Ginger price in karnataka: ಟೊಮೆಟೊ, ಗೋಧಿ ಹಿಟ್ಟು, ಮೆಣಸಿನಕಾಯಿ ಬಳಿಕ ಗಗನಕ್ಕೇರಿದ ಶುಂಠಿ ಬೆಲೆ: ಕೆಜಿಗೆ ಎಷ್ಟು ಗೊತ್ತೇ?
ಬೆಂಗಳೂರು, ಜುಲೈ 21: ಟೊಮೆಟೊ, ಗೋಧಿ ಹಿಟ್ಟು, ಹಸಿರು ಮೆಣಸಿನಕಾಯಿ ಬಳಿಕ ಶುಂಠಿ ಬೆಲೆ ಗಗಣಕ್ಕೇರಿದೆ. ಮಳೆಗಾಲದ ಸಮಯದಲ್ಲಿ ಶುಂಠಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿರುವುದು ಸಾಮಾನ್ಯ ಜನರಿಗೆ ಹೊರೆಯಾಗಿ ಪರಿಣಮಿಸಿದೆ. ಅದರಲ್ಲೂ ಕರ್ನಾಟಕದಲ್ಲಿ ಶುಂಠಿ ಬೆಲೆ ಐತಿಹಾಸಿಕ ಏರಿಕೆ ಕಂಡಿದೆ.
ರಾಜ್ಯದಲ್ಲಿ ಟೊಮೆಟೊ ದರವು 200 ರುಪಾಯಿಗೆ ತಲುಪಿದೆ. ಗೋಧಿ ಹಿಟ್ಟಿನ ಬೆಲೆಯು 320 ಕ್ಕೆ ತಲುಪಿದೆ. ಹಸಿರು ಮೆಣಸಿನಕಾಯಿ ಬೆಲೆಯು 200 ರೂಪಾಯಿಗೆ ತಲುಪಿರುವುದು ಜನರ ಜೇಬಿಗೆ ಕತ್ತರಿ ಹಾಕಿವೆ. ಇದೇ ಸಂದರ್ಭದಲ್ಲಿ ಶುಂಠಿ ದರವು ಸಹ ಭಾರೀ ಏರಿಕೆ ಕಂಡಿದೆ.

ಕರ್ನಾಟಕದ ಮುಕ್ತ ಮಾರುಕಟ್ಟೆಯಲ್ಲಿ ಒಂದು ಕಿಲೋ ಶುಂಠಿ ಬೆಲೆ ಈಗ 300 ರಿಂದ 400 ರೂಗಳಿಗೆ ದೊರೆಯುತ್ತಿದೆ. ಭಾರತದಲ್ಲಿ ಶುಂಠಿ ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ ಸಹ ಶುಂಠಿ ಬೆಲೆಯಲ್ಲಿ ವಿಪರೀತ ಏರಿಕೆ ಕಂಡಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ, ಅಂದರೆ 2022ರಲ್ಲಿ, 60 ಕೆಜಿ ಶುಂಠಿ ಚೀಲವು 2,000 ರಿಂದ 3,000 ರೂ.ವರೆಗೆ ಮಾರಾಟವಾಗುತ್ತಿತ್ತು. ಇದೀಗ 60 ಕೆಜಿ ಶುಂಠಿ ಚೀಲವು 11,000 ರೂ.ಗಳಿಗೆ ಮಾರಾಟವಾಗುತ್ತಿರುವುದು ಕಂಡುಬಂದಿದೆ.
ಮೈಸೂರು ಮತ್ತು ಮಲೆನಾಡು ಜಿಲ್ಲೆಗಳ ಶುಂಠಿ ಬೆಳೆಗಾರರಿಗೆ ಈ ಬೆಲೆ ಏರಿಕೆ ವರದಾನವಾಗಿ ಪರಿಣಮಿಸಿದೆ. ಕಳೆದ ಹಂಗಾಮಿನ ಕಟಾವಿನ ಲಾಭವನ್ನು ಬೆಳೆಗಾರರಿಗೆ ಈಗ ಪಡೆಯುತ್ತಿದ್ದಾರೆ. ಹೊಸದಾಗಿ ಕೊಯ್ಲು ಮಾಡಿದ ದಾಸ್ತಾನು ಕೂಡ ಮಾರುಕಟ್ಟೆಯಲ್ಲಿ ದಾಖಲೆಯ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಕೆಆರ್ಆರ್ಎಸ್ನ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಹುಣಸೂರು ತಾಲೂಕಿನ ಶುಂಠಿ ಬೆಳೆಗಾರ ಹೊಸೂರು ಕುಮಾರ್ ಅವರ ಪ್ರಕಾರ, ಶುಂಠಿ ಬೆಲೆಯಲ್ಲಿನ ಈ ಏರಿಕೆ ಕಳೆದ ದಶಕದಲ್ಲಿಯೇ ಅತ್ಯಧಿಕವಾಗಿದೆ. ಇದೊಂದು ಐತಿಹಾಸಿಕ ಮೈಲುಗಲ್ಲಾಗಿದೆ.
ಶುಂಠಿಯ ಬೆಲೆಗಳು ದಾಖಲೆಯ ಏರಿಕೆಯನ್ನು ಮುಟ್ಟುವುದರೊಂದಿಗೆ, ಶುಂಠಿಯ ಕಳ್ಳತನದ ವರದಿಗಳು ದೇಶಾದ್ಯಂತ ಕೇಳಿಬಂದಿವೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಕೇರಳ ಮತ್ತು ಕರ್ನಾಟಕದ ರೈತರು ಕಳ್ಳರ ಕಾಟವನ್ನು ಎದುರಿಸುತ್ತಿದ್ದಾರೆ. ಕರ್ನಾಟಕದ ರೈತರೊಬ್ಬರ ಹೊಲದಲ್ಲಿ 1.8 ಲಕ್ಷ ಮೌಲ್ಯದ ಶುಂಠಿ ಕಳ್ಳತನವಾಗಿದೆ. ಹೊರಳವಾಡಿಯ ಮತ್ತೊಬ್ಬ ರೈತ ತನ್ನ ಹೊಲದಲ್ಲಿ 10 ಸಾವಿರ ಮೌಲ್ಯದ ಶುಂಠಿ ಕಳ್ಳತನವಾಗಿರುವ ಬಗ್ಗೆ ಬಿಳಿಗೆರೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕಳ್ಳತನದಿಂದ ನಷ್ಟವನ್ನು ಭರಿಸಲಾಗದ ರೈತರು ತಮ್ಮ ಜಮೀನಿನಲ್ಲಿ ಸಿಸಿಟಿವಿಗಳನ್ನು ಅಳವಡಿಸುವ ಬಗ್ಗೆ ವರದಿಯಾಗಿದೆ.
2022 ರ ಆರ್ಥಿಕ ವರ್ಷದಲ್ಲಿ ಮಧ್ಯಪ್ರದೇಶವು ಭಾರತದಲ್ಲಿ ಅತಿ ಹೆಚ್ಚು ಶುಂಠಿಯನ್ನು ಉತ್ಪಾದಿಸುತ್ತದೆ ಎಂದು ವರದಿಯಾಗಿದೆ. ಅದರ ನಂತರ ಕರ್ನಾಟಕವು ಶುಂಠಿ ಬೆಲೆಯಲ್ಲಿ ಎರಡನೇ ಸ್ಥಾನದಲ್ಲಿದೆ.
-
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications