ಕಾಂಗ್ರೆಸ್ ಶಾಸಕರಿಗೆ ಜೆಡಿಎಸ್ ಗಾಳ : ಗುಪ್ತಚರ ವರದಿ
ಬೆಂಗಳೂರು, ಜೂನ್ 01 : ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ಜಯಗಳಿಸಲು ಜೆಡಿಎಸ್ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿದೆ. ಪಕ್ಷದ ನಾಯಕರು 10ಕ್ಕೂ ಹೆಚ್ಚು ಶಾಸಕರನ್ನು ಸಂಪರ್ಕಿಸಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ನೀಡಿದೆ.
ಮಂಗಳವಾರ
ಗುಪ್ತಚರ
ಇಲಾಖೆ
ಸಿದ್ದರಾಮಯ್ಯ
ಅವರಿಗೆ
ಈ
ಕುರಿತು
ವರದಿ
ನೀಡಿದೆ
ಎಂದು
ತಿಳಿದುಬಂದಿದೆ.
ಜೂನ್
10ರಂದು
ವಿಧಾನಪರಿಷತ್
ಚುನಾವಣೆ,
ಜೂನ್
11ರಂದು
ರಾಜ್ಯಸಭೆ
ಚುನಾವಣೆ
ಇರುವುದರಿಂದ
ಕಾಂಗ್ರೆಸ್
ಶಾಸಕರ
ಮೇಲೆ
ಗುಪ್ತಚರ
ಇಲಾಖೆ
ಕಣ್ಣಿಟ್ಟಿದೆ.
[ರಾಜ್ಯಸಭೆ
ಚುನಾವಣೆ
2016
:
ಅಭ್ಯರ್ಥಿಗಳ
ಆಸ್ತಿ
ವಿವರ]
ಯಾದಗಿರಿ ಶಾಸಕ ಎ.ಬಿ.ಮಾಲಕರೆಡ್ಡಿ, ರಾಣೆಬೆನ್ನೂರು ಶಾಸಕ ಕೆ.ಬಿ.ಕೋಳಿವಾಡ ಸೇರಿದಂತೆ 10ಕ್ಕೂ ಅಧಿಕ ಶಾಸಕರನ್ನು ಜೆಡಿಎಸ್ ಸಂಪರ್ಕಿಸಿದೆ ಎಂದು ಗುಪ್ತಚರ ಇಲಾಖೆ ಸಿದ್ದರಾಮಯ್ಯ ಅವರಿಗೆ ವರದಿ ಕೊಟ್ಟಿದೆ. [ದೇವೇಗೌಡ್ರ 'ಕ್ರಾಸ್ ವೋಟಿಂಗ್' ರಾಜಕೀಯ ದಾಳಕ್ಕೆ ಕಾಂಗ್ರೆಸ್ ಸುಸ್ತು?]
ವರದಿ ತಳ್ಳಿ ಹಾಕಿದ ಶಾಸಕರು : ಗುಪ್ತಚರ ಇಲಾಖೆ ವರದಿಯನ್ನು ಶಾಸಕರು ತಳ್ಳಿಹಾಕಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, 'ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದಿದ್ದರೆ ಅದು ಮಹಾದ್ರೋಹವಾಗುತ್ತದೆ. ಜೆಡಿಎಸ್ನ ಯಾವುದೇ ಶಾಸಕರು, ಮಧ್ಯವರ್ತಿಗಳು ನಮ್ಮನ್ನು ಸಂಪರ್ಕಿಸಿಲ್ಲ' ಎಂದು ಕೆ.ಬಿ.ಕೋಳಿವಾಡ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನಮ್ಮಲ್ಲಿ ಯಾವುದೇ ಕುದುರೆ ವ್ಯಾಪಾರಕ್ಕಿಲ್ಲ : ಕುದುರೆ ವ್ಯಾಪಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, 'ನಮ್ಮಲ್ಲಿ ಯಾವುದೇ ಕುದುರೆಗಳು ವ್ಯಾಪಾರಕಿಲ್ಲ. ಕಾಂಗ್ರೆಸ್ ಸಹ ಕುದುರೆ ವ್ಯಾಪಾರ ಮಾಡಿಲ್ಲ' ಎಂದು ಸ್ಪಷ್ಟನೆ ನೀಡಿದರು.
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಜೈರಾಮ್ ರಮೇಶ್, ಆಸ್ಕರ್ ಫರ್ನಾಂಡೀಸ್ ಮತ್ತು ಕೆ.ಸಿ.ರಾಮಮೂರ್ತಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ನಿಂದ ಬಿ.ಎಂ.ಫಾರೂಕ್ ಮತ್ತು ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್ ಅಭ್ಯರ್ಥಿಯಾಗಿದ್ದಾರೆ.