ಉಪ ಲೋಕಾಯುಕ್ತ ಸುಭಾಷ್ ಬಿ ಅಡಿ ಕೆಲಸಕ್ಕೆ ಅಡ್ಡಿ ಇಲ್ಲ
ಬೆಂಗಳೂರು, ಡಿಸೆಂಬರ್ 18 : ತಮ್ಮ ಪದಚ್ಯುತಿ ಪ್ರಶ್ನಿಸಿ ಉಪ ಲೋಕಾಯುಕ್ತ ಸುಭಾಷ್ ಬಿ ಅಡಿ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜನವರಿಗೆ ಮುಂದೂಡಿದೆ. ಉಪ ಲೋಕಾಯುಕ್ತರು ಕಾರ್ಯ ನಿರ್ವಹಿಸಬಹುದು ಎಂದು ಕರ್ನಾಟಕ ಸರ್ಕಾರ ಕೋರ್ಟ್ಗೆ ಲಿಖಿತ ಹೇಳಿಕೆ ನೀಡಿದೆ.
ಕಾಂಗ್ರೆಸ್ನ
78ಕ್ಕೂ
ಅಧಿಕ
ಶಾಸಕರು
ಉಪ
ಲೋಕಾಯುಕ್ತ
ಸುಭಾಷ್
ಬಿ
ಅಡಿ
ಅವರ
ಪದಚ್ಯುತಿ
ನಿರ್ಣಯನ್ನು
ಸದನದಲ್ಲಿ
ಮಂಡನೆ
ಮಾಡಿದ್ದರು.
ಇದಕ್ಕೆ
ಸದನದ
ಒಪ್ಪಿಗೆಯೂ
ಸಿಕ್ಕಿತು.
ಆದರೆ,
ತಾಂತ್ರಿಕ
ಕಾರಣಗಳಿಂದಾಗಿ
ಪದಚ್ಯುತಿ
ನಿರ್ಣಯ
ಇನ್ನೂ
ಸ್ಪೀಕರ್
ಕಾಗೋಡು
ತಿಮ್ಮಪ್ಪ
ಅವರ
ಕೈಯಲ್ಲಿಯೇ
ಇದೆ.
[ಉಪ
ಲೋಕಾಯುಕ್ತ
ಸುಭಾಷ್
ಅಡಿ
ಪದಚ್ಯುತಿ?]
ತಮ್ಮ ವಿರುದ್ಧ ಪದಚ್ಯುತಿ ನಿರ್ಣಯವನ್ನು ಮಂಡನೆ ಮಾಡಿರುವುದನ್ನು ಪ್ರಶ್ನಿಸಿ ಸುಭಾಷ್ ಬಿ ಅಡಿ ಅವರು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅರ್ಜಿಯ ವಿಚಾರಣೆಯನ್ನು ನಡೆಸಿದ ಕೋರ್ಟ್, ಜನವರಿ 2ನೇ ವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ. [ಲೋಕಾಯುಕ್ತ ಪದಚ್ಯುತಿ ನಿರ್ಣಯ ಹೇಗೆ?]
ಉಪ ಲೋಕಾಯುಕ್ತ ಸುಭಾಷ್ ಬಿ ಅಡಿ ಅವರ ಪರವಾಗಿ ಹಿರಿಯ ವಕೀಲ ಬಿ.ವಿ.ಆಚಾರ್ಯ ವಾದ ಮಂಡನೆ ಮಾಡಿದರು. ಉಪ ಲೋಕಾಯುಕ್ತ ಎಂಬುದು ಸಂವಿಧಾನಿಕ ಹುದ್ದೆಯಾಗಿದೆ. ಪದಚ್ಯುತಿ ನಿರ್ಣಯ ಮಂಡನೆಯಾಗಿರುವುದರಿಂದ ಅವರ ಕಾರ್ಯಕ್ಕೆ ತೊಂದರೆಯಾಗಿದೆ. ಅವರ ಮೇಲೆ ಬಂದಿರುವ ಯಾವ ಆರೋಪಗಳು ಸಾಬೀತಾಗಿಲ್ಲ ಎಂದರು. [ಲೋಕಾಯುಕ್ತ ಹುದ್ದೆಗೆ ಎಸ್.ಆರ್.ನಾಯಕ್ ಹೆಸರು?]
ಪದಚ್ಯುತಿ ಪ್ರಸ್ತಾವನೆಯ ಬಗ್ಗೆ ಸರ್ಕಾರದಿಂದ ನ್ಯಾಯಮೂರ್ತಿಗಳು ವಿವರಣೆ ಕೇಳಿದರು. ಉತ್ತರ ನೀಡಲು ಕಾಲಾಕಾಶ ನೀಡುವಂತೆ ಅಡ್ವೊಕೇಟ್ ಜನರಲ್ ಮಧುಸೂದನ್ ನಾಯಕ್ ಕೋರ್ಟ್ಗೆ ಮನವಿ ಮಾಡಿದರು. ಆಗ, ಸುಭಾಷ್ ಬಿ ಅಡಿ ಕಾರ್ಯನಿರ್ವಹಿಸಬಹುದೆಂದು ಎಜಿಯಿಂದ ಹೇಳಿಕೆ ಪಡೆದ ಕೋರ್ಟ್ ವಿಚಾರಣೆಯನ್ನು ಮುಂದೂಡಿತು.
ಯಾವ ಆರೋಪಗಳಿವೆ : ಹಿಂದೆ ಉಪ ಲೋಕಾಯುಕ್ತರಾಗಿದ್ದ ಎಸ್.ಬಿ.ಮಜಗೆ ಅವರು ಸುಭಾಷ್ ಅಡಿ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಈ ಆರೋಪಗಳ ಆಧಾರದ ಮೇಲೆ ಅವರನ್ನು ಪದಚ್ಯುತಿಗೊಳಿಸುವ ನಿರ್ಣಯವನ್ನು ಕಾಂಗ್ರೆಸ್ ಸದನದಲ್ಲಿ ಮಂಡಿಸಿತ್ತು.