Get Updates
Get notified of breaking news, exclusive insights, and must-see stories!

Heat Wave Karnataka: ಕರಾವಳಿ ಬಿಸಿ ಕಾವಲಿಯ ಮೇಲೆ ಮಾಲಿನ್ಯದ ಥಡ್ಕಾ: ರಾಜಾರಾಂ ತಲ್ಲೂರು ಬರಹ

Heat Wave Karnataka: ಕರಾವಳಿ ಬಿಸಿ ಕಾವಲಿಯ ಮೇಲೆ, ಮಾಲಿನ್ಯದ ಥಡ್ಕಾ: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.

ಉಡುಪಿಯಲ್ಲಿ ಬೆಳಗ್ಗೆ ಐದೂವರೆಗೆಲ್ಲ ತಡೆಯಲಾರದ ಸೆಖೆ. ಏನಿದು ಕಥೆ ಎಂದು ಹುಡುಕಿದರೆ ಬೆಳ್ಳಂಬೆಳಗ್ಗೆ ಉಷ್ಣತೆ 31ಡಿಗ್ರಿ (Feels like 36 Degree). ಈಗ 10 ಗಂಟೆ ಹೊತ್ತಿಗೆ 32ಡಿಗ್ರಿ (Feels like 38 degree.) ಈ "ಫೀಲ್ಸ್ ಲೈಕ್" ಅರ್ಥ ಏನೆಂದರೆ, ಕರಾವಳಿ ವಾತಾವರಣದಲ್ಲಿ ತೇವಾಂಶ (humidity) ಇರುವುದರಿಂದ 32 ಡಿಗ್ರಿ ಕೂಡ 38 ಡಿಗ್ರಿಯಲ್ಲಿರುವ ಬಿಸಿಯ ಅನುಭವ ನಿಡುತ್ತದೆ.

Heat Wave Karnataka

ಹಾಗಿದ್ರೆ, ಕರ್ನಾಟಕದ ಬಿಸಿಲೂರು ಕಲಬುರಗಿಯಲ್ಲಿ ಎಷ್ಟು ಉಷ್ಣಾಂಶ ಎಂದು ಹುಡುಕಿದರೆ, ಇನ್ನೂ 37 ಡಿಗ್ರಿ. ನಮ್ಮದು ಅವರಿಗಿಂತಲೂ feels like ಒಂದು ಡಿಗ್ರಿ ಹೆಚ್ಚು! ಇದಲ್ಲವೇ ಬುದ್ಧಿವಂತರ ಜಿಲ್ಲೆಯ ಸಾಧನೆ. ವಾತಾವರಣವೋ ಇನ್ನೊಂದೋ ಏನೋ ಬದಲಾವಣೆ ಆಗಿಬಿಟ್ಟಿದೆ. ಇರಲಿ ಬಿಡಿ ಬಿಸಿ ಸಹಿಸಿಕೊಳ್ಳೋಣ ಎಂದರೆ, ಗಾಳಿಯಲ್ಲಿರುವ ಮಾಲಿನ್ಯದ ಗುಣಮಟ್ಟ ಬೆಳ್ಳಂಬೆಳಗ್ಗೆ AQI - 118. ಈ ಮಟ್ಟ 100ಕ್ಕಿಂತ ಕೆಳಗಿದ್ದರೆ, ಉಸಿರಾಡುವ ಗಾಳಿ ಆರೋಗ್ಯಕರ ಎಂದು ಲೆಕ್ಕಾಚಾರ.

