ಬಾಳಿಗೊಂದು ನಂಬಿಕೆ: ಶಾಲಾ ಮಕ್ಕಳಿಗಾಗಿ ಒಂದು ವಿಶಿಷ್ಟ ಸ್ಪರ್ಧೆ
ಬೆಂಗಳೂರು, ಆಗಸ್ಟ್ 3: ಸಮಾಜ ಸೇವಕರ ಸಮಿತಿಯು ಹಲವು ವರ್ಷಗಳಿಂದ ಡಿವಿಜಿಯವರ ಸಾಹಿತ್ಯ ಪ್ರಚಾರಕ್ಕೆ ಸಂಬಂಧಪಟ್ಟಂತೆ ವಿಶಿಷ್ಟವಾದ ಕಾರ್ಯಕ್ರಮಗಳನ್ನು ಮತ್ತು ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿದೆ.
ಈ ವರ್ಷವೂ ಸಹ ಅಂತಹುದೇ ಒಂದು ಕ್ರಿಯಾತ್ಮಕ ಸ್ಪರ್ಧೆಯನ್ನು ಕರ್ನಾಟಕದಲ್ಲಿರುವ ಶಾಲಾ ಮಕ್ಕಳಿಗಾಗಿ ಏರ್ಪಡಿಸಲಾಗುತ್ತಿದೆ.
ಸ್ಪರ್ಧೆಯ ಉದ್ದೇಶ ಡಿವಿಜಿಯವರ ಸಾಹಿತ್ಯವನ್ನು ಯುವಜನಾಂಗಕ್ಕೆ ಪರಿಚಯಿಸುವುದು ಮತ್ತು ಅವರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸುವುದು.

ಸ್ಪರ್ಧೆಯ ನಿಯಮಗಳು ಹೀಗಿರುತ್ತವೆ.
1. ತರಗತಿ 5 ರಿಂದ ತರಗತಿ 10 ರವರೆಗಿನ ಎಲ್ಲ ಮಕ್ಕಳು ಭಾಗವಹಿಸಬಹುದು.
2. ಡಿವಿಜಿಯವರ ಸಮಗ್ರ ಸಾಹಿತ್ಯದ ಪರಿಚಯವನ್ನು A4 ಸೈಜಿನ 4 ಪುಟಗಳು ಮೀರದಂತೆ ಬರೆಯುವುದು.
3. ಈ ಲೇಖನ ಬರೆಯಲು ಸಹಾಯ ಪಡೆದುಕೊಂಡ ಪುಸ್ತಕಗಳ ಅಥವಾ ಗುರು ಹಿರಿಯರ ಹೆಸರನ್ನು ನಮೂದಿಸುವುದನ್ನು ಮರೆಯಬೇಡಿ. ಇದು ತುಂಬಾ ಅವಶ್ಯಕ.
4. ನಿಮ್ಮ ಲೇಖನವನ್ನು 15 ದಿನಗಳ ಒಳಗೆ ಕೆಳಗಿನ ವಿಳಾಸಕ್ಕೆ ಕೋರಿಯರ್ ಅಥವಾ ಅಂಚೆ ಮೂಲಕ ಕಳುಹಿಸತಕ್ಕದ್ದು.
5. ನಿಮ್ಮ ಅಂಚೆ ವಿಳಾಸ ಮತ್ತು ಮೊಬೈಲ್ ನಂಬರನ್ನು ಖಡ್ಡಾಯವಾಗಿ ನಮೂದಿಸಿ.
ಲೇಖನ ತಲುಪಬೇಕಾದ ವಿಳಾಸ: ಸಮಾಜ ಸೇವಕರ ಸಮಿತಿ, 171, ಸುಬ್ಬ ರಾಮ್ ಚೆಟ್ಟಿ ರಸ್ತೆ, ನೆಟ್ಟಕಲ್ಲಪ್ಪ ಬಸ್ ನಿಲ್ದಾಣದ ಹಿಂಭಾಗ, ಬಸವನಗುಡಿ -560004
ಬಹುಮಾನದ ವಿವರಗಳು: ಭಾಗವಹಿಸುವ ಎಲ್ಲ ಅರ್ಹ ಲೇಖನಗಳಿಗೆ ಡಿವಿಜಿಯವರ "ಬಾಳಿಗೊಂದು ನಂಬಿಕೆ" ಪುಸ್ತಕವನ್ನು ನೀಡಲಾಗುವುದು. ಉತ್ತಮವಾದ ಐದು ಬರಹಗಳಿಗೆ ಕನ್ನಡದ ವಿಶಿಷ್ಟ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications