ದೇಶದ ಅತಿ ತೂಕದ ಮಗು ಹೆತ್ತ ಹಾಸನದ ತಾಯಿ!
ಹಾಸನ, ಮೇ 24: ಯಾವುದೇ ಮಗು ಹುಟ್ಟಿದ ಕೂಡಲೆ ಕೇಳುವ ಸಾಮಾನ್ಯ ಪ್ರಶ್ನೆ ಇದು - "ಮಗು ಎಷ್ಟು ಕೆಜಿ (ಪೌಂಡ್) ಇದೆ? ತಾಯಿ ಮಗು ಹುಷಾರಾಗಿದ್ದಾರೆ ತಾನೆ?" "ಎರಡೂ ಮುಕ್ಕಾಲು ಕೇಜಿ." "ಓಹೋ, ಎರಡೂ ಮುಕ್ಕಾಲು ಕೆಜೀನಾ, ಪರವಾಗಿಲ್ಲ ನಾರ್ಮಲ್ ಆಗಿದೆ."
ಹೀಗೆ ಸಾಗುತ್ತದೆ ಮಾತುಕತೆ. ಆದರೆ ಇಲ್ಲೊಬ್ಬ ಮಹಾತಾಯಿಯೊಬ್ಬಳು ಎರಡೂ ಮುಕ್ಕಾಲಲ್ಲ, ಏಳುಕಾಲು ಕೆಜಿ ತೂಕದ ಮಗುವಿಗೆ ಜನ್ಮ ನೀಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ! ಹಾಗೆಯೆ, ದಾಖಲೆಯನ್ನೂ ಸೃಷ್ಟಿಸಿದ್ದಾಳೆ. ಇದೇ ಮೊದಲಿಗೆ ದೇಶದಲ್ಲಿ ಜನಿಸಿದ ಅತಿ ಹೆಚ್ಚು ಭಾರದ ಮಗು ಇದಾಗಿದೆಯಂತೆ.
ಬೇಲೂರು ತಾಲೂಕು ದೊಡ್ಡಿಹಳ್ಳಿ ಗ್ರಾಮದ ಅರುಣ್ ಅವರ ಪತ್ನಿ ನಂದಿನಿ ಮಗುವಿಗೆ ಜನ್ಮ ನೀಡಿದ ಮಹಾತಾಯಿ. ಸೋಮವಾರ ಬೆಳಗ್ಗೆ ತನ್ನ ದ್ವಿಚಕ್ರ ವಾಹನದಲ್ಲೇ ಹೆರಿಗೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು.

ಹೆಚ್ಚಿನ ನೋವು ಕಾಣಿಸಿದ್ದರಿಂದ ವೈದ್ಯರು ನಾರ್ಮಲ್ ಹೆರಿಗೆ ಮಾಡಲು ಸಾಧ್ಯವಿಲ್ಲ ಸಿಜರಿನ್ ಮೂಲಕ ಮಗುವನ್ನು ಹೊರತೆಗೆಯಬೇಕಾಗುತ್ತದೆ ಎಂದು ಹೇಳಿದ್ದಾರೆ.[ಪುಟ್ಟಬಸಮ್ಮನ ಜಗಳದಿಂದ ಅಂಗನವಾಡಿ ಕೂಸು ಬಡ!]
ಅದರಂತೆ ಸಂಜೆ 7 ಗಂಟೆಗೆ ಮಗುವನ್ನು ಸಿ ಸೆಕ್ಷನ್ ಮೂಲಕ ಹೊರತೆಗೆಯಲಾಗಿದ್ದು, ಮಗು ಹೆಣ್ಣಾಗಿದ್ದು, ತೂಕವನ್ನು ನೋಡಿ ವೈದ್ಯರೇ ಅಚ್ಚರಿಗೊಂಡಿದ್ದಾರೆ.

ಹುಟ್ಟಿದಾಗ 7 ಕೆ.ಜಿ. 250 ಗ್ರಾಂ ಇತ್ತಾದರೂ ಇದೀಗ 6 ಕೆ.ಜಿ. 800 ಗ್ರಾಂಗೆ ಇಳಿದಿದೆ. ವಿಶ್ವದಲ್ಲಿಯೇ ಆಗತಾನೆ ಹುಟ್ಟಿದ ಮಗುವಿನ ತೂಕ 10 ಕೆ.ಜಿ. 200 ಗ್ರಾಂ ಇದ್ದಿದ್ದು, ಗಿನ್ನಿಸ್ ದಾಖಲೆಯಲ್ಲಿದೆ. ಇಷ್ಟೊಂದು ತೂಕದ ಮಗು ಜನ್ಮ ತಾಳಿರುವುದು ದೇಶದಲ್ಲೆ ಇದೆ ಮೊದಲಂತೆ. ಇದೀಗ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ.

