ಚಿಕ್ಕಮಗಳೂರು, ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಭಾರಿ ಮಳೆ
ಬೆಂಗಳೂರು, ಮೇ 18: ಚಿಕ್ಕಮಗಳೂರು, ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಭಾನುವಾರ ಭಾರಿ ಮಳೆಯಾಗಿದೆ. ಮುಂದಿನ ನಾಲ್ಕು ದಿನ ಇದೇ ವಾತಾವರಣ ಮುಂದುವರೆಯಲಿದೆ.
ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳು ಸೇರಿ ಭಾನುವಾರ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಶಿರಾಳಕೊಪ್ಪದಲ್ಲಿ 60 ಮನೆಗಳಿಗೆ ಹಾನಿಯಾಗಿದೆ. ಚಿತ್ರದುರ್ಗ ಜಿಲ್ಲೆ ಬಿ.ಕಾಟನಹಟ್ಟಿಯಲ್ಲಿ ಸಿಡಿಲು ಬಡಿದು 5 ಮೇಕೆಗಳು ಮೃತಪಟ್ಟಿವೆ.
ಅಂಫಾನ್ ಚಂಡಮಾರುತ; 24 ಗಂಟೆ ಭಾರಿ ಮಳೆ ಮುನ್ಸೂಚನೆ
ಬೆಂಗಳೂರಿನಲ್ಲಿ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ರಾಯಚೂರಿನಲ್ಲಿ ಅತಿ ಹೆಚ್ಚು ಅಂದರೆ 40 ಡಿಗ್ರಿ ಗರಿಷ್ಠ ಉಷ್ಣಾಂಶವಿದೆ.
ಕೊಡಗಿನಲ್ಲಿ ಉತ್ತಮ ಮಳೆ
ಕೊಡಗು ಜಿಲ್ಲೆಯಲ್ಲಿ ಮಡಿಕೇರಿ, ಕುಶಾಲನಗರ, ನಾಪೊಕ್ಲು, ಕೊಪ್ಪ, ಬಾಳೆಲೆ, ಕೊಟ್ಟಗೇರಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಮೈಸೂರಿನ ಹುಣಸೂರು, ತಿ.ನಗರಸೀಪುರ, ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ಬಳಿ ರಸ್ತೆಗೆ ಮರ ಉರುಳಿದೆ. ವಿ
ಚಿಕ್ಕಮಗಳೂರಿನಲ್ಲೂ ಮಳೆ
ಚಿಕ್ಕಮಗಳೂರಿನ ಅಜ್ಜಂಪುರದಲ್ಲಿ 4 ಸೆಂ.ಮೀ ಮಳೆಯಾಗಿದೆ. ಬಣಕಲ್, ಮತ್ತಿಕಟ್ಟೆ, ಬಿ ಹೊಸಹಳ್ಳಿ, ಬಳಿ ರಸ್ತೆಗೆ ಮರ ಉರುಳಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಕೊಟ್ಟಿಗೆಹಾರ,ಮತ್ತಿಕಟ್ಟೆ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಇನ್ನು ಚಿತ್ರದುರ್ಗದ ಹಿಡಿಯೂರು, ಮೊಳಕಾಲ್ಮೂರು, ಹೊಸದುರ್ಗ ತಾಲೂಕಿನಲ್ಲಿ ಮಳೆಯಾಗಿದೆ.
ದೇಶಕ್ಕೆ ಅಪ್ಪಳಿಸಲಿದೆ 'ಅಂಫಾನ್' ಚಂಡಮಾರುತ: ಎಲ್ಲೆಲ್ಲಿ ಭಾರಿ ಮಳೆ?
ಶಿವಮೊಗ್ಗ ತೀರ್ಥಹಳ್ಳಿಯಲ್ಲಿ ಮಳೆ
ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಭೀಕರ ಮಳೆಗೆ ಹತ್ತಿರದ ಉಡುಗಣಿ ಗ್ರಾಮದ 60ಕ್ಕೂ ಹೆಚ್ಚು ಮನೆಗಳಿಗೆ ತೊಂದರೆಯಾಗಿದೆ. ತೀರ್ಥಹಳ್ಳಿ, ಸಾಗರ, ಶಿಖಾರಿಪುರ, ಕೋಣಂದೂರು, ರಿಪ್ಪನ್ಪೇಟೆ, ಹೊಸನಗರದಲ್ಲಿ ಮಳೆಯಾಗಿದೆ. ದಾವಣಗೆರೆಯಲ್ಲಿ ಸಾಧಾರಣ ಮಳೆಯಾಗಿದ್ದರೆ, ಜಿಲ್ಲೆಯ ನ್ಯಾಮತಿ, ಸಾಲುಬಾಳು, ಕುದುರೆಕೊಂಡ ಕಡೆ ಮಳೆಯಾಗಿದೆ.
ರಾಜ್ಯದ ಒಳನಾಡಿನಲ್ಲಿ ಸಾಧಾರಣ ಮಳೆ: ಇಂದು ಎಲ್ಲೆಲ್ಲಿ ಮಳೆ ಸಾಧ್ಯತೆ?
ಮುಂದಿನ 48 ಗಂಟೆಗಳಲ್ಲಿ ಎಲ್ಲೆಲ್ಲಿ ಮಳೆ
ಮುಂದಿನ
48
ಗಂಟೆಗಳಲ್ಲಿ
ಕರ್ನಾಟಕದ
ಕರಾವಳಿ
ಭಾಗ,
ದಕ್ಷಿಣ
ಕನ್ನಡ,
ಉಡುಪಿ,
ಉತ್ತರ
ಕನ್ನಡದಲ್ಲಿ
ಗುಡುಗಿನಿಂದ
ಕೂಡದ
ಮಳೆಯಾಗಲಿದೆ.
ಬಾಗಲಕೋಟೆ,
ಬಳ್ಳಾರಿ,
ಬೀದರ್,
ಧಾರವಾಡ,
ಗದಗ,
ಕಲಬುರಗಿ,
ಹಾವೇರಿ,
ರಾಯಚೂರು,
ಕೊಪ್ಪಳ,
ವಿಜಯಪುರ,ಯಾದಗಿರಿಯಲ್ಲಿ
ಉತ್ತಮ
ಮಳೆಯಾಗಲಿದೆ.
ಬಳ್ಳಾರಿ,
ಬೆಂಗಳೂರು
ಗ್ರಾಮಾಂತರ,
ಬೆಂಗಳೂರು
ನಗರ,
ಚಿತ್ರದುರ್ಗ,
ದಾವಣಗೆರೆ,
ಚಿಕ್ಕಮಗಳೂರು,
ಮಂಡ್ಯ,
ಮೈಸೂರು,
ರಾಮನಗರ,
ಶಿವಮೊಗ್ಗ,
ತುಮಕೂರಿನಲ್ಲಿ
ಸಾಧಾರಣ
ಮಳೆಯಾಗಲಿದೆ
ಎಂದು
ಹವಾಮಾನ
ಇಲಾಖೆ
ತಿಳಿಸಿದೆ.