೆಗೆದು ತಿನ್ನುವ ಮುನ್ನ ಜಾಗ್ರತೆ ವಹಿಸುವುದು ಅತ್ಯಗತ್ಯ.
ದ್ರಾಕ್ಷಿಯ ಚರ್ಮವು ತೆಳುವಾಗಿರುವುದರಿಂದ ರಾಸಾಯನಿಕಗಳು ಸುಲಭವಾಗಿ ಅಂಟಿಕೊಳ್ಳುತ್ತವೆ. ಕೇವಲ ನೀರಿನಿಂದ ತೊಳೆಯುವುದರಿಂದ ಮೇಲ್ಮೈ ಧೂಳು ಮಾತ್ರ ಹೋಗುತ್ತದೆ. ಆದ್ದರಿಂದ ಈ ಕೆಳಗಿನ ವಿಧಾನಗಳ ಮೂಲಕ ಸ್ವಚ್ಛಗೊಳಿಸುವುದು ಉತ್ತಮ.

1. ಮೊದಲು ತಣ್ಣೀರಿನಲ್ಲಿ ತೊಳೆಯಿರಿ
ದ್ರಾಕ್ಷಿಯನ್ನು ಒಂದು ಪಾತ್ರೆಯಲ್ಲಿ ಇಟ್ಟು 20-30 ಸೆಕೆಂಡುಗಳ ಕಾಲ ಹರಿಯುವ ತಣ್ಣೀರಿನಲ್ಲಿ ನಿಧಾನವಾಗಿ ಉಜ್ಜುತ್ತಾ ತೊಳೆಯಿರಿ. ಇದು ಮೇಲ್ಮೈನಲ್ಲಿರುವ ಸಾಮಾನ್ಯ ಕೊಳಕನ್ನು ತೆಗೆಯುತ್ತದೆ.
2. ಅಡಿಗೆ ಸೋಡಾ ಬಳಸಿ
ಒಂದು ಲೀಟರ್ ನೀರಿಗೆ ಒಂದು ಟೀ ಚಮಚ ಅಡಿಗೆ ಸೋಡಾ ಬೆರೆಸಿ, ಅದರಲ್ಲಿ ದ್ರಾಕ್ಷಿಯನ್ನು 10 - 15 ನಿಮಿಷಗಳ ಕಾಲ ನೆನೆಸಿಡಿ. ಇದು ಕೀಟನಾಶಕಗಳ ಅಂಶವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ನಂತರ ಮತ್ತೆ ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ.
3. ವಿನೆಗರ್ ಬಳಕೆ
ಒಂದು ಭಾಗ ವಿನೆಗರ್ಗೆ ಮೂರು ಭಾಗ ನೀರು ಸೇರಿಸಿ ದ್ರಾಕ್ಷಿಯನ್ನು 5- 10 ನಿಮಿಷ ನೆನೆಸಿಡಿ. ಇದು ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ವಿನೆಗರ್ ವಾಸನೆ ಹೋಗಲಾಡಿಸಲು ಕೊನೆಯಲ್ಲಿ ಮತ್ತೊಮ್ಮೆ ನೀರಿನಿಂದ ತೊಳೆಯಿರಿ.
4. ಒಣಗಿಸಿ ಸಂಗ್ರಹಿಸಿ
ತೊಳೆದ ದ್ರಾಕ್ಷಿಯನ್ನು ಒದ್ದೆಯಾಗಿಯೇ ಫ್ರಿಜ್ನಲ್ಲಿ ಇಡಬೇಡಿ, ಶುದ್ಧವಾದ ಬಟ್ಟೆಯಿಂದ ಒರೆಸಿ ಅಥವಾ ಗಾಳಿಯಲ್ಲಿ ಒಣಗಲು ಬಿಡಿ. ತೇವಾಂಶವಿಲ್ಲದಿದ್ದರೆ ಹಣ್ಣುಗಳು ಹೆಚ್ಚು ದಿನ ತಾಜಾವಾಗಿರುತ್ತವೆ.
ಸಣ್ಣ ಸಲಹೆ: ಒಮ್ಮೆಲೇ ಎಲ್ಲ ದ್ರಾಕ್ಷಿಗಳನ್ನು ತೊಳೆಯುವುದಕ್ಕಿಂತ, ತಿನ್ನುವ ಮೊದಲು ಬೇಕಾದಷ್ಟು ಮಾತ್ರ ತೊಳೆಯುವುದು ಉತ್ತಮ. ಇದರಿಂದ ಹಣ್ಣುಗಳು ಬೇಗನೆ ಕೊಳೆಯುವುದನ್ನು ತಡೆಯಬಹುದು.
ದ್ರಾಕ್ಷಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ಅದನ್ನು ಶುದ್ಧೀಕರಿಸುವ ಕ್ರಮವೂ ಅಷ್ಟೇ ಮುಖ್ಯ. ಕೇವಲ 10 ನಿಮಿಷಗಳ ಈ ಮುನ್ನೆಚ್ಚರಿಕೆ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡುತ್ತದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ














Click it and Unblock the Notifications