ಮಗುವಿನ ತಂದೆ ಅರುಣ್ ಮಾತನಾಡಿ, ದೇಶದಲ್ಲೆ ಅತ್ಯಂತ ತೂಕದ ಮಗುವೆಂದು ತಿಳಿದು ಬಂದಿರುವುದು ನನಗೆ ಸಂತೋಷ ತಂದಿದೆ. ವೈದ್ಯರಾದ ಕುಮಾರ್ ಅತ್ಯಂತ ಜಾಗರೂರುಕತೆಯಿಂದ ಚಿಕಿತ್ಸೆ ನೀಡಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸಾಮಾನ್ಯವಾಗಿ ನವಜಾತ ಶಿಶುವಿನ ತೂಕ 7.5 ಪೌಂಡ್(3.5 ಕೆಜಿ) ತೂಕ ಇರುತ್ತದೆ ಅಥವಾ 2.5 ಕೆಜಿ ತೂಕದಿಂದ 4.5 ಕೆಜಿ ತನಕ ಇರಬಹುದು. ಹೆಣ್ಣುಶಿಶುವಿಗೆ ಹೋಲಿಸಿದ ಗಂಡು ಶಿಶುವಿನ ತೂಕ ಹೆಚ್ಚಿರುತ್ತದೆ.
-
Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ -
ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral -
ಹುಡುಗಿಯರೇ ಎಚ್ಚರ: ಟಾಕ್ಸಿಕ್ ಗಂಡಸರ ಲಕ್ಷಣಗಳಿವು, ಮೆಚ್ಚಿ ಒಲಿದರೆ ಬಲಿಯಾಗುವಿರಿ -ಡಾ ರೂಪಾ ರಾವ್ ಬರಹ -
Jowar Price: ಕರ್ನಾಟಕದ ಮಾರುಕಟ್ಟೆಗಳಲ್ಲಿ ಜೋಳದ ದರ ಏರಿಳಿತ; ಇಲ್ಲಿದೆ ಜಿಲ್ಲಾವಾರು ಬೆಲೆ ಪಟ್ಟಿ -
Karnataka Rain: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ: ಐಎಂಡಿ ವರದಿ -
Zomato: ಬೆಂಗಳೂರು Vs ಚೆನ್ನೈ ಸಾಂಬಾರ್ ಎಂದ ಝೊಮ್ಯಾಟೊ; ನಮಗೆ ಸ್ವಿಗ್ಗಿ ಸಾಕು ಎಂದ ನೆಟ್ಟಿಗರು -
ವಾರ ಭವಿಷ್ಯ: ಈ ರಾಶಿಯ ಪ್ರೇಮಿಗಳು ಮತ್ತೆ ಒಂದಾಗುತ್ತಾರೆ! ಸೂರ್ಯನಿಗೆ ಅರ್ಘ್ಯದಿಂದ ಭಾಗ್ಯ ಬದಲಾವಣೆ -
SSLC ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡಿಂಗ್: ಸರ್ಕಾರದ ದಿಢೀರ್ ನಿರ್ಧಾರಕ್ಕೆ ಖಾಸಗಿ ಶಾಲೆಗಳ ತೀವ್ರ ವಿರೋಧ -
ರಾಜ್ಯದಲ್ಲಿ ತೃತೀಯ ಭಾಷೆ 'ಆಟಕ್ಕುಂಟು ಲೆಕ್ಕಕ್ಕಿಲ್ಲ', ಆದರೆ ಕೇಂದ್ರದಿಂದ ಕಡ್ಡಾಯದ ಹೊಸ ಆದೇಶ : ರಾಜೀವ ಹೆಗಡೆ ಬರಹ -
RCB Vs CSK ಮ್ಯಾಚ್ ನೋಡಲು ಬರೋಬ್ಬರಿ 1.46 ಲಕ್ಷ ಕಳೆದುಕೊಂಡ ಕಳೆದುಕೊಂಡ ಟೆಕ್ಕಿ, ಐಪಿಎಲ್ ಅಭಿಮಾನಿಗಳೇ ಹುಷಾರ್ -
April 6 Horoscope: ಈ ರಾಶಿಗಳಿಗೆ ಲಾಭ, ಕೆಲವರಿಗೆ ಎಚ್ಚರಿಕೆ ಸೂಚನೆ -
ಏಪ್ರಿಲ್ 8ಕ್ಕೆ ದ್ವಿತೀಯ PUC ಫಲಿತಾಂಶ? ಶಿಕ್ಷಣ ಇಲಾಖೆಯ ಮಹತ್ವದ ಅಪ್ಡೇಟ್ ಇಲ್ಲಿದೆ












Click it and Unblock the Notifications