ಶಾಸಕ ಅರಕಲಗೂಡು ಮಂಜು ಪರಿಚಯ
ಹಾಸನ, ಅ.29: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟಕ್ಕೆ ಶಾಸಕರಾದ ಅರಕಲಗೂಡು ಮಂಜು ಅವರು ಮೊದಲ ಬಾರಿಗೆ ಸಚಿವರಾಗಿ ಸೇರ್ಪಡೆಯಾಗುತ್ತಿದ್ದಾರೆ. ಜೆಡಿಎಸ್ನ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರ ವಿರುದ್ಧ ಕಳೆದ ಲೋಕಸಭೆ ಚುನಾವಣೆಯಲ್ಲಿಸೋಲು ಕಂಡಿದ್ದ ಎ. ಮಂಜು ಅವರು ರಾಜ್ಯ ಸಚಿವರಾಗಿ ಸಂಪುಟ ಸೇರಲಿದ್ದಾರೆ.
ಸಿದ್ದರಾಮಯ್ಯ
ಅವರ
ಸಚಿವ
ಸಂಪುಟ
ಸೇರ್ಪಡೆ
ಬಗ್ಗೆ
ಹರ್ಷ
ವ್ಯಕ್ತಪಡಿಸಿರುವ
ಎ.
ಮಂಜು
ಅವರು,
ಹಾಸನದಲ್ಲಿ
ಪಕ್ಷವನ್ನು
ಸಂಘಟಿಸುವುದು
ಸವಾಲಿನ
ಕೆಲಸ.
ಅದನ್ನು
ಸಮರ್ಥವಾಗಿ
ಸಾಧಿಸಿ
ಮುನ್ನಡೆಸಿದ್ದೇನೆ.
ಜನ
ಸ್ನೇಹಿಯಾಗಿ
ಸತತವಾಗಿ
ಶಾಸಕನಾಗಿ
ಆಯ್ಕೆಯಾಗಿ
ಜನರಿಗಾಗಿ
ದುಡಿದಿದ್ದು,
ಈಗ
ಸಚಿವ
ಸ್ಥಾನ
ಸಿಕ್ಕಿರುವುದಕ್ಕೆ
ಸ್ವಾಭಾವಿಕವಾಗಿ
ನನಗೆ
ಖುಷಿಯಾಗಿದೆ
ಎಂದಿದ್ದಾರೆ.
ನನ್ನ ಜವಾಬ್ದಾರಿ ಹೆಚ್ಚಾಗಿದ್ದು, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ನಿಷ್ಠೆಯಿಂದ ದುಡಿಯುತ್ತೇನೆ. ನಾನು ಮಂತ್ರಿಯಾಗುವ ಕ್ಷಣಗಳನ್ನು ನೋಡುವ ಭಾಗ್ಯ ನನ್ನ ತಾಯಿಗೆ ಸಿಗಲಿಲ್ಲ ಎಂಬ ಕೊರಗು ನನಗಿದೆ ಎಂದು ಮಂಜು ಭಾವುಕರಾದರು. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಹಾಸನ ಜಿಲ್ಲಾ ಉಸ್ತುವಾರಿ ನೀಡಿದರೆ ಇನ್ನಷ್ಟು ಖುಷಿಯಾಗುತ್ತದೆ ಎಂದರು. [ಶಾಸಕ ಮನೋಹರ್ ತಹಶೀಲ್ದಾರ್ ಪರಿಚಯ]
ಹಾಸನದ ಪ್ರಭಾವಿ ರಾಜಕಾರಣಿ ನಂಜೇಗೌಡರ ಸಂಬಂಧಿಯಾಗಿರುವ ಎ.ಮಂಜು ವಿದ್ಯಾರ್ಥಿ ಸಂಘಟನೆಗಳಲ್ಲಿ ಕೆಲಸ ಮಾಡಿ ಸಿಂಡಿಕೇಟ್ ಸದಸ್ಯರಾಗಿ ಮೂಲತಃ ಬಿಜೆಪಿಯಿಂದ ರಾಜಕೀಯ ಪ್ರವೇಶ ಮಾಡಿದವರು. [ಶಾಸಕ ವಿನಯ್ ಕುಲಕರ್ಣಿ ಪರಿಚಯ]
1999ರಲ್ಲಿ
ಅರಕಲಗೂಡು
ಕ್ಷೇತ್ರದಿಂದ
ಮೊದಲ
ಬಾರಿಗೆ
ಬಿಜೆಪಿಯಿಂದ
ಶಾಸಕರಾಗಿ
ಆ
ನಂತರ
ಪಕ್ಷದಿಂದ
ವಿರೋಧಿ
ಚಟುವಟಿಕೆ
ಆರೋಪದ
ಮೇಲೆ
ಉಚ್ಚಾಟನೆಗೊಂಡಿದ್ದರು.
ನಂತರ
ಕಾಂಗ್ರೆಸ್
ಸೇರಿ
2004ರಲ್ಲಿ
ಸೋಲು
ಅನುಭವಿಸಿದ್ದರು.
2014ರಲ್ಲಿ
ನಡೆದ
ಲೋಕಸಭೆ
ಚುನಾವಣೆಯಲ್ಲಿ
ಮಾಜಿ
ಪ್ರಧಾನಿ
ಎಚ್.ಡಿ.ದೇವೇಗೌಡ
ವಿರುದ್ಧ
ಸ್ಪರ್ಧಿಸಿ
ಸೋತಿದ್ದರು.
