ಕರ್ನಾಟಕ ವಿಧಾನಸಭೆ ಚುನಾವಣೆ 2018 : ನಾಮಪತ್ರ ಸಲ್ಲಿಕೆ ಜೋರು
ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಚುರುಕುಗೊಂಡಿದೆ. ವಿವಿಧ ಜಿಲ್ಲೆಗಳಿಂದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನ ಬಹುತೇಕ ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಚುನಾವಣಾ ಕಣ ಮತ್ತಷ್ಟು ರಂಗೇರಿದೆ.
ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಬಹುತೇಕ ಅಭ್ಯರ್ಥಿಗಳು ತಮಗೆ ಇಷ್ಟವಾದ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ತಮ್ಮ ಬೆಂಬಲಿಗರೊಂದಿಗೆ ಮರವಣಿಗೆಯ ಮೂಲಕ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಡಿಕೆಶಿ, ರಮೇಶ್ ಕುಮಾರ್, ಮಂಜು ಸೇರಿ ಹಲವು ಕಾಂಗ್ರೆಸ್ಸಿಗರ ನಾಮಪತ್ರ
23ರಂದು ಎಚ್.ವೈ.ಮೇಟಿ ಮತ್ತೇ ಸಲ್ಲಿಕೆ
ಹಾಲಿ
ಶಾಸಕ
ಹಾಗೂ
ಮಾಜಿ
ಅಬಕಾರಿ
ಸಚಿವ
ಎಚ್.ವೈ.ಮೇಟಿ
ಅವರು
ಬಾಗಲಕೋಟೆ
ವಿಧಾನಸಭೆ
ಕ್ಷೇತ್ರಕ್ಕೆ
ಕಾಂಗ್ರೆಸ್
ಅಭ್ಯರ್ಥಿಯಾಗಿ
ಗುರುವಾರ
ನಾಮಪತ್ರ
ಸಲ್ಲಿಸಿದರು.
ನವನಗರದ
ಉಪವಿಭಾಗಾಧಿಕಾರಿಗಳ
ಕಚೇರಿಗೆ
ತಮ್ಮ
ಬೆಂಬಲಿಗರೊಂದಿಗೆ
ಆಗಮಿಸಿ
ಮೊದಲ
ನಾಮಪತ್ರ
ಸಲ್ಲಿಸಿದರು.
23ರಂದು ಮತ್ತೊಮ್ಮ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೇಟಿಯವರು ಭವ್ಯ ಮೆರವಣಿಗೆಯೊಂದಿಗೆ ಎರಡನೇ ಬಾರಿ ನಾಮಪತ್ರ ಸಲ್ಲಿಸಲಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ, ಬಿಟಿಡಿಎ ಅಧ್ಯಕ್ಷ ಎ.ಡಿ.ಮೋಕಾಶಿ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ಬಿ.ಸೌದಾಗರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ, ನಾಗರಾಜ ಹದ್ಲಿ, ನಿಂಗನಗೌಡ ಮತ್ತಿತರರು ಇದ್ದರು.
ಬೆಳಗಾವಿಯಲ್ಲಿ ಆನಂದ ಮಾಮನಿ, ಮೆಟಗುಡ್ಡ ಸಲ್ಲಿಕೆ
ಸವದತ್ತಿ
ಯಲ್ಲಮ್ಮ
ಕ್ಷೇತ್ರದ
ಹಾಲಿ
ಶಾಸಕ
ಆನಂದ
ಮಾಮನಿ
ಸ್ವಗೃಹದಿಂದ
ತಹಶಿಲ್ದಾರ
ಕಚೇರಿವರೆಗೂ
ಪಾದಯಾತ್ರೆ
ಮಾಡಿ
ನಾಮಪತ್ರ
ಸಲ್ಲಿಸಿದರೆ,
ಬಂಡಾಯ
ಅಭ್ಯರ್ಥಿಯಾಗಿ
ಮಾಜಿ
ಶಾಸಕ
ಜಗದೀಶ್
ಮೆಟಗುಡ್ಡ
ಚುನಾವಣಾಧಿಕಾರಿ
ಕೆ.
ದೊರೆಸ್ವಾಮಿ
ಅವರಿಗೆ
ನಾಮಪತ್ರ
ಸಲ್ಲಿಸಿದರು.
ಕೆಜೆಪಿ ಹಾಲಿ ಶಾಸಕ ಡಾ ವಿಶ್ವನಾಥ ಪಾಟೀಲ ಹಾಗೂ ಮೆಟಗುಡ್ಡ ನಡುವೆ ಟಿಕೆಟ್ ಗೆ ತೀವ್ರ ಪೈಪೋಟಿ ನಡೆದಿತ್ತು. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮೆಟಗುಡ್ಡ ಈ ಬಾರಿ ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ.
ರಾಯಚೂರಿನಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ
ತಹಶೀಲ್ದಾರ್ ಕಚೇರಿಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸನಗೌಡ ದದ್ದಲ್ ಚುನಾವಣಾಧಿಕಾರಿ ಎ.ಎಂ.ಪಾಟೀಲ್'ಗೆ ನಾಮಪತ್ರ ಸಲ್ಲಿಸಿದರು.
ಲಿಂಗಸುಗೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಲಿಂಗಸುಗೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ಮಾನಪ್ಪ ವಜ್ಜಲ್ ಚುನಾವಣಾಧಿಕಾರಿ ರೇಣುಕಾ ಪ್ರಸಾದ್'ಗೆ ನಾಮಪತ್ರ ಸಲ್ಲಿಸಿದರು.
ಲಿಂಗಸುಗೂರು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಎಸ್. ಹೂಲಗೇರಿ ಸಹಾಯಕ ಆಯುಕ್ತರ ಕಚೇರಿಯಲ್ಲಿ ಚುನಾವಣಾಧಿಕಾರಿ ರೇಣುಕಾ ಪ್ರಸಾದ್'ಗೆ ನಾಮಪತ್ರ ಸಲ್ಲಿಸಿದರು.
ಮಸ್ಕಿ ವಿಧಾನಸಭಾ ಮತಕ್ಷೇತ್ರಕ್ಕೆ ಲಿಂಗಸುಗೂರಿನ ಮಿನಿ ವಿಧಾನಸೌಧದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರತಾಪಗೌಡ ಪಾಟೀಲ್ ಚುನಾವಣಾಧಿಕಾರಿ ಡಾ.ಚೇತನಾ ಪಾಟೀಲ್'ಗೆ ನಾಮಪತ್ರ ಸಲ್ಲಿಸಿದರು.
ಸಿಂಧನೂರು ತಹಶೀಲ್ದಾರ್ ಕಚೇರಿಯಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ವೆಂಕಟರಾವ್ ನಾಡಗೌಡ ಚುನಾವಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿಗೆ ನಾಮಪತ್ರ ಸಲ್ಲಿಸಿದರು.
ಮಾನ್ವಿಯ
ತಹಶೀಲ್ದಾರ್
ಕಚೇರಿಯಲ್ಲಿ
ಮಾನ್ವಿ
ವಿಧಾನಸಭಾ
ಕ್ಷೇತ್ರಕ್ಕೆ
ಪಕ್ಷೇತರ
ಅಭ್ಯರ್ಥಿಯಾಗಿ
ಪ್ರೀತಿ
ಮೇತ್ರೆ
ಚುನಾವಣಾಧಿಕಾರಿ
ವ್ಹಿ.ಎಸ್.ಹಿರೇಮಠಗೆ
ನಾಮಪತ್ರ
ಸಲ್ಲಿಸಿದರು.
ಕಾಂಗ್ರೆಸ್
ಟಿಕೆಟ್
ಸಿಗದಿದ್ದಕ್ಕೆ
ಪಕ್ಷೇತರ
ಅಭ್ಯರ್ಥಿಯಾಗಿ
ಪ್ರೀತಿ
ಸ್ಪರ್ಧಿಸುತ್ತಿದ್ದಾರೆ.
ಹಿರಿಯೂರಿನಲ್ಲಿ ಕೆ. ಪೂರ್ಣಿಮ ಶ್ರೀನಿವಾಸ್ ಸಲ್ಲಿಕೆ
ಹಿರಿಯೂರು ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೆ. ಪೂರ್ಣಿಮ ಶ್ರೀನಿವಾಸ್ ಅವರು ಅಪಾರ ಅಭಿಮಾನಿಗಳೊಂದಿಗೆ ಮತ್ತು ಬಿಜೆಪಿ ಕಾರ್ಯಕರ್ತರೊಂದಿಗೆ ಗುರುವಾರ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮುನ್ನ ಶ್ರೀ ತೇರುಮಲ್ಲೇಶ್ವರ ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ಕಾರ್ಯಕರ್ತರೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತಲುಪಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನ್, ಪತಿ ಡಿ.ಟಿ. ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಚಂದ್ರಶೇಖರ್ , ತಾಲ್ಲೂಕು ಅಧ್ಯಕ್ಷ ದ್ಯಾಮಣ್ಣ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. .
ಸೊರಬದಲ್ಲಿ ಮಧುಬಂಗಾರಪ್ಪ
ಸೊರಬ
ವಿಧಾನಸಭಾ
ಕ್ಷೇತ್ರದ
ಜೆಡಿಎಸ್
ಅಭ್ಯರ್ಥಿಯಾಗಿ
ಶಾಸಕ
ಎಸ್.
