ಯೋಗಗುರು ಬಿಕೆಎಸ್ ಐಯ್ಯಂಗಾರ್ಗೆ ಗೂಗಲ್ ಡೂಡಲ್ ನಮನ
ಕೋಲಾರ, ಡಿಸೆಂಬರ್ 14 : ಯೋಗ ಒಂದು ಜೀವನ ವಿಧಾನ ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟ ಕನ್ನಡಿಗ ಬಿ.ಕೆ.ಎಸ್.ಐಯ್ಯಂಗಾರ್ ಅವರಿಗೆ ಗೂಗಲ್ ನಮನ ಸಲ್ಲಿಸುತ್ತಿದೆ. ವಿಶೇಷ ಡೂಡಲ್ ರಚಿಸುವ ಮೂಲಕ ಡಿಸೆಂಬರ್ 14ರಂದು ಐಯ್ಯಂಗಾರ್ ಅವರ ಜನ್ಮದಿನವನ್ನು ನೆನಪಿಸುತ್ತಿದೆ.
ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಐಯ್ಯಂಗಾರ್ ಅವರು 1918ರ ಡಿಸೆಂಬರ್ 14ರಂದು ಕೋಲಾರ ಜಿಲ್ಲೆಯ ಬೆಳ್ಳೂರು ಗ್ರಾಮದಲ್ಲಿ ಜನಿಸಿದರು. 2014ರ ಆಗಸ್ಟ್ 20ರಂದು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. [ಬಿಕೆಎಸ್ ಐಯ್ಯಂಗಾರ್ ವಿಧಿವಶ]

ಐಯ್ಯಂಗಾರ್ ಅವರ ತಂದೆ ಕೃಷ್ಣಮಾಚಾರ್ ಅವರು ಕನ್ನಡ ಶಾಲೆಯಲ್ಲಿ ಶಿಕ್ಷಕರಾಗಿದ್ದರು. 9 ವರ್ಷದ ಬಾಲಕನಾಗಿದ್ದಾಗ ತಂದೆಯನ್ನು ಕಳೆದುಕೊಂಡ ಐಯ್ಯಂಗಾರ್ ಕಡುಬಡತನದಲ್ಲಿ ಸಂಬಂಧಿಕರ ಮನೆಯಲ್ಲಿ ಬೆಳೆದರು. ಬಾಲ್ಯದಲ್ಲಿ ತಮ್ಮ ದೇಹ ಅನೇಕ ರೋಗಗಳ ತವರು ಮನೆಯಾಗಿತ್ತು ಎಂದು ಐಯ್ಯಂಗಾರ್ ಅವರೇ ಬರೆದಿದ್ದಾರೆ. [ಬಿಕೆಎಸ್ ಐಯ್ಯಂಗಾರ್ - ಒಂದು ನೆನಪು]
ಯೋಗಕ್ಕೆ ಜೀವನ ಮೀಸಲು : ತಮ್ಮ 16ನೇ ವಯಸ್ಸಿನಲ್ಲಿ ಟಿ.ಕೃಷ್ಣಮಾಚಾರ್ ಅವರಿಂದ ಯೋಗ ಕಲಿಯತೊಡಗಿದ ಮೇಲೆ ಬಿಕೆಎಸ್ ಐಯ್ಯಂಗಾರ್ ಅವರ ಬದುಕು ಬದಲಾಯಿತು. 2 ವರ್ಷ ಯೋಗ ಕಲಿತ ಮೇಲೆ ಗುರುಗಳು ಇವರನ್ನು ಪುಣೆಗೆ ಕಳುಹಿಸಿಕೊಟ್ಟರು. ನಂತರ ತಮ್ಮ ಜೀವನವನ್ನು ಯೋಗಕ್ಕೆ ಮೀಸಲಾಗಿಟ್ಟ ಬಿಕೆಎಸ್ ಐಯ್ಯಂಗಾರ್ ಅವರು, ಯಾರು ಬೇಕಾದರೂ ಯೋಗ ಕಲಿಯಬಹುದು, ಯೋಗಕ್ಕೆ ಜಾತಿ, ಲಿಂಗ, ವಯಸ್ಸು, ರಾಷ್ಟ್ರೀಯತೆಗಳ ಚೌಕಟ್ಟಿಲ್ಲ ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟರು.

ಪ್ರತಿದಿನ ಮುಂಜಾನೆ 4 ಗಂಟೆಗೆ ಏಳುತ್ತಿದ್ದ ಬಿಕೆಎಸ್ ಐಯ್ಯಂಗಾರ್ ಅವರು, ಒಂದೂವರೆ ಗಂಟೆ ಪ್ರಾಣಾಯಾಮ ಮಾಡುತ್ತಿದ್ದರು. ಬಳಿಕ ಯೋಗ ತರಗತಿಗಳನ್ನು ಹೇಳಿಕೊಡುತ್ತಿದ್ದರು. ಅದು ಇಲ್ಲದಿದ್ದರೆ ಒಂಬತ್ತೂವರೆ ತನಕ ಯೋಗಾಭ್ಯಾಸ ಮಾಡುತ್ತಿದ್ದರು. ಯೋಗದ ಜೊತೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಐಯ್ಯಂಗಾರ್ ಅವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ.
ಪುಸ್ತಕಗಳನ್ನು ಬರೆದರು : ಯೋಗವನ್ನು ಪ್ರಪಂಚದಾದ್ಯಂತ ಪರಿಚಯಿಸಿದ ಬಿಕೆಎಸ್ ಐಯ್ಯಂಗಾರ್ ಅವರು, ಯೋಗದ ಕುರಿತು ಹಲವಾರು ಪುಸ್ತಕಗಳನ್ನು ಪ್ರಕಟಿಸಿ ಜನರಿಗೆ ಅರಿವು ಮೂಡಿಸಿದರು. 1966ರಲ್ಲಿ ಐಯ್ಯಂಗಾರ್ ಅವರು ಬರೆದ ಪ್ರಥಮ ಪುಸ್ತಕ 'Light on Yoga' ಹದಿನೇಳು ಭಾಷೆಗಳಲ್ಲಿ ತರ್ಜುಮೆಗೊಂಡಿದೆ.

ಬಿಕೆಎಸ್ ಐಯ್ಯಂಗಾರ್ ಅವರ ಸಾಧನೆಗೆ ದೇಶವಿದೇಶದಿಂದ ಹಲವು ಗೌರವಗಳು ದೊರೆತಿವೆ. ಭಾರತ ಸರ್ಕಾರ 2014ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಐಯ್ಯಂಗಾರ್ ಅವರನ್ನು ಗೌರವಿಸಿದೆ. ಮೂತ್ರಕೋಶ ವೈಫಲ್ಯದಿಂದ ಬಳಲುತ್ತಿದ್ದ ಐಯ್ಯಂಗಾರ್ ಅವರು 96ನೇ ವಯಸ್ಸಿನಲ್ಲಿ ಪುಣೆಯ ಪ್ರಯಾಗ್ ಆಸ್ಪತ್ರೆಯಲ್ಲಿ ವಿಧಿವಶರಾದರು.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications