ನಾಲ್ವರಿಗೆ ಮರುಜೀವ ಕೊಟ್ಟ ಭಟ್ಕಳದ ಯುವಕ
ಉಡುಪಿ, ಮಾರ್ಚ್ 23 : ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಅಂಗಾಂಗ ಸಾಗಣೆ ಮಾಡಲಾಗಿದೆ.
ಮಂಗಳವಾರ
ಸಂಜೆ
7.30ರ
ಸುಮಾರಿಗೆ
ಮಣಿಪಾಲದ
ಕೆಎಂಸಿ
ಆಸ್ಪತ್ರೆಯಿಂದ
ಅಂಗಾಂಗಗಳನ್ನು
ಹೊತ್ತ
ಅಂಬ್ಯುಲೆನ್ಸ್
ಗ್ರೀನ್
ಕಾರಿಡಾರ್
ವ್ಯವಸ್ಥೆ
ಮೂಲಕ
ಸಿಗ್ನಲ್
ಫ್ರೀ
ಮಾರ್ಗದಲ್ಲಿ
ಮಂಗಳೂರು
ಬಜ್ಪೆ
ವಿಮಾನ
ನಿಲ್ದಾಣ
ತಲುಪಿತು.
[8
ಜನರ
ಬದುಕಿಗೆ
ಆಶಾಕಿರಣವಾದ
ಬೆಂಗಳೂರು
ಯುವಕ]
ಮಂಗಳೂರಿನಿಂದ ಜೆಟ್ ಏರ್ ವೇಸ್ ವಿಮಾನದ ಮೂಲಕ ಬೆಂಗಳೂರಿಗೆ ಅಂಗಾಗಳನ್ನು ಸಾಗಿಸಲಾಯಿತು. ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಅಂಗಾಂಗಗಳನ್ನು ಕಸಿ ಮಾಡಲಾಗಿದೆ. [ಅಂಗಾಂಗ ದಾನ ಮಾಡಿ ನಾಲ್ವರಿಗೆ ಮರು ಜೀವ ನೀಡಿದರು]
30 ವರ್ಷದ ಪುರುಷೋತ್ತಮ್ ನಾಯಕ್ ಅವರ ಎರಡು ಕಿಡ್ನಿ, ಲೀವರ್ ಮತ್ತು ಹೃದಯ ಕವಾಟಗಳನ್ನು ಕುಟುಂಬದವರು ದಾನ ಮಾಡಿದ್ದಾರೆ. ಲೀವರ್ ಮತ್ತು ಹೃದಯ ಕವಾಟಗಳನ್ನು ಬೆಂಗಳೂರಿಗೆ ಸಾಗಿಸಲಾಗಿದ್ದು, ಕಿಡ್ನಿಗಳನ್ನು ಕೆಎಂಸಿ ಮತ್ತು ಮಂಗಳೂರಿನ ಮತ್ತೊಂದು ಆಸ್ಪತ್ರೆಯಲ್ಲಿನ ಇಬ್ಬರು ವ್ಯಕ್ತಿಗಳಿಗೆ ಕಸಿ ಮಾಡಲಾಗಿದೆ. [ಅಪಘಾತದಲ್ಲಿ ಮಡಿದ ಜೀವನ್ ಫರ್ನಾಂಡೀಸ್ ಆತ್ಮ ಅಮರ]
ಮಾರ್ಚ್ 14ರಂದು ಅಪಘಾತ : ಪುರುಷೋತ್ತಮ್ ನಾಯಕ್ ಮೂಲತಃ ಭಟ್ಕಳದವರು. ಮಾರ್ಚ್ 14ರಂದು ರಾತ್ರಿ 8.30ರ ಸುಮಾರಿಗೆ ಬೈಕ್ನಲ್ಲಿ ಮನೆಗೆ ವಾಪಸ್ ಆಗುತ್ತಿದ್ದಾಗ, ಗೂಡ್ಸ್ ಆಟೋ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು.
ಚಿಕಿತ್ಸೆಗಾಗಿ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಕೋಮಾ ಸ್ಥಿತಿಗೆ ಜಾರಿದ್ದರು. ಮಾರ್ಚ್ 21ರಂದು ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದರು. ಅಂಗಾಂಗಳನ್ನು ದಾನ ಮಾಡುವಂತೆ ಕುಟುಂಬದವರಿಗೆ ಮನವಿ ಮಾಡಿದ್ದರು.
ವೈದ್ಯರ ಮನವಿಯಂತೆ ಕುಟುಂಬದವರು ಎರಡು ಕಿಡ್ನಿ, ಲಿವರ್, ಹೃದಯ ಕವಾಟಗಳನ್ನು ದಾನ ಮಾಡಿದ್ದಾರೆ. ಕಣ್ಣುಗಳನ್ನು ದಾನ ಮಾಡಲು ಕುಟುಂಬದವರು ಸಿದ್ಧವಾಗಿದ್ದರು. ಆದರೆ, ಅಪಘಾತದಲ್ಲಿ ಕಣ್ಣಿಗೆ ಗಾಯಗಳಾಗಿದ್ದರಿಂದ ದಾನ ಮಾಡಲು ಸಾಧ್ಯವಾಗಲಿಲ್ಲ.
ಉಡುಪಿ ಜಿಲ್ಲಾಧಿಕಾರಿ ಆರ್.ವಿಶಾಲ್ ಅವರು ಅಂಗಾಂಗಗಳನ್ನು ದಾನ ಮಾಡಿ ಹಿನ್ನೆಲೆಯಲ್ಲಿ ಆಸ್ಪತ್ರೆಯ ಬಿಲ್ನಲ್ಲಿ ರಿಯಾಯಿತಿ ನೀಡುವಂತೆ ಮನವಿ ಮಾಡಿದ್ದರು. ಪುರುಷೋತ್ತಮ್ ಅವರ ಚಿಕಿತ್ಸೆಗೆ 1 ಲಕ್ಷ ರೂ. ವೆಚ್ಚವಾಗಿತ್ತು. ಕುಟುಂಬದವರು 38 ಸಾವಿರ ರೂ. ಪಾವತಿ ಮಾಡಿದ್ದರು. ಉಳಿದ ಮೊತ್ತವನ್ನು ಪಾವತಿ ಮಾಡುವುದು ಬೇಡ ಎಂದು ಆಸ್ಪತ್ರೆ ಕುಟುಂಬದವರಿಗೆ ತಿಳಿಸಿದೆ.