ಮಧುಬಂಗಾರಪ್ಪ
ಗುರುವಾರ
ಪಟ್ಟಣದಲ್ಲಿ
ಸಹಸ್ರಾರು
ಅಭಿಮಾನಿಗಳು,
ಬೆಂಬಲಿಗರೊಂದಿಗೆ
ನಾಮಪತ್ರ
ಸಲ್ಲಿಸಿದರು.
ಇದಕ್ಕೂ
ಮುನ್ನ
ಪಟ್ಟಣದ
ಶ್ರೀರಂಗನಾಥ
ದೇವಸ್ಥಾನದಲ್ಲಿ
ಪೂಜೆ
ಸಲ್ಲಿಸಿ,
ಮುಖ್ಯ
ರಸ್ತೆಯಲ್ಲಿ
ತೆರೆದ
ವಾಹನದಲ್ಲಿ
ತೆರಳಿದ
ಅವರು,
ಬಂಗಾರಧಾಮದಲ್ಲಿ
ಬಹಿರಂಗ
ಸಭೆ
ನಡೆಸಿದರು.
20
ಸಾವಿರಕ್ಕೂ
ಹೆಚ್ಚು
ಕಾರ್ಯಕರ್ತರು
ಪಾಲ್ಗೊಂಡಿದ್ದು
ವಿಶೇಷವಾಗಿತ್ತು.
ಅನಿತಾ ಮಧುಬಂಗಾರಪ್ಪ, ಸುಜಾತ ತಿಲಕ್ಕುಮಾರ್, ಗೀತಾ ಶಿವರಾಜ್ ಕುಮಾರ್, ಪಕ್ಷದ ಮುಖಂಡರಾದ ಎಚ್. ಗಣಪತಿ, ಕೆ.ಪಿ. ರುದ್ರಗೌಡ, ಎಂ.ಡಿ. ಶೇಖರ್ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಈಶ್ವರಪ್ಪ, ಬಿಎಸ್ ವೈ, ಕಿಮ್ಮನೆ ಸಲ್ಲಿಕೆ
ಶಿವಮೊಗ್ಗ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಗುರುವಾರ ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆ ಕುಟುಂಬದವರೊಂದಿಗೆ ಕೋರ್ಪಲಯ್ಯ ಛತ್ರ ಬಳಿಯ ಶ್ರೀ ಗಾಯತ್ರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ನಂತರ ಅಶೋಕ ರಸ್ತೆಯಲ್ಲಿರುವ ಅಣ್ಣಂದಿರ ಮನೆಗೆ ಹೋಗಿ ಅತ್ತಿಗೆಯರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದರು. ನಂತರ ನೇರವಾಗಿ ಶ್ರೀ ರಾಮಣ್ಣ ಶ್ರೇಷ್ಠಿ ಪಾರ್ಕ್ ನ ಶ್ರೀ ಗಣಪತಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
ಇದೇ ವೇಳೆ ಕೊಡಲಿ ಶೃಂಗೇರಿ ಮಠದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಅವರು ಈಶ್ವರಪ್ಪರಿಗೆ ಆಶೀರ್ವದಿಸಿದರು. ಅಲ್ಲಿಂದ ತೆರೆದ ವಾಹನ ಏರಿ, ಸಾವಿರಾರು ಅಭಿಮಾನಿಗಳೊಂದಿಗೆ ಮಹಾನಗರ ಪಾಲಿಕೆಯಲ್ಲಿನ ಚುನಾವಣೆ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ಮಹಾದೇವ ಮುರುಗಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಕೆ.ಎಸ್. ಈಶ್ವರಪ್ಪ ಅವರ ನಾಮಪತ್ರಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ ಸೂಚಕರಾಗಿ ಹಾಗೂ ಲಕ್ಷ್ಮಣ್ ಅನುಮೋದಕರಾಗಿದ್ದಾರೆ.
ಶಿಕಾರಿಪುರದಲ್ಲಿ ಬಿ.ಎಸ್.ಯಡಿಯೂರಪ್ಪ ನಾಮಪತ್ರ ಸಲ್ಲಿಸಿದರು.
ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಟಿಕೆಟ್ ಸಿಗದಿರುವುದಕ್ಕೆ ತಹಶೀಲ್ದಾರ್ ಕಚೇರಿಯಲ್ಲಿ ಮಾನ್ವಿ ವಿಧಾನಸಭಾ ಮತ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಪ್ರೀತಿ ಮೇತ್ರೆ ಚುನಾವಣಾಧಿಕಾರಿ ವ್ಹಿ.ಎಸ್.ಹಿರೇಮಠಗೆ ನಾಮಪತ್ರ ಸಲ್ಲಿಸಿದರು.