[ಡಾ.ಜಿ.ಪರಮೇಶ್ವರ
ಪರಿಚಯ]
*
ಹಾಸನ
ಜಿಲ್ಲೆಯ
ಕೊಣನೂರಿನಲ್ಲಿ
1958ರ
ನವೆಂಬರ್
1
ರಂದು
ಜನನ
*
ವಯಸ್ಸು
-
57
*
ದೇವರಹಟ್ಟಿ
ಅಣ್ಣೇಗೌಡ
ಹಾಗೂ
ಮಂಜುಳಾ
ಅವರ
ಪುತ್ರ.
*
ವಿದ್ಯಾರ್ಹತೆ
-
ಬಿ.ಎ,ಎಲ್ಎಲ್
ಬಿ
*
ಜಾತಿ
-
ಒಕ್ಕಲಿಗ
*
3
ಬಾರಿ
ವಿಧಾನ
ಸಭೆಗೆ
ಆಯ್ಕೆ(1999,
2008
ಹಾಗೂ
2013)
*
1993ರಲ್ಲಿ
ತಂಬಾಕು
ಮಂಡಳಿ
ಉಪಾಧ್ಯಕ್ಷರಾಗಿ
ಬೆಂಗಳೂರು
ವಿಶ್ವವಿದ್ಯಾನಿಲಯದ
ಸಿಂಡಿಕೇಟ್
ಮತ್ತು
ಸೆನೆಟ್
ಸದಸ್ಯರಾಗಿ,
ಪಿ.ಎಲ್.ಡಿ.
ಬ್ಯಾಂಕ್
ಅಧ್ಯಕ್ಷರಾಗಿ
ಕಾರ್ಯನಿರ್ವಹಿಸಿದ್ದರು.
*
ಅರಕಲಗೂಡು
ಕ್ಷೇತ್ರದ
ಹಾಲಿ
ಶಾಸಕ
*
ಮೊದಲ
ಬಾರಿಗೆ
ಸಚಿವ
ಸ್ಥಾನ
ಅಲಂಕಾರ
*
ಹಾಸನ
ನಗರ
ಪೊಲೀಸ್
ಠಾಣೆಯಲ್ಲಿ
ಮಂಜು
ಅವರ
ವಿರುದ್ಧ
ಐಪಿಸಿ
ಸೆಕ್ಷನ್
354,341,
504
ಹಾಗೂ
506
ರ
ಅನ್ವಯ
ಪ್ರಕರಣ
ದಾಖಲಾಗಿತ್ತು.
*
2008ರ
ಅಫಿಡವಿಟ್
ನಂತೆ
ಚರಾಸ್ತಿ
60,96,394
ರು,
ಸ್ಥಿರಾಸ್ತಿ
:
5,40,00,000
ರು,
ಸಾಲ
:
1,03,89,730
ರು
*
2014ರ
ಅಫಿಡವಿಟ್
ನಂತೆ
ಮಾರುತಿ
ಓಮ್ನಿ,
ಟೊಯೋಟಾ
ಇನ್ನೋವಾ,
ಫೋರ್ಡ್
ಐಕಾನ್,
ಟ್ರ್ಯಾಕ್ಟರ್
ಹಾಗೂ
ಒಂದು
ದ್ವಿಚಕ್ರ
ವಾಹನ
ಹೊಂದಿದ್ದಾರೆ.
5.5
ಲಕ್ಷ
ರು
ಬೆಲೆಯ
ಚಿನ್ನಾಭರಣ,
ಪತ್ನಿ
ಬಳಿ
16
ಲಕ್ಷ
ರು
ಬೆಲೆ
ಬಾಳುವ
ಚಿನ್ನಾಭರಣ,
75,000
ರು
ಮೌಲ್ಯದ
ಬೆಳ್ಳಿ
ಪದಾರ್ಥಗಳಿವೆ.
*
ಅರಕಲಗೂಡಿನ
ಹನ್ಯಾಳು
ಗ್ರಾಮ,
ಬೆಂಗಳೂರಿನ
ಲಾವೆಲ್ಲೆ
ರಸ್ತೆ,
ಸೋಮವಾರ
ಪೇಟೆ
ತಾಲೂಕಿನಲ್ಲಿ
ಮನೆ,
ನಿವೇಶನ
ಹೊಂದಿದ್ದಾರೆ.
*
ಒಟ್ಟಾರೆ
ಮಂಜು
ಅವರು
7.71
ಕೋಟಿ
ರು
ಹೊಂದಿದ್ದಾರೆ.
ಅವರ
ಪತ್ನಿ
ಬಳಿ
8.81
ಕೋಟಿ
ರು
ಆಸ್ತಿ
ಇದೆ.
ಪರಿಷತ್ ಸದಸ್ಯ ಜಿ.ಪರಮೇಶ್ವರ್, ಶಾಸಕರಾದ ಮನೋಹರ್ ತಹಶೀಲ್ದಾರ್, ಎ.ಮಂಜು, ವಿನಯ್ ಕುಲಕರ್ಣಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ನಾಲ್ವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಜಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಈ ನಾಲ್ವರಿಗೂ ರಾಜ್ಯಪಾಲ ವಿ.ಆರ್.ವಾಲಾ ಅವರು ಪ್ರಮಾಣವಚನ ಬೋಧಿಸಲಿದ್ದಾರೆ.