Get Updates
Get notified of breaking news, exclusive insights, and must-see stories!

ಅಂಗವಿಕಲ ಮಗುವಿಗೆ ಆಸ್ಪತ್ರೆಗೆ ದಾಖಲಾತಿ ನಿರಾಕರಣೆ, ಪ್ರಕರಣ ದಾಖಲಿಸಿದ ನ್ಯಾಯಾಧೀಶೆ

ಮೈಸೂರು, ನವೆಂಬರ್‌ 4: ಉಸಿರಾಟದ ಕಾಯಿಲೆಯಿಂದ ಬಳಲುತ್ತಿರುವ 12 ವರ್ಷದ ಅಂಗವಿಕಲ ಮಗುವಿಗೆ ಬರೋಬ್ಬರಿ ಆರು ಗಂಟೆಗಳ ಕಾಲ ನಗರದ ಎರಡು ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿದ ಅಮಾನವೀಯ ಘಟನೆ ನಡೆದಿದೆ.

ಕೊನೆಗೆ ನ್ಯಾಯಾಧೀಶರು ಮಧ್ಯಪ್ರವೇಶಿಸಿ ರೋಗಿಯನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗುರುವಾರ ಮಗು ಸಾವನ್ನಪ್ಪಿತು. ನ್ಯಾಯಾಧೀಶರು ನೀಡಿದ ದೂರಿನ ಆಧಾರದ ಮೇಲೆ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ನಗರದ ಎರಡು ಆಸ್ಪತ್ರೆಗಳ ಡ್ಯೂಟಿ ವೈದ್ಯರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

Refusal of hospital admission to disabled child, FIR filed by judge

ಮೃತ ಮಗುವನ್ನು ಮಡಿಕೇರಿ ಜಿಲ್ಲೆಯ ಬೊಮ್ಮಡು ಗ್ರಾಮದ ಬುಡಕಟ್ಟು ಪ್ರದೇಶದ ಸಂಗೀತಾ ಮತ್ತು ಅಫ್ಜಲ್ ದಂಪತಿಯ ಪುತ್ರಿ ಸೋನಿಯಾ 12 ವರ್ಷದ ವಿಶೇಷಚೇತನ ಮಗು ಎಂದು ಗುರುತಿಸಲಾಗಿದೆ.

ಎಫ್ಐಆರ್ ಪ್ರಕಾರ, ಅಕ್ಟೋಬರ್ 26 ರಂದು ಸೋನಿಯಾ ಉಸಿರಾಟದ ತೊಂದರೆ ಅನುಭವಿಸುತ್ತಿತ್ತು. ಉಸಿರಾಟ ಸಮಸ್ಯೆಯಿಂದ ಆಕೆಯನ್ನು ಗೋಣಿಕೊಪ್ಪ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರು ಇಲ್ಲದ ಕಾರಣ ಸೋನಿಯಾಳನ್ನು ಮಡಿಕೇರಿಗೆ ಕರೆದುಕೊಂಡು ಹೋಗುವಂತೆ ಪೋಷಕರಿಗೆ ತಿಳಿಸಲಾಗಿತ್ತು. ಆಕೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತು. ಆಗ ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ಮೈಸೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದರು.

ಸೋನಿಯಾ ಅವರ ಪೋಷಕರು ದಿನಗೂಲಿ ನೌಕರರು ಮತ್ತು ಕಡಿಮೆ ಹಣ ಹೊಂದಿದ್ದರು ಮತ್ತು ಮೈಸೂರಿನಲ್ಲಿ ಯಾರೂ ಗೊತ್ತಿರಲಿಲ್ಲ. ಸ್ವಲ್ಪ ಹಣ ಸಂಗ್ರಹಿಸಿ ಖಾಸಗಿ ಆಂಬುಲೆನ್ಸ್ ಪಡೆದು ಮೈಸೂರಿಗೆ ಹೊರಟರು. ಈ ನಡುವೆ ಸಂಗೀತಾ ಅವರು ಅದೇ ಗ್ರಾಮದವರಾದ ಮೈಸೂರಿನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆಯಾಗಿ ಕೆಲಸ ಮಾಡುತ್ತಿದ್ದ ಶಿಲ್ಪಾ ಎಜಿ ಅವರನ್ನು ನೆನಪಿಸಿಕೊಂಡರು. ನ್ಯಾಯಾಧೀಶರನ್ನು ಸಂಪರ್ಕಿಸಿದಾಗ ಅವರು ದಂಪತಿಯನ್ನು ಮೈಸೂರಿಗೆ ಬರುವಂತೆ ಹೇಳಿದರು.

ದಂಪತಿ ಸೋನಿಯಾಳನ್ನು ಮೈಸೂರಿನ ಜಯದೇವ್ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಚೆಲುವಾಂಬ ಆಸ್ಪತ್ರೆಗೆ ರವಾನಿಸಿದ್ದಾರೆ. ರೋಗಿಯನ್ನು ಅಲ್ಲಿಗೆ ಕರೆದೊಯ್ದಾಗ ಆಸ್ಪತ್ರೆಯ ಡ್ಯೂಟಿ ಡಾಕ್ಟರ್ ಹಾಸಿಗೆಯ ಕೊರತೆಯನ್ನು ತಿಳಿಸಿ ಮಗುವನ್ನು ದಾಖಲಿಸಲು ನಿರಾಕರಿಸಿದರು.