ಕರಾವಳಿಯಲ್ಲಿ ಸಾಮಾನ್ಯವಾಗಿ ಇದು ಆರೋಗ್ಯಕರ ಮಟ್ಟದಲ್ಲಿರಬೇಕು. ಆದರೆ, ಅದು ಈ ಕಾವಲಿಯ ಮೇಲಿನ ದೇಹಗಳಿಗೆ ಪರಿಸರ ಮಾಲಿನ್ಯ ಥಡ್ಕಾ ಹಚ್ಚುತ್ತಿದೆ. ನಮ್ಮ ಆನಿಗಳೆಲ್ಲ "ನರಮಾಂಸ ಭಕ್ಷಣೆ ಶುರು ಮಾಡಿದ ಮೇಲೆ" ಹೀಗೆಲ್ಲ ಆಗತೊಡಗಿದೆ. ಈ AQI ಕೂಡ ನಿಖರವಾಗಿದೆ ಎಂದುಕೊಳ್ಳಬೇಡಿ! ಇದನ್ನು ಮಾನಿಟರ್ ಮಾಡುವ "ಮಾಲಿನ್ಯ ಮಂಡಳಿ" ಯವರು (ಏಕೆಂದರೆ ಅವರೀಗ ಮಾಲಿನ್ಯ ನಿಯಂತ್ರಿಸುವ ಮಂಡಳಿ ಆಗಿ ಉಳಿದಿಲ್ಲ!) ಈಗ ಈ ಆನಿ ಕಾರ್ಖಾನೆಗಳಿಗೆ ಗೇಟ್ ಕೀಪರುಗಳು. ಅವರ ಮಾಲಿನ್ಯ ಪತ್ತೆ ಪರಿಕರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆಯೇ? ಅವುಗಳ ಥರ್ಡ್ ಪಾರ್ಟಿ ಆಡಿಟ್ ಆಗಿದೆಯೆ? ಇಂತಹದನ್ನೆಲ್ಲ ಕೇಳಲು ಹೊರಟರೆ ನಮಗೆ ಏನೇನೋ ಎಲ್ಲ ಪಟ್ಟ ಸಿಕ್ಕಿಬಿಡುತ್ತದೆ.

ನಾವಿನ್ನು ಇರುವಷ್ಟು ದಿನ ಇದೇ ವಿಷ ಉಸಿರಾಡಿ, ಹೋಗುವ ದಿನ ವಿಷಕಂಠರಾಗಿ ಎದ್ದು ಹೋಗ್ತಾ ಇರಬೇಕು ಅಷ್ಟೇ. ನಾವು ಹೋದಷ್ಟೂ "ವಿಕಾಸ" ಜಾಸ್ತಿ. ತಗ್ಗಿ ಬಗ್ಗಿ ಅಭ್ಯಾಸ ಆಗಿಬಿಟ್ಟಿರುವ ನಮ್ಮ ಡಿಯರ್ ಮೀಡಿಯಾ ಹಾಳಾದ ಚರಂಡಿ, ರಸ್ತೆ ದಾಟಿ ಮುಂದೆ ಕಣ್ಣು ಹಾಯಿಸೋದೇ ಇಲ್ಲ.

Heat Wave Karnataka: ನೆಟ್ಟಿಗರು ಹೇಳಿದ್ದೇನು

ಶಶಿಧರ ಹಾಲಾಡಿ ಎನ್ನುವವರು, ಬೆಂಗಳೂರಿನಲ್ಲಿ ಇವತ್ತು ಗರಿಷ್ಠ ತಾಪಮಾನವು 36 ಡಿಗ್ರಿ ಸೆಲ್ಸಿಯಸ್ ಇದೆ. ಬೆಳಿಗ್ಗೆ ಬೆಂಗಳೂರಿನ ಸೆಕೆ ನೋಡಿ, ಉಡುಪಿ ಮತ್ತು ಬೆಂಗಳೂರಿನ ತಾಪಮಾನಗಳನ್ನು ಹೋಲಿಸಲಾಗುತ್ತಿದೆ. ಇವತ್ತು ಬೆಳಿಗ್ಗೆ ಉಡುಪಿಯಲ್ಲಿ 32 ಬೆಂಗಳೂರಿನಲ್ಲಿ 33 (ಬೆಳಿಗ್ಗೆ ತಾಪಮಾನ, ವೆಬ್‌ಸೈಟ್ ಪ್ರಕಾರ!).. ಅಂದರೆ ಬೆಂಗಳೂರು ಮತ್ತು ಉಡುಪಿಯಲ್ಲಿ ಇವತ್ತು ಸಮಾನ ಉಷ್ಣತೆ! ವಾತಾವರಣ ಕೆಟ್ಟು ಹೋಗಿದೆಯಾ ಅಂತ ಎಂದು ಪ್ರಶ್ನೆ ಮಾಡಿದ್ದಾರೆ. ಎಂ ಜೆ ನಂದನ್ ಅವರು ಇನ್ನೂ ವಿಪರೀತ ಮಟ್ಟಕ್ಕೆ ಹೋಗಿದೆ ನಮ್ ಮಲೆನಾಡ ಕಡೆ.. ಇಂದು ಬೆಳಿಗ್ಗೆನೇ ಹಣೆ ಮೆಲ್ ಬೆವರು ಬರೋವಷ್ಟು ಎಂದಿದ್ದಾರೆ.

ಬರಹ: ರಾಜಾರಾಂ ತಲ್ಲೂರು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+