ನಂತರ ಮಗುವನ್ನು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮುಂದಿನ 10 ದಿನಗಳವರೆಗೆ ಚಿಕಿತ್ಸೆಗೆ ದಿನಕ್ಕೆ 25,000 ರಿಂದ 30,000 ರೂ ವೆಚ್ಚವಾಗಲಿದೆ ಎಂದು ವೈದ್ಯರು ಸೋನಿಯಾ ಅವರ ಪೋಷಕರಿಗೆ ತಿಳಿಸಿದರು. ಆಗ ಪೋಷಕರು ಬಲವಂತವಾಗಿ ಮಗುವನ್ನು ಸರ್ಕಾರಿ ಕೆಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ನಡುವೆ ಸಂಗೀತಾ ಅವರು ಈ ಬೆಳವಣಿಗೆಯನ್ನು ನ್ಯಾಯಾಧೀಶರಿಗೆ ತಿಳಿಸಿದರು.

ನ್ಯಾಯಾಧೀಶರಾದ ಶಿಲ್ಪಾ ಅವರು ಆಸ್ಪತ್ರೆಯ ಜಿಲ್ಲಾ ಆರೋಗ್ಯ ಅಧಿಕಾರಿಗೆ ಕರೆ ಮಾಡಿ ಅವರ ಮೂಲಕ ನಿವಾಸಿ ವೈದ್ಯಾಧಿಕಾರಿ (ಆರ್‌ಎಂಒ) ಡಾ.ನಯಾಜ್ ಪಾಷಾ ಅವರ ಸಂಖ್ಯೆಯನ್ನು ಪಡೆದುಕೊಂಡು ರೋಗಿಯ ಬಗ್ಗೆ ತಿಳಿಸಿದರು. ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿದಾಗ ಯಾವೊಬ್ಬ ವೈದ್ಯರು ಮಗುವನ್ನು ನೋಡಲಿಲ್ಲ. ಕೊನೆಗೆ ನ್ಯಾಯಾಧೀಶರು ಆಸ್ಪತ್ರೆಗೆ ಆಗಮಿಸಿದರು.

ಡ್ಯೂಟಿ ವೈದ್ಯರನ್ನು ವಿಚಾರಿಸಿದ ನಂತರ ಅವರನ್ನು ಕೋಣೆಗೆ ಕಳಿಸಲಾಯಿತು. ಅನಾರೋಗ್ಯ ಪೀಡಿತ ಮಗು ನೋಡುವಂತೆ ಮನವಿ ಮಾಡಿಕೊಂಡಿದ್ದಕ್ಕೆ ಡಾ ಚೈತ್ರಾ ಎಂಬಾಕೆ ನಿದ್ರೆಗೆ ಭಂಗ ತಂದಿದ್ದಕ್ಕಾಗಿ ಪೋಷಕರನ್ನು ನಿಂದಿಸಿದರು. ನ್ಯಾಯಾಧೀಶರು ಆಕೆಯ ಗುರುತನ್ನು ಬಹಿರಂಗಪಡಿಸಿದ ನಂತರ ಡಾ ಚೈತ್ರಾ ಮತ್ತು ಪಿಜಿ ವಿದ್ಯಾರ್ಥಿ ಡಾ ಸೈಯದ್ ಪ್ರಕರಣದ ಬಗ್ಗೆ ಚರ್ಚಿಸಿದರು. ಮಕ್ಕಳ ರೋಗಿಗಳಿಗೆ ಚೆಲುವಾಂಬ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ನೀಡಲಾಗುವುದು ಎಂದು ಆರೋಪಿಸಿ ರೋಗಿಯನ್ನು ದಾಖಲಿಸಲು ನಿರಾಕರಿಸಿದರು.

ಕೆ.ಆರ್.ಆಸ್ಪತ್ರೆಗೆ ಆರ್‌ಎಂಒ ಬಂದ ನಂತರವೇ ರೋಗಿಯನ್ನು ದಾಖಲಿಸಲಾಯಿತು. ಮರುದಿನ, ನ್ಯಾಯಾಧೀಶರು ಘಟನೆಯನ್ನು ಹಿರಿಯ ವೈದ್ಯರ ಗಮನಕ್ಕೆ ತಂದಾಗ, ರೋಗಿಯನ್ನು ಚೆಲುವಾಂಬ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ದಾಖಲಾದ ಐದು ದಿನಗಳ ನಂತರ ಮಗು ಸಾವನ್ನಪ್ಪಿತು.

ಕೊನೆಗೆ ನ್ಯಾಯಾಧೀಶೆ ಶಿಲ್ಪಾ ಪೊಲೀಸ್ ಠಾಣೆಗೆ ತೆರಳಿ ಚೆಲುವಾಂಬ ಆಸ್ಪತ್ರೆಯ ಡ್ಯೂಟಿ ಡಾಕ್ಟರ್ ಮತ್ತು ಕೆಆರ್ ಆಸ್ಪತ್ರೆಯ ಡಾ.ಚೈತ್ರಾ ಮತ್ತು ಇತರರ ವಿರುದ್ಧ ದೂರು ದಾಖಲಿಸಿದರು. ಐಪಿಸಿ ಸೆಕ್ಷನ್ 337 (ಮಾನವನ ಪ್ರಾಣಕ್ಕೆ ಅಪಾಯವಾಗುವಂತೆ ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಯಾವುದೇ ವ್ಯಕ್ತಿಗೆ ನೋವುಂಟು ಮಾಡಿದವರು) ಮತ್ತು 338 (ನಿರ್ಲಕ್ಷ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+